ಶನಿವಾರ, ಮಾರ್ಚ್ 3, 2018

ವಿದ್ಯಾರ್ಥಿ ವೇತನ ಲಿಂಕಗಳು.









ವಿದ್ಯಾರ್ಥಿ ವೇತನ ಪಡೆಯಲು ಇಚ್ಛಿಸುವ ಬಡ ವಿದ್ಯಾರ್ಥಿಗಳಿಗೆ ಇಲ್ಲಿದೆ ವಿದ್ಯಾರ್ಥಿ ವೇತನದ ಎಲ್ಲ ಲಿಂಕಗಳು:


                           ನಿಮಗೆ ಪರಿಚಯವಿರುವ ಬಡ ವಿದ್ಯಾರ್ಥಿಗಳಿಗೆ ಈ  ಕೆಳಗಿನ ವಿದ್ಯಾರ್ಥಿ ವೇತನಗಳ ಬಗ್ಗೆ ದಯವಿಟ್ಟು ಮಾಹಿತಿ ನೀಡಿ.. ಯಾಕೆಂದರೆ  ಮುಂದಿನ ತಿಂಗಳಲ್ಲಿ ಎಲ್ಲಾ ವಿದ್ಯಾರ್ಥಿ ವೇತನಗಳ ಅರ್ಜಿಗಳನ್ನು ಕರೆಯಲಾಗುತ್ತದೆ.*

1) ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ -

www.karepass.cgg.gov.in

೨) ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ   ವಿದ್ಯಾರ್ಥಿಗಳಿಗೆ 

www.sw.kar.nic.in

೩) ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ -www.gokdom.kar.nic.in


೪) ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯದ ವಿದ್ಯಾರ್ಥಿ ವೇತನ (Ministry of Human Resource Development)  ಪ್ರತಿ ವರ್ಷವು ಡಿಗ್ರಿ ಪ್ರವೇಶ ಪಡೆಯುವ  ಎಲ್ಲಾ ಜಾತಿಯಾ ಬಡ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ - 

www.kar.nic.in/pue

೫) ನಮ್ಮ ರಾಜ್ಯದ ಹೆಮ್ಮೆಯ ಐ.ಟಿ ಕಂಪನಿ ಇನಪೋಸ್ಸಿಸ್ ನೀಡುವ ವಿದ್ಯಾರ್ಥಿ ವೇತನ - www.vidyaposhak.org


೬)ಕಿತ್ತೂರು ರಾಣಿ ಚೆನ್ನಮ್ಮ ವಿದ್ಯಾರ್ಥಿ ವೇತನ - 

www.kar.nic.in/pue/

೭) ದೀರುಬಾಯಿ ಅಂಬಾನಿ ವಿದ್ಯಾರ್ಥಿ ವೇತನ ಅಂಗವಿಕಲ ವಿದ್ಯಾರ್ಥಿಗಳಿಗೆ - 

www.kar.nic.in/pue

೮) ಅಂಬೇಡ್ಕರ್ ನ್ಯಾಶನಲ್ ಮೆರಿಟ್ ಅರ್ವಾಡ್ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ - 

www.kar.nic.in/pue

೯) ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ಮೂಲ ವಿಜ್ಞಾನ ವಿಷಯದಲ್ಲಿ ಉನ್ನತ ಶಿಕ್ಷಣ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ (Inspire Scholarship) - 

www. kar.nic.in/pue

೧೦) ಮೆರಿಟ್ ಸ್ಕಾಲರಶಿಪ್ - ದ್ವಿತೀಯ ಪದವಿ ಪೂರ್ವ ಪರೀಕ್ಷೆಯಲ್ಲಿ ಶೇ.೮೦ ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ಬಡ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ(ಇಂಜಿನಿಯರಿಂಗ್, ವೈದ್ಯಕೀಯ, ಕೃಷಿ) ಶುಲ್ಕವನ್ನು ಸರ್ಕಾರ ನೀಡುತ್ತದೆ – 

www. kar.nic.in/pue

೧೧) ನಮ್ಮ ರಾಜ್ಯದ ಹೆಮ್ಮೆಯ ಇನ್ನೊಂದು ಐ.ಟಿ ಕಂಪನಿ  ವೀಪ್ರೊ ಅವರ  ಅಜೀಮ್ ಪ್ರೇಮಜೀ ಫೌಂಡೇಷನ್ -www.azimpremjifoundation.org


12. *ವಿದ್ಯಸಿರಿ* *ಮತ್ತು ಶುಲ್ಕ* *ವಿನಾಯಿತಿ*

http://backwardclasses.kar.nic.in/BCWD/Website/backwardclassesMain.html 

    http://backwardclasses.kar.nic.in/BCWD/Website/Educational_Scholarships.html

    Information ::

   http://www.scholarshipx.in/2015/10/karnataka-scholarship-onlline-last-date.html

13. *ಸರ್ಕಾರದ* *ಧನಸಹಾಯಗಳ* *ವೆಬ್ ವಿಳಾಸ*


http://karepass.cgg.gov.in/ 

14. *ಜಿಂದಾಲ್ scholarship*


 http://www.sitaramjindalfoundation.org/scholarships.php 

15. *B.L ಹೇಮವತಿ ಧನಸಹಾಯ*


 http://www.blhtrust.org/schpro.html 

16. *ಕೇಂದ್ರ ಸರ್ಕಾರದ ಧನಸಹಾಯಗಳು*


Central Govt Scholarship

     http://mhrd.gov.in/ 

17.  *Indian Oil Scholarship*

     https://www.iocl.com/AboutUs/AcademicScholarships.   


*ದಯವಿಟ್ಟು Share ಮಾಡುವುದರ ಮೂಲಕ ವಿದ್ಯಾರ್ಥಿಗಳಿಗೆ ಸಹಾಯ ಮಾಡಿ.*

ಸರಸ್ವತಿ ಸಮ್ಮಾನ್ ಪುರಸ್ಕಾರ


ಸರಸ್ವತಿ ಸಮ್ಮಾನ್ ಪುರಸ್ಕಾರ 


ಸರಸ್ವತಿ ಸಮ್ಮಾನ್ ಇದು ಭಾರತೀಯ ಭಾಷೆಗಳಲ್ಲಿ ಬರೆಯುವ ಶ್ರೇಷ್ಠ ಗದ್ಯ ಮತ್ತು ಪದ್ಯ ಪ್ರಕಾರಕ್ಕೆ ಕೊಡಮಾಡುವ ವಾರ್ಷಿಕ ಪ್ರಶಸ್ತಿ. ಇದನ್ನು ವಿದ್ಯೆಯ ದೇವಿಯಾಗಿರುವ ಸರಸ್ವತಿಯ ಹೆಸರಿನಲ್ಲಿ ಸ್ಥಾಪಿತವಾಗಿರುತ್ತದೆ. ಇದು ಸಾಹಿತ್ಯದ ಒಂದು ಉನ್ನತ ಪ್ರಶಸ್ತಿಯಾಗಿದೆ. ಈ ಪ್ರಶಸ್ತಿಯು ೫ಲಕ್ಷ ರೂಪಾಯಿ ನಗದನ್ನು ಹೊಂದಿದೆ. ಕೆ. ಕೆ. ಬಿರ್ಲಾ ಪ್ರತಿಷ್ಥಾನವು ಈ ಪ್ರಶಸ್ತಿಯನ್ನು ೧೯೯೧ರಲ್ಲಿ ಸ್ಥಾಪಿಸಿತು.


1991ರಿಂದ 2017 ರವರೆಗೆ ಗೌರವ ಪುರಸ್ಕೃತರು:

* *2016: ಮಹಾಬಲೇಶ್ವರ ಸೇಯ್ಲ್ - "ಹಾಥನ್" (ಕಾದಂಬರಿ) - ಕೊಂಕಣಿ*

*  *ಪದ್ಮ ಸಚ್ದೇವ್ - "ಚಿಟ್-ಚೆಟೆ" (ಆಟೋಬಯಾಗ್ರಫಿ) - ಡೋಗ್ರಿ*

* *2014: ವೀರಪ್ಪ ಮೊಯ್ಲಿ - "ರಾಮಾಯಣ ಮಹನ್ವೇಷನ್" (ಕವಿತೆ) - ಕನ್ನಡ*

* *2013: ಗೋವಿಂದ ಮಿಶ್ರಾ - "ಧುಲ್ ಪೌಡೋ ಪರ್" (ಕಾದಂಬರಿ) - ಹಿಂದಿ*

* *2012: ಸುಗತ ಕುಮಾರಿ - "ಮನಲೆಝುತು" (ಕವನ ಸಂಗ್ರಹ) - ಮಲೆಯಾಳಂ*

* *2011: ಎ. ಎ. ಮನವಲನ್ - "ಇರಾಮಾ ಕಥೈಮ್ ಇರಮಯಕಲ್ಲುಂ" - ತಮಿಳು*

* *2010: ಎಸ್. ಎಲ್. ಭೈರಪ್ಪ - "ಮಂದ್ರ" - ಕನ್ನಡ*

* *2009: ಸುರ್ಜಿತ್ ಪಾತಾರ್ - "ಲಫ್ಜನ್ ಡಿ ದರ್ಗಾ" - ಪಂಜಾಬಿ*

* *2008: ಲಕ್ಷ್ಮಿ ನಂದನ್ ಬೋರಾ - "ಕಯಕಲ್ಪ" (ಕಾದಂಬರಿ) - ಅಸ್ಸಾಮಿ*

* *2007: ನಯೆರ್ ಮಸೂದ್ - "ಟಾವೋಸ್ ಚಾಮನ್ ಕಿ ಮೈನಾ" (ಸಣ್ಣ ಕಥೆಗಳ ಸಂಗ್ರಹ) - ಉರ್ದು*

* *2006: ಜಗನ್ನಾಥ್ ಪ್ರಸಾದ್ ದಾಸ್ - "ಪರಿಕಾರಿಮಾ" (ಕವನ ಸಂಗ್ರಹ) - ಒರಿಯಾ*

* *2005: ಕೆ. ಅಯ್ಯಪ್ಪ ಪಾಣಿಕರ್ - "ಅಯ್ಯಪ್ಪ ಪಣಿಕಾರ್ಡು ಕೃತಿಕಳ್" (ಕವನ ಸಂಗ್ರಹ) - ಮಲಯಾಳಂ*

* *2004: ಸುನೀಲ್ ಗಂಗೋಪಾಧ್ಯಾಯ್ - "ಪ್ರತಮ್ ಅಲೋ" (ಕಾದಂಬರಿ) - ಬೆಂಗಾಲಿ*

* *2003: ಗೋವಿಂದ ಚಂದ್ರ ಪಾಂಡೆ - "ಭಾಗಿರಥಿ" (ಕವನ ಸಂಗ್ರಹ) - ಸಂಸ್ಕೃತ*

* *2002: ಮಹೇಶ್ ಎಲ್ಕುಂಚ್ವರ್ - "ಯುಗಾಂಟ್" (ಪ್ಲೇ) - ಮರಾಠಿ*

* *2001: ದಲಿಪ್ ಕೌರ್ ತಿವಾನಾ - "ಕಥಾ ಕಹೋ ಉರ್ವಾಶಿ" (ಕಾದಂಬರಿ) - ಪಂಜಾಬಿ*

* *2000: ಮನೋಜ್ ದಾಸ್ - "ಅಮೃತ ಫಾಲಾ" (ಕಾದಂಬರಿ) - ಒರಿಯಾ*

* *1999: ಇಂದಿರಾ ಪಾರ್ಥಸಾರಥಿ - "ರಾಮನುಜರ್" (ಪ್ಲೇ) - ತಮಿಳು*

* *1998: ಶಂಖ ಘೋಷ್ - "ಗಂಧರ್ಬಾ ಕಬಿತಾ ಗುಚ" (ಕವನ ಸಂಗ್ರಹ) - ಬಂಗಾಳಿ*

* *1997: ಮನುಭಾಯ್ ಪಾಂಚಲಿ - "ಕುರುಕ್ಷೇತ್ರ" - ಗುಜರಾತಿ*

* *1996: ಶಾಮ್ಸುರ್ ರಹಮಾನ್ ಫರುಖಿ - "ಷೆರ್-ಇ-ಶೋರ್-ಆಂಗೆಜ್" - ಉರ್ದು*

* *1995: ಬಾಲಮಣಿ ಅಮ್ಮ - "ನಿವೇದ್ಯಾಮ್" (ಕವನ ಸಂಗ್ರಹ) - ಮಲೆಯಾಳಂ*

* *1994: ಹರಭಜನ್ ಸಿಂಗ್ - "ರುಕ್ ತೆ ರಿಷಿ" (ಕವನ ಸಂಗ್ರಹ) - ಪಂಜಾಬಿ*

* *1993: ವಿಜಯ್ ತೆಂಡೂಲ್ಕರ್ - "ಕನ್ಯಾಡಾನ್" (ಪ್ಲೇ) - ಮರಾಠಿ*

* *1992: ರಾಮಕಾಂತ್ ರಾಥ್ - "ಶ್ರೀ ರಾಧಾ" (ಕವನ) - ಒರಿಯಾ*

* *1991: ಹರಿವಂಶ್ ರಾಯ್ ಬಚ್ಚನ್ - ನಾಲ್ಕು ಸಂಪುಟಗಳಲ್ಲಿ ಆತ್ಮಚರಿತ್ರೆ (ಆಟೋಬಯಾಗ್ರಫಿ) - ಹಿಂದಿ*
       
ಸಂಗ್ರಹ: ಆರುಶಿ (ಸಹ ಶಿಕ್ಷಕರು)
ಎಮ್.ಪಿ.ಕೆ.ಬಿ.ಎಸ್.ದೇ.ಹಿ
 ‌‌

ಶುಕ್ರವಾರ, ಮಾರ್ಚ್ 2, 2018

ಜಗತ್ತಿನ ಕ್ರೀಡಾಂಗಣಗಳು


*ಜಗತ್ತಿನ ಕ್ರೀಡಾಂಗಣಗಳು*

  ===========
*ಭಾರತದಲ್ಲಿ ಕ್ರೀಡಾಂಗಣಗಳು*
     *************
* *ಬರಾಬಾಟಿ ಕ್ರೀಡಾಂಗಣ: ಕಟಕ್*
* *ಬರ್ಕತುಲ್ಲಾ ಖಾನ್ ಕ್ರೀಡಾಂಗಣ: ಜೋಧ್ಪುರ್*
* *ಬ್ರಬೌರ್ನೆ ಕ್ರೀಡಾಂಗಣ: ಮುಂಬೈ*
* *ಈಡನ್ ಗಾರ್ಡನ್ಸ್: ಕೊಲ್ಕತ್ತಾ*
* *ಫಿರೋಜ್ ಶಾ ಕೋಟ್ಲಾ: ದೆಹಲಿ*
* *ಗಾಂಧಿ ಕ್ರೀಡಾಂಗಣ: ಜಲಂಧರ್*
* *ಗ್ರೀನ್ ಪಾರ್ಕ್: ಕಾನ್ಪುರ್*
* *ಇಂದಿರಾ ಗಾಂಧಿ ಕ್ರೀಡಾಂಗಣ: ವಿಜಯವಾಡಾ*
* *ರಾಜೀವ್ ಗಾಂಧಿ ಪೋರ್ಟ್ ಸಿಲ್ವರ್ ಜುಬಿಲೀ*
 * *ಕ್ರೀಡಾಂಗಣ: ವಿಶಾಖಪಟ್ಟಣಂ*
* *ಜವಾಹರಲಾಲ್ ನೆಹರು ಕ್ರೀಡಾಂಗಣ: ನವ ದೆಹಲಿ*
* *ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣ: ಹೈದರಾಬಾದ್*
* *ಎಂ. ಚಿನ್ನಸ್ವಾಮಿ ಕ್ರೀಡಾಂಗಣ: ಬೆಂಗಳೂರು*
* *ಎಂ.ಎ ಚಿದಂಬರಂ ಕ್ರೀಡಾಂಗಣ: ಚೆನ್ನೈ*
* *ಮಾಧವರಾವ್ ಸಿಂಧಿಯಾ ಕ್ರಿಕೆಟ್ ಮೈದಾನ: ರಾಜ್ಕೋಟ್*
* *ಮೊಯಿನ್-ಉಲ್-ಹಕ್ ಕ್ರೀಡಾಂಗಣ: ಪಾಟ್ನಾ*
* *ಸರ್ದಾರ್ ವಲ್ಲಭಾಯಿ ಪಟೇಲ್ ಮೋತೆರಾ*
* *ಕ್ರೀಡಾಂಗಣ: ಅಹಮದಾಬಾದ್*
* *ಸವಾಯಿ ಮಾನ್ಸಿಂಗ್ ಕ್ರೀಡಾಂಗಣ: ಜೈಪುರ*
* *ವಿದರ್ಭ ಸಿಎ ಮೈದಾನ: ನಾಗಪುರ*
* *ವಾಂಖೇಡೆ ಕ್ರೀಡಾಂಗಣ: ಮುಂಬೈ*
=============

*ಆಸ್ಟ್ರೇಲಿಯಾದಲ್ಲಿನ ಕ್ರೀಡಾಂಗಣಗಳು*

       ************
* *ಅಡಿಲೇಡ್ ಓವಲ್: ಅಡಿಲೇಡ್*
* *ಬುಂಡಬರ್ಗ್ ರಮ್ ಕ್ರೀಡಾಂಗಣ: ಕೈರ್ನ್ಸ್*
* *ಟೆಲ್ಸ್ಟ್ರಾ ಡೋಮ್: ಮೆಲ್ಬರ್ನ್*
* *ಮನುಕಾ ಓವಲ್: ಕ್ಯಾನ್ಬೆರಾ*
* *ಮಾರರಾ ಕ್ರಿಕೆಟ್ ಮೈದಾನ: ಡಾರ್ವಿನ್*
* *ಮೆಲ್ಬರ್ನ್ ಕ್ರಿಕೆಟ್ ಮೈದಾನ: ಮೆಲ್ಬರ್ನ್*
* *ಸಿಡ್ನಿ ಕ್ರಿಕೆಟ್ ಮೈದಾನ: ಸಿಡ್ನಿ*
* *ಡಬ್ಲು.ಎ.ಸಿ.ಎ. ಗ್ರೌಂಡ್: ಪರ್ತ್*
=============

*ಬಾಂಗ್ಲಾದೇಶದ ಕ್ರೀಡಾಂಗಣಗಳು*

************
* *ಬಂಗಾಬಂದ ರಾಷ್ಟ್ರೀಯ ಕ್ರೀಡಾಂಗಣ: ಢಾಕಾ*
* *ಚಿತ್ತಗಾಂಗ್ ಕ್ರೀಡಾಂಗಣ: ಚಿತ್ತಗಾಂಗ್*
=============

*ಇಂಗ್ಲೆಂಡ್ನಲ್ಲಿ ಕ್ರೀಡಾಂಗಣಗಳು*

       *********
* *ಎಡ್ಜ್ಬಾಸ್ಟನ್:*
*ಬರ್ಮಿಂಗ್ಹ್ಯಾಮ್*
* *ಹೆಡಿಂಗ್ಲೆ: ಲೀಡ್ಸ್*
* *ಲಾರ್ಡ್ಸ್: ಲಂಡನ್*
* *ಓಲ್ಡ್ ಟ್ರಾಫರ್ಡ್: ಮ್ಯಾಂಚೆಸ್ಟರ್*
* *ಸೋಫಿಯಾ ಗಾರ್ಡನ್ಸ್: ಕಾರ್ಡಿಫ್*
* *ಸೇಂಟ್ ಲಾರೆನ್ಸ್ ಗ್ರೌಂಡ್: ಕ್ಯಾಂಟರ್ಬರಿ*
* *ಬ್ರಿಟ್ ಓವಲ್: ಲಂಡನ್*
* *ಟ್ರೆಂಟ್ ಬ್ರಿಜ್:* *ನಾಟಿಂಗ್ಹ್ಯಾಮ್*
==============

*ನ್ಯೂಜಿಲೆಂಡ್ನಲ್ಲಿ ಕ್ರೀಡಾಂಗಣಗಳು*

**********
* *ಬೇಸಿನ್ ರಿಸರ್ವ್: ವೆಲ್ಲಿಂಗ್ಟನ್*
* *ಈಡನ್ ಪಾರ್ಕ್: ಆಕ್ಲೆಂಡ್*
* *ಜೇಡ್ ಕ್ರೀಡಾಂಗಣ: ಕ್ರೈಸ್ಟ್ಚರ್ಚ್*
* *ಜಾನ್ ಡೇವಿಸ್ ಓವಲ್: ಕ್ವೀನ್ಸ್ಟೌನ್*
* *ಮ್ಯಾಕ್ಲೀನ್ ಪಾರ್ಕ್: ನೇಪಿಯರ್*
=========

*ಪಾಕಿಸ್ತಾನದ ಕ್ರೀಡಾಂಗಣಗಳು* 

       ***********
* *ಅರ್ಬಬ್ ನಿಯಾಝ್ ಕ್ರೀಡಾಂಗಣ: ಪೆಶಾವರ್*
* *ಆಯುಬ್ ರಾಷ್ಟ್ರೀಯ ಕ್ರೀಡಾಂಗಣ: ಕ್ವೆಟ್ಟಾ*
* *ಗಡ್ಡಾಫಿ ಕ್ರೀಡಾಂಗಣ: ಲಾಹೋರ್*
==========

*ವೆಸ್ಟ್ ಇಂಡೀಸ್ನಲ್ಲಿ ಕ್ರೀಡಾಂಗಣಗಳು*

***********
* *ಸಬಿನ ಪಾರ್ಕ್ ಕಿಂಗ್ಸ್ಟನ್: ಜಮೈಕಾ*
* *ಆಂಟಿಗುವಾ ರಿಕ್ರಿಯೇಶನ್ ಗ್ರೌಂಡ್ ಸೇಂಟ್ ಜಾನ್ಸ್: ಆಂಟಿಗುವಾ*
* *ಗಯಾನಾ ಕ್ರಿಕೆಟ್ ಸ್ಟೇಡಿಯಂ ಜಾರ್ಜ್ಟೌನ್: ಗಯಾನಾ*
* *ಕೆನ್ಸಿಂಗ್ಟನ್ ಓವಲ್ ಬ್ರಿಡ್ಜ್ಟೌನ್: ಬಾರ್ಬಡೋಸ್*
* *ಮಿಂಡೂ ಫಿಲಿಪ್ ಪಾರ್ಕ್ Castries: ಸೇಂಟ್ ಲೂಸಿಯಾ*
* *ಅಲ್ಬಿಯನ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಬರ್ಬೀಸ್: ಗಯಾನಾ*
===========

* *ಶ್ರೀಲಂಕಾದ ಕ್ರೀಡಾಂಗಣಗಳು*

        *********
* *ಕೊಲಂಬೊ ಕ್ರಿಕೆಟ್ ಕ್ಲಬ್ ಗ್ರೌಂಡ್: ಕೊಲಂಬೊ*
* *ಗಲ್ಲಿ ಅಂತರಾಷ್ಟ್ರೀಯ ಕ್ರೀಡಾಂಗಣ: ಗಲ್ಲಿ*
* *ಪಿ.ಸಾರವಣಟ್ಟು ಕ್ರೀಡಾಂಗಣ: ಕೊಲಂಬೊ*
* *ಆರ್.ಪ್ರೆಮಾದಾಸ ಕ್ರೀಡಾಂಗಣ: ಕೊಲಂಬೊ*
* *ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ ಗ್ರೌಂಡ್-ಕೊಲಂಬೊ*
==============

*ದಕ್ಷಿಣ ಆಫ್ರಿಕಾದಲ್ಲಿ ಕ್ರೀಡಾಂಗಣಗಳು*

    **********
* *ಕಿಂಗ್ಸ್ಮೀಡ್: ಡರ್ಬನ್*
* *ಹೊಸ ವಾಂಡರರ್ಸ್ ಕ್ರೀಡಾಂಗಣ: ಜೋಹಾನ್ಸ್ಬರ್ಗ್*
* *ನ್ಯೂಲ್ಯಾಂಡ್ಸ್: ಕೇಪ್ ಟೌನ್*
* *ಸೇಂಟ್ ಜಾರ್ಜ್ಸ್ ಪಾರ್ಕ್: ಪೋರ್ಟ್ ಎಲಿಜಬೆತ್*
* *ಸೆಂಚುರಿಯನ್ ಸೂಪರ್ ಸ್ಪೋರ್ಟ್ ಪಾರ್ಕ್: ಪ್ರಿಟೋರಿಯಾ*
===============

*ಜಿಂಬಾಬ್ವೆ ಕ್ರೀಡಾಂಗಣಗಳು*

      ***********
* *ಬುಲಾವೇಯೋ ಅಥ್ಲೆಟಿಕ್ ಕ್ಲಬ್: ಬುಲಾವೇಯೋ*
* *ಹರಾರೆ ಸ್ಪೋರ್ಟ್ಸ್ ಕ್ಲಬ್: ಹರಾರೆ*
* *ಕ್ವೆಕ್ವೆ ಸ್ಪೋರ್ಟ್ಸ್ ಕ್ಲಬ್: ಕ್ವೆಕ್ವೆ*
* *ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್: ಬುಲಾವೇಯೋ*
===========

*ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಕ್ರೀಡಾಂಗಣಗಳು*

     ***********
* *ಶೇಖ್ ಜಾಯೆದ್ ಕ್ರೀಡಾಂಗಣ: ಅಬುಧಾಬಿ*
* *ಶಾರ್ಜಾ ಕ್ರಿಕೆಟ್ ಕ್ರೀಡಾಂಗಣ: ಶಾರ್ಜಾ*
==============

ರಾಷ್ಟ್ರೀಯ ವಿಜ್ಞಾನ ದಿನ

ರಾಷ್ಟ್ರೀಯ ವಿಜ್ಞಾನ ದಿನ ಪೆ.೨೮




*ಇಂದು ರಾಷ್ಟ್ರೀಯ ವಿಜ್ಞಾನ ದಿನ*

*ಜೈ ವಿಜ್ಞಾನ್, ಜೈ ವಿಜ್ಞಾನ್*
 *ರಾಷ್ಟ್ರೀಯ ವಿಜ್ಞಾನ ದಿನ:  ದೇಶಾದ್ಯಂತ ಫೆಬ್ರವರಿ 28ಅನ್ನು ರಾಷ್ಟ್ರೀಯ ವಿಜ್ಞಾನ ದಿನವಾಗಿ ಆಚರಿಸಲಾಗುತ್ತದೆ. 1999ರಿಂದ ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ರಾಷ್ಟ್ರೀಯ ವಿಜ್ಞಾನ ದಿನದಂದು ಚರ್ಚಿಸಲಾಗುವ ವಿಷಯವನ್ನು ಮೊದಲೇ ಘೋಷಿಸುತ್ತದೆ. ಏತಕ್ಕಾಗಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ ಎಂಬ ಬಗ್ಗೆ ಕಿರು ಮಾಹಿತಿ ಇಲ್ಲಿದೆ.*

*ಏನಿದು ರಾಷ್ಟ್ರೀಯ ವಿಜ್ಞಾನ ದಿನ*


*ವಿಜ್ಞಾನ ಜಗತ್ತಿನಲ್ಲಿ ಭಾರತವನ್ನು ಮೇರು ಶಿಖರಕ್ಕೆ ಕೊಂಡೊಯ್ದ ಸರ್‌ ಸಿ.ವಿ.ರಾಮನ್‌ ಅವರ ಅಪೂರ್ವ ಸಾಧನೆಗಳ ನೆನಪಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ. ರಾಮನ್‌ ಅವರು ಬೆಂಗಳೂರಿನ ಸೆಂಟ್ರಲ್‌ ಕಾಲೇಜಿನ ಸಭಾಂಗಣದಲ್ಲಿ ಕ್ರಿ.ಶ.1928ರ ಫೆಬ್ರವರಿ 28ರಂದು ಬೆಳಕಿನ ಚದುರಿವಿಕೆಯಲ್ಲಿ ಸಾಮಗ್ರಿಗಳ ಗುಣಲಕ್ಷ ಣಗಳ ಪರಿಣಾಮದ ಬಗ್ಗೆ ಹೊಸ ಹೊಳಹೊಂದನ್ನು ಪ್ರತಿಪಾದಿಸಿದ ದಿನ. ಮುಂದಿನ ದಿನಗಳಲ್ಲಿ ಅದು ರಾಮನ್‌ ಪರಿಣಾಮವೆಂದೇ ಪ್ರಸಿದ್ಧವಾಯಿತು. ಈ ಹಿನ್ನೆಲೆಯಲ್ಲಿ 1987 ಫೆಬ್ರವರಿ 28ರಂದು ದೇಶಾದ್ಯಂತ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತಿದೆ.*

👉 *ಆಚರಣೆಯ ಉದ್ದೇಶ*


*ವಿಜ್ಞಾನ ಹಾಗೂ ನಮ್ಮ ಜೀವನದಲ್ಲಿ ಅದರ ಮಹತ್ವದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ರಾಷ್ಟ್ರೀಯ ವಿಜ್ಞಾನ ದಿನ ಆಚರಣೆಯ ಉದ್ದೇಶ, ಉಪನ್ಯಾಸಗಳು, ಚರ್ಚಾಸ್ಪರ್ಧೆಗಳು, ರಸಪ್ರಶ್ನೆ, ವಸ್ತುಪ್ರದರ್ಶನ ಹೀಗೆ ನಾನಾ ಚಟುವಟಿಕೆಗಳನ್ನು ದೇಶದ ವಿವಿಧೆಡೆ ಹಮ್ಮಿಕೊಳ್ಳಲಾಗುತ್ತದೆ. ಪ್ರತೀ ವರ್ಷ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಚಟುವಟಿಕೆಗಳನ್ನು ಒಂದು ನಿರ್ದಿಷ್ಟ ವಿಷಯದ ಸುತ್ತ ಆಯೋಜಿಸಲಾಗುತ್ತದೆ.*

🔬👉 *ರಾಮನ್‌ ಕುರಿತಂತೆ*


*ವಿಜ್ಞಾನದಲ್ಲಿ ನೊಬೆಲ್‌ ಪ್ರಶಸ್ತಿ ಪಡೆದ ಏಷ್ಯಾದ ಮೊತ್ತಮೊದಲ ವಿಜ್ಞಾನ ಎಂಬ ಹೆಗ್ಗಳಿಕೆಗೆ ಪಾತ್ರರಾದ ಸಿ.ವಿ. ರಾಮನ್‌ ಅವರ ಪೂರ್ಣ ಹೆಸರು ಚಂದ್ರಶೇಖರ ವೆಂಕಟರಾಮನ್‌ . ಜನಿಸಿದ್ದು ತಮಿಳುನಾಡಿನ ತಿರುಚಿನಾಪಳ್ಳಿಯಲ್ಲಿ 1888ರ ನವೆಂಬರ್‌ 7ರಂದು . ಅವರ ತಂದೆ ಚಂದ್ರಶೇಖರ್‌ ಅಯ್ಯರ್‌ ಗಣಿತ ಹಾಗೂ ಭೌತವಿಜ್ಞಾನದ ಶಿಕ್ಷಕರಾಗಿದ್ದರು. ರಾಮನ್‌ ಅವರು ಕಲ್ಕತಾ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ, ಮುಂದೆ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಸೈನ್ಸ್‌ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.*

*ರಾಮನ್‌ ಪರಿಣಾಮ*


*ಒಮ್ಮೆ ಹಡಗಿನಲ್ಲಿ ಪ್ರಯಾಣಿಸುವಾಗ ರಾಮನ್‌ ಅವರಿಗೆ ಸಮುದ್ರ ಏಕೆ ಯಾವಾಗಲೂ ನೀಲಿಯಾಗಿಯೇ ಕಾಣುತ್ತದೆ ಎಂಬ ಪ್ರಶ್ನೆ ಎದುರಾಯಿತಂತೆ. ಅದು ಆಕಾಶದ ಬಣ್ಣದ ಪ್ರತಿಫಲನವೋ ಅಥವಾ ಈ ನೀಲಿ ಬಣ್ಣದ ಹಿಂದೆ ಬೇರೇನಾದರೂ ಗುಟ್ಟು ಅಡಗಿದೆಯೋ ಎಂದು ಪತ್ತೆಮಾಡಲು ಹೊರಟ ರಾಮನ್‌ ಸೂರ್ಯನ ಬೆಳಕು ನೀರಿನಲ್ಲಿ ಚದುರಿಹೋಗುವುದೇ ಸಮುದ್ರದ ನೀರು ನೀಲಿಯಾಗಿ ಕಾಣಲು ಕಾರಣ ಎಂಬ ವಿಷಯ ಕಂಡುಹಿಡಿದರು. ಇದೇ ಅಂಶ ಮುಂದೆ ಅವರು ತಮ್ಮ ಅಧ್ಯಯನವನ್ನು ಮುಂದುವರೆಸಲು ಪ್ರೇರಣೆಯಾಯಿತು. ಕೋಲ್ಕತಾದ ಇಂಡಿಯನ್‌ ಅಸೋಸಿಯೇಷನ್‌ ಫಾರ್‌ ಕಲ್ಟಿವೇಷನ್‌ ಆಫ್‌ ಸೈನ್ಸ್‌ನಲ್ಲಿ ರಾಮನ್‌ ಅವರು ತಮ್ಮ ಸಹೋದ್ಯೋಗಿಗಳೊಡನೆ ನಡೆಸಿದ ಅಧ್ಯಯನಗಳ ಪರಿಣಾಮವೇ ರಾಮನ್‌ ಪರಿಣಾಮದ ಶೋಧ. ಇದೇ ಸಾಧನೆಗಾಗಿ ಅವರಿಗೆ 1930ನೇ ಇಸವಿಯಲ್ಲಿ ನೊಬೆಲ್‌ ಪುರಸ್ಕಾರ ನೀಡಿ ಗೌರವಿಸಲಾಯಿತು. ಇದು ವಿಜ್ಞಾನ ಕ್ಷೇತ್ರದಲ್ಲಿ ಭಾರತಕ್ಕೆ ದೊರೆತ ಮೊತ್ತಮೊದಲ ನೊಬೆಲ್‌ ಪುರಸ್ಕಾರವೂ ಹೌದು.*

  🔬✍ *ಫೆಬ್ರುವರಿ 28 ರಂದು ದೇಶದಾದ್ಯಂತ ವಿಜ್ಞಾನದ ದಿನವನ್ನಾಗಿ ಆಚರಿಸುತ್ತೇವೆ. ಅಂದು ಡಾ: ಸರ್. ಸಿ.ವಿ. ರಾಮನ್ ರವರು ‘ರಾಮನ್ ಪರಿಣಾಮ’ ಎಂಬ ಪ್ರಕ್ರಿಯೆಯನ್ನು ಪ್ರಾಯೋಗಿಕವಾಗಿ ನಿರೂಪಿಸಿ ತೋರಿಸಿದ ದಿನ.*

👉 *ರಾಮನ್ ಪರಿಣಾಮದ ಮಹತ್ವ :*


*ಇಂದು `ರಾಮನ್ ಪರಿಣಾಮ’ ದ್ರವ್ಯದ ಅಣುರಚನೆಯನ್ನು ನಿರ್ಧರಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. ಮೈಕ್ರೋವೇವ್, ಲೇಸರ್, ಇನ್ಫ್ರಾರೆಡ್, ಅಲ್ಟ್ರಾ ವಯೋಲೆಟ್, ಮತ್ತು ಕ್ಷ-ಕಿರಣ ರಾಮನ್ ಸ್ಪೆಕ್ಟ್ರೋಸ್ಕೋಪಿ ಇಂದು ಮುಂಚೂಣಿಯಲ್ಲಿರುವ ಸಂಶೋಧನಾ ಕ್ಷೇತ್ರಗಳು. ಭೌತ, ಜೀವ, ರಸಾಯನ ಮತ್ತು ಖಗೋಳ ವಿಜ್ಞಾನ ಹಾಗೂ ನ್ಯಾನೋ ತಂತ್ರಜ್ಞಾನದ ಹಲವು ವಿಭಾಗಗಳಲ್ಲಿ ಇದರ ಪರಿಣಾಮವಿದೆ.*

*ರಾಮನ್ ಪರಿಣಾಮ ಕುರಿತು ಆಲ್ಬರ್ಟ್ ಐನ್ಸ್ಟೀನ್ ಸರಳವಾಗಿ ಈ ರೀತಿ ಹೇಳಿದ್ದಾರೆ: “ವಸ್ತುವಿನಲ್ಲಿ ಬೆಳಕಿನ ಚದುರುವಿಕೆಯಿಂದ ಬೆಳಕಿನ ಶಕ್ತಿಯಲ್ಲಾಗುವ ಬದಲಾವಣೆಯನ್ನು ಗುರುತಿಸಿದವರಲ್ಲಿ ರಾಮನ್ ಮೊದಲಿಗರು. ನನಗಿನ್ನೂ ಸ್ಪಷ್ಟವಾಗಿ ನೆನಪಿದೆ – ಬರ್ಲಿನ್ನಿನ ಭೌತಶಾಸ್ತ್ರ ಗೋಷ್ಟಿಯಲ್ಲಿ ಭಾಗವಹಿಸಿದ ನಮ್ಮೆಲ್ಲರ ಮೇಲೆ ಈ ಆವಿಷ್ಕಾರ ಗಾಢ ಪರಿಣಾಮ ಬೀರಿತ್ತು”.*

*ಇಂದಿನ ದುರಂತವೆಂದರೆ, ‘ರಾಮನ್ ಪರಿಣಾಮ’ ವನ್ನು ಈ ದೇಶದಲ್ಲಿಯೇ ಆವಿಷ್ಕರಿಸಿದ್ದರೂ ಕೂಡ, ಈ ಪರಿಣಾಮದ ಆಧಾರದಲ್ಲಿ ಕಾರ್ಯನಿರ್ವಹಿಸುವ ಲೇಸರ್ ಉಪಕರಣಗಳನ್ನು ತಯಾರಿಸಲಾಗದೇ ಇಂದಿಗೂ ಆಮದು ಮಾಡಿಕೊಳ್ಳುತ್ತಿದ್ದೇವೆ.*

✍  *ಸ್ವಾವಲಂಬಿ ಸಂಶೋಧನಾಲಯಗಳ ಸ್ಥಾಪನೆ :*


*ಬಂಗಾಳದಲ್ಲಿ ರಾಜ್ಯ ವಿಭಜನೆ ವಿರುದ್ದ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಟಗಳು ತೀವ್ರಗೊಂಡಿದ್ದ ಕಾಲವದು. ಇದರಿಂದಾಗಿ ಪ್ರತಿಷ್ಟಿತ ವಿಜ್ಞಾನ ಸಂಸ್ಥೆಗಳಲ್ಲಿ ಭಾರತೀಯರೇ ಹುದ್ದೆ ಅಲಂಕರಿಸಬೇಕೆಂದು ಕೋಲ್ಕತ್ತಾ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ತೀರ್ಮಾನಿಸಿತ್ತು. ಇದರಿಂದಾಗಿ ಪ್ರತಿಭಾನ್ವಿತ ರಾಮನ್ರವರು ತಾವು ಕೆಲಸ ಮಾಡುತ್ತಿದ್ದ ಐಸಿಎಸ್ ಹುದ್ದೆಗೆ ರಾಜೀನಾಮೆ ನೀಡಿ ಪ್ರೊಫೆಸರ್ ಹುದ್ದೆಗೆ ವಿಶ್ವವಿದ್ಯಾಲಯ ಸೇರಿದರು.*

*1921 ರಲ್ಲಿ ಇಂಗ್ಲೆಂಡಿನಲ್ಲಿ ವೈಜ್ಞಾನಿಕ ಸಮ್ಮೇಳನದಲ್ಲಿ ಭಾಗವಹಿಸಿ ಹಡಗಿನಲ್ಲಿ ಭಾರತಕ್ಕೆ ರಾಮನ್ ಪ್ರಯಾಣಿಸುತ್ತಿದ್ದರು. ಆಗವರು ಕೋಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಅಧ್ಯಾಪಕರಾಗಿದ್ದರು. ಅಷ್ಟರಲ್ಲಾಗಲೇ ಅವರು ದೃಗ್ವಿಜ್ಞಾನ ಮತ್ತು ಧ್ವನಿ ವಿಜ್ಞಾನಗಳ ಅಧ್ಯಯನದಲ್ಲಿ ನಡೆಸಿರುವ ಸಂಶೋಧನೆ ಕುರಿತು ಇಂಗ್ಲೆಂಡ್ನ ಜೆ.ಜೆ. ಥಾಮ್ಸನ್ ಮತ್ತು ಲಾರ್ಡ್ ರುದರ್ಪೋರ್ಡರಂತಹ ವಿಜ್ಞಾನಿಗಳ ಗಮನ ಸೆಳೆದರು.


ಭಾರತೀಯ ಸಂವಿಧಾನ ಕುರಿತ ಸಾಮಾನ್ಯಜ್ಞಾನ


1) ಅಶೋಕ ಚಕ್ರದ ಸಂಕೇತವೇನು?
 * ನಿರಂತರ ಚಲನೆ.

2) ರಾಷ್ಟ್ರಧ್ವಜವು ಯಾವ ಆಕಾರದಲ್ಲಿದೆ?
 * ಆಯತ.

3) ಲೋಕ ಅದಾಲತ್ ಇದರ ಮತ್ತೊಂದು ಹೆಸರೇನು?
 * ಜನತ ನ್ಯಾಯಾಲಯ.

4) ಸತ್ಯಮೇವ ಜಯತೆ ಇರುವ ಉಪನಿಷತ್ ಯಾವುದು?
 * ಮಂಡೋಕ ಉಪನಿಷತ್.

5) ರಾಷ್ಟ್ರೀಯ ಪಂಚಾಗದಲ್ಲಿ ವರ್ಷದ ಮೊದಲ ತಿಂಗಳು/ಮಾಸ ಯಾವುದು?
 * ಚೈತ್ರಮಾಸ.

6) ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶವೆಂದು ಘೋಷಣೆಯಾದ ವರ್ಷ ಯಾವುದು?
 * 01/02/1992.

7) ಭಾರತ ಗಣರಾಜ್ಯದ ಅತಿ ಉನ್ನತ ಅಧಿಕಾರಿ ಯಾರು?
 * ರಾಷ್ಟ್ರಪತಿ.

8) ಎಂ.ಪಿ. ವಿಸ್ತರಿಸಿರಿ?
 * ಮೆಂಬರ್ ಆಫ್ ಪಾರ್ಲಿಮೆಂಟ್.

9)ಭಾರತದ ಪ್ರಥಮ ಪ್ರಜೆ ಯಾರು?
 * ರಾಷ್ಟ್ರಪತಿ.

10) ದೇಶದ ಅತೀ ಉನ್ನತ ನ್ಯಾಯಾಲಯ ಯಾವುದು?
 * ಸರ್ವೋಚ್ಚ ನ್ಯಾಯಾಲಯ (ಸುಪ್ರೀಂಕೊರ್ಟ್).

11) ಸಂವಿಧಾನದ ಹೃದಯ ಯಾವುದು?
 * ಪ್ರಸ್ತಾವನೆ/ಪೀಠಿಕೆ.

12) ಉಪರಾಷ್ಟ್ರಪತಿಯ ಅಧಿಕಾರವಧಿ ಎಷ್ಟು ವರ್ಷ?
 * 5 ವರ್ಷಗಳು.

13) ರಾಜ್ಯಸಭೆಯ ಸಭಾಧ್ಯಕ್ಷರು ಯಾರು?
  * ಉಪ ರಾಷ್ಟ್ರಪತಿ.

14) ರಾಷ್ಟ್ರೀಯ ರಕ್ಷಣಾ ಕಾಲೇಜು ಇರುವ ಸ್ಥಳ ಯಾವುದು?
 * ನವದೆಹಲಿ.

15) ಭೂಸೇನೆಯ ಪ್ರಧಾನ ಕಛೇರಿ ಎಲ್ಲಿದೆ?
 * ದೆಹಲಿ.

16) ವಾಯುಪಡೆಯ ಮುಖ್ಯಸ್ಥನನ್ನು ಏನೆಂದು ಕರೆಯುವರು?
 * ಏರ್ ಚೀಫ್ ಮಾರ್ಷಲ್.

17) ಭಾರತದ ರಾಷ್ಟ್ರಪತಿಯ ಅಧಿಕೃತ ನಿವಾಸದ ಹೆಸರೇನು?
 * ರಾಷ್ಟ್ರಪತಿ ಭವನ.

18) ರಾಜ್ಯಸಭೆಯ ಸದಸ್ಯರನ್ನು ಯಾರು ಆಯ್ಕೆ ಮಾಡುತ್ತಾರೆ?
 * ವಿಧಾನಸಭೆಯ ಸದಸ್ಯರು (238).

19) ನೆಹರುರವರ ಪ್ರೀತಿಯ ಹೂ ಯಾವುದು?
 * ಕೆಂಪು ಗುಲಾಬಿ.

20) ಕರ್ನಾಟಕದಲ್ಲಿ ಉಚ್ಚ ನ್ಯಾಯಾಲಯ ಎಲ್ಲಿದೆ?
 * ಬೆಂಗಳೂರು.

21) ಸಿಬರ್ಡ್ ನೌಕಾನೆಲೆ ಎಲ್ಲಿದೆ?
 * ಕಾರವಾರ.

22) ವಿಶ್ವದಲ್ಲಿಯೇ 2 ನೇಯ ಅತಿ ದೊಡ್ಡ ಭೂಸೇನೆ ಇರುವ ದೇಶ ಯಾವುದು?
 * ಭಾರತ.

23) ಎನ್.ಸಿ.ಸಿ ವಿಸ್ತರಿಸಿರಿ?
 * ನ್ಯಾಷನಲ್ ಕ್ಯಾಡೇಟ್ ಕೋರ್.

24) ಸಂಸತ್ತಿನ ಕೆಳಮನೆ ಯಾವುದು?
 * ಲೋಕಸಭೆ.

25) ಲೋಕಸಭೆಯ ಸದಸ್ಯನಾಗಲು ಇರಬೇಕಾದ ಕನಿಷ್ಟ ವರ್ಷವೆಷ್ಟು?
 * 25.

26) ರಾಷ್ಟ್ರಪತಿ ಆಗಲು ಇರಬೇಕಾದ ಕನಿಷ್ಟ ವಯಸ್ಸು ಎಷ್ಟು?
 * 35.

27) ವಿಧಾನ ಪರಿಷತ್ತಿನ ಸದಸ್ಯರ ಅಧಿಕಾರವಧಿ ಎಷ್ಟು ವರ್ಷಗಳು?
 * 6.

28) ಭಾರತದಲ್ಲಿ ತನ್ನದೇ ಯಾದ ಆಂತರಿಕ ಸಂವಿಧಾನ ಹೊಂದಿರುವ ರಾಜ್ಯ ಯಾವುದು?
 * ಜಮ್ಮು&ಕಾಶ್ಮೀರ.

29) ಭಾರತದ ಸರ್ವೋಚ್ಚ ನ್ಯಾಯಾಲಯ ಎಲ್ಲಿದೆ?
 * ದೆಹಲಿ.

30) ನಮ್ಮ ರಾಷ್ಟ್ರಧ್ವಜದ ಉದ್ಧ- ಅಗಲಗಳ ಅನುಪಾತವೇನು?
 * 3:2.

31) ಭಾರತೀಯ ಸಂಸ್ಕೃತಿಯ ನಿಲುವೇನು?
 * ಬಾಳು,ಬಾಳುಗೊಡು.

32) ಭಾರತ ದೇಶದಲ್ಲಿ ಒಟ್ಟು ಎಷ್ಟು ಉಚ್ಚ ನ್ಯಾಯಾಲಯಗಳಿವೆ?
 * 24.

33) ರಾಷ್ಟ್ರಪತಿ ಭವನದಲ್ಲಿರುವ ಕೊಠಡಿಗಳು ಎಷ್ಟು?
 * 340.

34)  ರಾಷ್ಟ್ರಪತಿ ಭವನ ಪೂರ್ಣಗೊಂಡ ವರ್ಷ?
 * 1929.

35ಎಮ್.ಎಲ್.ಸಿ ವಿಸ್ತರಿಸಿರಿ?
 * ಮೆಂಬರ್ ಆಫ್ ಲೆಜೆಸ್ಲೆಟಿವ್ ಕೌನ್ಸಿಲ್.

36) ಜಗತ್ತಿನಲ್ಲಿಯೇ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಯಾವುದು?
 * ಭಾರತ.

37) ಭಾರತದ ಸಂವಿಧಾನದಲ್ಲಿನ ಪರಿಚ್ಛೇದಗಳು ಎಷ್ಟು?
 * 12.

38) ವ್ಯಕ್ತಿ ತನ್ನ ದೇಶಕ್ಕಾಗಿ ಮಾಡಬೇಕಾದ ಕೆಲಸವೇ -----?
 * ಮೂಲಭೂತ ಕರ್ತವ್ಯ.

39 ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರು ಯಾರು?
 * ಡಾ.ಬಿ.ಆರ್.ಅಂಬೇಡ್ಕರ್.

40) ಕರ್ನಾಟಕದಲ್ಲಿ ಪಶುಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದದ್ದು ಯಾವಾಗ?
 * 1964.

41) ವಿಧಾನ ಸಭೆಯ ಸದಸ್ಯರ ಅಧಿಕಾರವಧಿ ಎಷ್ಟು ವರ್ಷಗಳು?
 * 5.

42) ರಾಷ್ಟ್ರೀಯ ಪಂಚಾಂಗವನ್ನು ಸಿದ್ದಗೊಳಿಸಿದ ವಿಜ್ಞಾನಿ ಯಾರು?
 * ಮೇಘನಾದ ಸಹಾ.

43) ನಮ್ಮ ದೇಶದ ಹಾಡು ಯಾವುದು?
 * ವಂದೇ ಮಾತರಂ.

44) "ವಂದೇ ಮಾತರಂ" ಗೀತೆ ರಚಿಸಿದವರು ಯಾರು?
 * ಬಂಕಿಮ ಚಂದ್ರ ಚಟರ್ಜಿ.

45) ಭಾರತದ ಸಂವಿಧಾನವನ್ನು ಸಿದ್ದಪಡಿಸಿದ ವಿಶೇಷ ಸಭೆ ಯಾವುದು?
 * ಸಂವಿಧಾನ ಸಭೆ.

46) ನೇರವಾಗಿ ಸಂವಿಧಾನದಿಂದ ನಾಗರಿಕರಿಗೆ ಕೊಡಲ್ಪಟ್ಟ ಹಕ್ಕುಗಳೇ ------?
 * ಮೂಲಭೂತ ಹಕ್ಕುಗಳು.

47) ಭಾರತದ ಸಂವಿಧಾನವು 1950 ರಿಂದ 2006 ರ ವರೆಗೆ ಎಷ್ಟು ಬಾರಿ ತಿದ್ದುಪಡಿ ಮಾಡಲಾಗಿದೆ?
 * 97 ಬಾರಿ.

48) ಭಾರತದಲ್ಲಿ ಎರಡು ಸದನಗಳನ್ನು ಒಳಗೊಂಡಿರುವ ರಾಜ್ಯಗಳು ಎಷ್ಟು?
 * 6 (ದ್ವಿಸದನ ಪದ್ದತಿ).

49) ರಾಜ್ಯ ಸಭೆಯ ಸದಸ್ಯರಾಗಲು ಇರಬೇಕಾದ ಕನಿಷ್ಟ ವಯಸ್ಸು ಎಷ್ಟು?
 * 30 ವರ್ಷಗಳು.

50) ಎಮ್.ಎಲ್.ಎ ವಿಸ್ತರಿಸಿರಿ?
 * ಮೆಂಬರ್ ಆಫ್ ಲೆಜೆಸ್ಲೆಟಿವ್ ಆಸೆಂಬ್ಲಿ.

51) ನೌಕಾದಳದ ಮುಖ್ಯಸ್ಥರನ್ನು ಏನೆಂದು ಕರೆಯುವರು?
 * ಆಡ್ಮಿರಲ್.

52) ಪ್ರಧಾನಮಂತ್ರಿಯನ್ನು ನೇಮಕ ಮಾಡುವವರು ಯಾರು?
 * ರಾಷ್ಟ್ರಪತಿ.

53ಸಂವಿಧಾನವನ್ನು ಅಂಗೀಕರಿಸಿದ ವರ್ಷ ಯಾವುದು?
 * 26 ನವೆಂಬರ್ 1949.

54) ಸಂವಿಧಾನ ಸಭೆ ಪ್ರಥಮ ಅಧಿವೇಶನ ನಡೆಸಿದ ವರ್ಷ?
 * 1946.


ಪ್ರಪಂಚದ‌ ವಿಶೇಷತೆಗಳು






ಪ್ರಪಂಚದ ವಿಶೇಷತೆಗಳು
೧ ಸತ್ವದ್ವೀಪಗಳ ನಗರ ---- ಮುಂಬೈ
೨ ಸ್ವರ್ಣಮಂದಿರಗಳ ನಗರ --- ಅಮೃತಸರ
೩ ಏಳುನಗರಗಳ ನಗರ---- ದೆಹಲಿ
೪ ಭಾರತದ ಯೋಜಿತ ನಗರ--- ಜೈಪುರ
೫ ಭಾರತದ ರೇಷ್ಮೆಯ ನಗರ--- ಕರ್ನಾಟಕ
 ೬ ಭಾರತದ ಉದ್ಯಾನ ನಗರ--- ಬೆಂಗಳೂರು
 ೭ ಲವಂಗ ದ್ವೀಪ --- ಜಂಜಿಬಾರ್
 ೮ ಪಂಚ ನದಿಗಳ ನಾಡು--- ಪಂಜಾಬ್
 ೯ ಕರ್ನಾಟಕದ ಆಟದ ಮೈದಾನ--- ಕೊಡಗು
೧೦ ಕರ್ನಾಟಕದ ಮ್ಯಾಂಚೆಸ್ಟರ್ --- ದಾವಣಗೆರೆ
೧೧  ಕರ್ನಾಟಕದ ಪಂಜಾಬ್ --- ಅವಿಭಜಿತ ವಿಜಾಪುರ
 ೧೨ ದಕ್ಷಿಣ ಕಾಶಿ--- ಹಲಸಿ ( ಬೆಳಗಾವಿ ಜಿಲ್ಲೆ)
 ೧೩ ದೇವಾಲಯದ ವಾಸ್ತು ಶಿಲ್ಪದ ತೊಟ್ಟಿಲು--- ಐಹೋಳೆ
 ೧೪ ಚೀನಾದ ಕಣ್ಣೀರಿನ ನದಿ--- ಹೂ ಹ್ವಾಂಗ್‌ಹೊ
 ೧೫  ಬಂಗಾಳದ ಕಣ್ಣೀರಿನ ನದಿ--- ದಾಮೋದರ
 ೧೬ ಬಿಹಾರದ ಕಣ್ಣೀರಿನ ನದಿ--- ಕೋಸಿ
 ೧೭ ಅಸ್ಸಾಂನ ಕಣ್ಣೀರಿನ ನದಿ--- ಬ್ರಹ್ಮಪುತ್ರ ನದಿ
 ೧೮ ಹಳದಿ ನದಿ ---- ಹೂಹ್ವಾಂಗ್ ಹೋ ನದಿ( ಚೀನಾ)
 ೧೯ ಮಡಿದವರ ದಿಬ್ಬ --- ಮೊಹೆಂಜೊದಾರೊ
 ೨೦ ಸೂರ್ಯೋದಯದ ನಾಡು---- ಜಪಾನ್
 ೨೧ ಮಧ್ಯರಾತ್ರಿ ಸೂರ್ಯ ಉದಯಿಸುವ ನಾಡು--- ನಾರ್ವೆ
 ೨೨ ಮುಂಜಾನೆಯ ನೀರವತೆಯ ನಾಡು ---- ಕಿರಿಯ
 ೨೩ ಕಾಂಗರೂಗಳ ನಾಡು ---- ಆಸ್ಟ್ರೇಲೀಯಾ
 ೨೪ ಕಿವಿಗಳ ನಾಡು----- ನ್ಯೂಜಿಲ್ಯಾಂಡ್
೨೫  ಪೂರ್ವದ ಮುತ್ತು---- ಬಹರೇನ್
 ೨೬  ಬಿಳಿಯಾನೆಗಳ ನಾಡು--- ಥಾಯ್ಲಾಂಡ್
 ೨೭ ಚಿನ್ನದ ಪಗೋಡಗಳ ನಾಡು--- ಮೈನ್ಮಾರ್
 ೨೮ ಜಗತ್ತಿನ ಸಕ್ಕರೆಯ ಬಟ್ಟಲು, --- ಕ್ಯೂಬಾ
 ೨೯ ದಕ್ಷಿಣದ ಬ್ರಿಟನ್ --- ನ್ಯೂಜಿಲ್ಯಾಂಡ್
 ೩೦ ಸಾವಿರ ಸರೋವರಗಳ ನಾಡು---- ಫಿನ್ ಲ್ಯಾಂಡ್
 ೩೧ ಯುರೋಪಿನ ಆಟದ ಮೈದಾನ,--- ಸ್ವಿಟ್ಜರ್‌ಲೆಂಡ್
  ೩೨ ಯುರೋಪಿನ ರೋಗಗ್ರಸ್ತ ನಾಡು--- ಟರ್ಕಿ
  ೩೩ ಚಿನ್ನದ ಉಣ್ಣೆಗಳ ನಾಡು--- ಆಸ್ಟ್ರೇಲೀಯಾ
 ೩೪ ಕಾಲುವೆಗಳ ನಾಡು--- ವೆನಿಸ್
 ೩೫ ಗುಡುಗುಗಳ ನಾಡು--- ಭೂತಾನ್
 ೩೬ ಕಗ್ಗತ್ತಲೆಯ ಖಂಡ--- ಆಫ್ರಿಕ
೩೭ ಮುತ್ತುಗಳ ದ್ವೀಪ--- ಶ್ರೀಲಂಕಾ
೩೮ ಜಗತ್ತಿನ ಸಿಲಿಕಾನ್ ವ್ಯಾಲಿ--- ಲಾಸ್ ಏಂಜಿಲಿಸ್
೩೯ ಸಪ್ತಗಿರಿಗಳ ನಾಡು--- ರೋಮ್
೪೦ ಯುರೋಪಿನ ಕದನ ಮೈದಾನ --- ಬೆಲ್ಜಿಯಂ
೪೧ ಉತ್ತರದ ವೆನಿಸ್ ---- ಸ್ಟಾಕ್ ಹೊಮ್
೪೨ ಗ್ರೀಕ್ ನ ಕಣ್ಣು ----- ಅಥೆನ್ಸ
೪೩ ಪೂರ್ವದ ವೆನಿಸ್ --- ಬ್ಯಾಂಕಾಕ್
೪೪ ಬಿಳಿರಷ್ಯಾ--- ಬೆಲಾರಸ್
೪೫ ರೇಷ್ಮೇಯ ನಾಡು,--- ಚೀನಾ
೪೬ ಪಂಚ ಸಮುದ್ರಗಳ ಬಂದರು --- ಮಾಸ್ಕೋ
೪೭ ಐದು ಸಮುದ್ರಗಳ ನಗರ---- ಅರೇಬಿಯನ್ ಪ್ರಸ್ಥಭೂಮಿ.
೪೮ ಜಗತ್ತಿನ ಹಣ್ಣಿನ ತೋಟ--- ಮೆಡಿಟರೇನಿಯನ್ ಪ್ರದೇಶ.
೪೯ ಆಗ್ನೇಯ ಏಷ್ಯಾ ರಾಷ್ಟ್ರೀಯ ಕೀಲಿ ಕೈ---- ಸಿಂಗಾಪೂರ್
೫೦ ಜಗತ್ತಿನ ಮಾಂಸದ ಡಬ್ಬಿ--- ಚಿಕ್ಯಾಗೋ
೫೧ ಚಿನ್ನದ ನಾರುಗಳ ನಾಡು---- ಬಾಂಗ್ಲಾದೇಶ
೫೨ ಗೋಧಿ & ಮಾಂಸದ ನಾಡು--- ಅರ್ಜೆಂಟೈನ
೫೩ ದಶಸಾವಿರ ಉಗಿಬುಗ್ಗೆಗಳ ನಾಡು---- ಅಲಾಸ್ಕಾ
೫೪ ಭಾರತದ ಆಟದ ಮೈದಾನ ---- ಕಾಶ್ಮೀರ
೫೫ ದೇವರ ಸ್ವಂತ ನಾಡು--- ಕೇರಳ
೫೬ ಗೋಧಿಯ ಕಣಜ--- ಪಂಜಾಬ್
೫೭ ಪ್ರಪಂಚದ ಗೋಧಿಯ ಕಣಜ--- ರಷ್ಯಾ
೫೮  ಭಾರತದ ಅಕ್ಕಿಯ ಬಟ್ಟಲು--- ಛತ್ತಿಸ್ ಗಡ
೫೯ ಭಾರತದ ಮ್ಯಾಂಚೆಸ್ಟರ್ ---- ಮುಂಬೈ
೬೦  ಉತ್ತರ ಭಾರತದ ಮ್ಯಾಂಚೆಸ್ಟರ್ ---ಕಾನ್ಪುರ
೬೧ ದಕ್ಷಿಣ ಭಾರತದ ಮ್ಯಾಂಚೆಸ್ಟರ್ --- ಕೊಯಿಮತ್ತೂರ
೬೨ ಅರಮನೆಗಳ ನಗರ--- ಕೊಲ್ಕತ್ತಾ
೬೩ ಗುಲಾಬಿ ನಗರ--- ಜೈಪುರದ
೬೪ ಮುತ್ತಿನ ನಗರ--- ಹೈದ್ರಾಬಾದ್
೬೫ ಉಕ್ಕಿನ ನಗರ--- ಜಮ್ ಷೆಡಪುರ
೬೬ ಗೇಟ್ ವೇ ಆಪ್ ಇಂಡಿಯಾ --- ಮುಂಬೈ
೬೭ ಇಂಡಿಯಾ ಗೇಟ್---- ದೆಹಲಿ
 ೬೮ ಭಾರತದ ಕಿರೀಟ--- ಕಾಶ್ಮೀರ
೬೯ ಭಾರತದ ಮಸಾಲೆ ಪದಾರ್ಥಗಳ ತೋಟ--- ಕೇರಳ
೭೦ ಕನಸಿನ ಗೋಪುರದ ನಗರ--ಆಕ್ಸಫರ್ಢ(ಇಂಗ್ಲೆಂಡ್)
೭೧ ಆಕಾಶಚುಂಬಿ ಕಟ್ಟಡಗಳ ನಗರ--- ನ್ಯೂಯಾರ್ಕ
೭೨ ಉತ್ತರ ಯುರೋಪಿನ ಕ್ಷೀರ ಕ್ಷೇತ್ರ--- ಡೆನ್ಮಾರ್ಕ್
೭೩ ಪಚ್ಚೆ ದ್ವೀಪ--- ಐರ್ಲೆಂಡ್
೭೪   ಶಾಶ್ವತ ನಗರ--- ರೋಂ
೭೫  ಚಕ್ರಾಧಿಪತ್ಯದ ನಗರ---- ರೋಂ
೭೬  ಇಂಗ್ಲೆಂಡಿನ ಉದ್ಯಾನವನ---- ಕೇಂಟ್
೭೭ ಕಣ್ಣೀರಿನ ದ್ವಾರ--- ಬಾಬ್ ಯೆಲ್ ಮಾಂಟಬ್( ಜರೊಸಲೆಮ್)
೭೮ ನೈಲ್ ನದಿಯ ವರಪ್ರಸಾದ--- ಈಜಿಪ್ಟ
೭೯ ಗ್ರಾನೈಟ್ ನಗರ--- ಅಬರ್ಡಿನ್( ಸ್ಕಾಟ್ಲೆಂಡ)
೮೦ ನಿರಕ್ತರ ಸಾಮ್ರಾಜ್ಯ ---- ದಕ್ಷಿಣ ಕೋರಿಯಾ
೮೧ ಪವಿತ್ರ ಭೂಮಿ--- ಪ್ಯಾಲೆಸ್ತಿನ್
೮೨ ಮೆಡಿಟರೇನಿಯನ್ ಸಮುದ್ರದ ಬೀಗದ ಕೈ---- ಜಿಬ್ರಾಲ್ಟರ್
೮೩ ಕೇಕ್ ಗಳ ನಾಡು--- ಸ್ಕಾಟ್ಲೆಂಡ್
 ೮೪ ಹಾರುವ ಮೀನಿನ ನಾಡು--- ಬಾರ್ಬಡಾಸ್
೮೫  ಯುರೋಪಿನ ಹಿಟ್ಟಿನ ಪಪಾಯಿ--- ಬಾಲ್ಕನ್ಸ
 ೮೬ ಕಡಲ ರಾಣಿ --- ಇಂಗ್ಲೆಂಡ್
 ೮೭ ಶ್ರೀಮಂತ ಕರಾವಳಿ--- ಕೊಸ್ಟಾರಿಕ
  ೮೮ ಗೊಲ್ಡಕೋಷ್ಟ---- ಘಾನಾ
  ೮೯ ಶ್ರೀಮಂತ ಬಂದರು--- ಪ್ಯೂರ್ಟೊರಿಕ
  ೯೦ ಪ್ರಪಂಚದ ಮೇಲ್ಛಾವಣಿ --- ಟಿಬೆಟ್
   ೯೧ ಶ್ವೇತನಗರ,--- ಬೆಲ್ ಗ್ರೇಡ್
  ೯೨ ಗಾಳಿಯ ನಗರ--- ಚಿಕ್ಯಾಗೋ
  ೯೩ ಯುರೋಪಿನ ಯಂತ್ರಾಗಾರ--- ಬೆಲ್ಜಿಯಂ
  ೯೪ ಪ್ರಪಂಚದ ಬ್ರೆಡ್ ಬಾಸ್ಕೇಟ್--- ಉತ್ತರ ಅಮೆರಿಕ ಮೈದಾನ
  ೯೫ ಪ್ರಪಂಚದ ಏಕಾಂತ ದ್ವೀಪ--- ಟ್ರಸ್ಟೆ್ಡ್ ಡಕುನ್ಹಾ
 ೯೬ ಅವಳಿ ನಗರ---- ಬುಡಾಪೆಸ್ಟ್
 ೯೭ ಸೋಳ್ಳೆರಹಿತ ನಾಡು--- ಫ್ರಾನ್ಸ್
 ೯೮ ಬಿಳಿಯ ಖಂಡ--- ಅಂಟಾರ್ಕ್‌ಟಿಕ
 ೯೯ ಮರಭೂಮಿಗಳ ಖಂಡ--- ಆಸ್ಟ್ರೇಲಿಯ
 ೧೦೦
ಕೇಂದ್ರೀಯ ಭೂಖಂಡ--- ಆಫ್ರಿಕ

  ಸೂರ್ಯ ಮುಳುಗದ ಸಾಮ್ರಾಜ್ಯ --- ಇಂಗ್ಲೆಂಡ

ಶಿವಾಜಿ



Q)ಶಿವಾಜಿಯ ಕೋಟೆಯ ಅಧಿಕಾರಿ......
a) ಸಬ್ನೀಸ್
b) ಹವಾಲ್ದಾರ್
c) ದುರ್ಗಪಾಲಿ
d) ಸರ್ನೋಬತ್

D✅✅

ಶಿನಾಯಕತ್ವ ವಹಿಸಿತುತ್ತಿದ್ದನು ಹವಾಲ್ದಾರ 50 ಜುಮ್ಲಾದಾರ 100 ಹಜಾರಿ 1000 ಸೈನಿಕರಿಗೆ ನಾಯಕರಾಗಿದ್ದರು ಸರ್ನೋಬತ್ ಕೈ ಕೆಳಗೆ 7000 ಸೈನಿಕರಿದ್ದರು.

Q). ಮರಾಠರ ಗ್ರಾಮಾಡಳಿತದ ಮುಖ್ಯಸ್ಥ...............
a) ದೇಶಪಾಂಡೆ
b) ಪಟೇಲ
c) ಕನಕಲ್
d) ದೇಶಮುಖ್

B✅✅ಪಟೇಲ

ಶಿವಾಜಿ ಆಡಳಿತ ಅನುಕೂಲಕ್ಕಾಗಿ ಸಾಮ್ರಾಜ್ಯವನ್ನು 4 ಪ್ರಾಂತ್ಯಗಳಾಗಿ ವಿಂಗಡಿಸಿದನು.ಗ್ರಾಮ ಆಡಳಿತದ ಕಡೆಯ ಆಡಳಿತ ಘಟಕವಾಗಿದ್ದು. ಗ್ರಾಮಾಡಳಿತ ಪಟೇಲನಿಗೆ ಸೇರಿತ್ತು.ಗ್ರಾಮ ಮುಖಂಡನಾದ ಪಟೇಲ ನೆರವಿಗೆ ಗ್ರಾಮ ಪಂಚಾಯಿತಿಗಳಿದ್ದವು.

Q). ಶಿವಾಜಿ ಯಾವಾಗ ಜನಿಸಿದನು?
a) ಕ್ರಿ.ಶ.1625
b) ಕ್ರಿ.ಶ.1627
c) ಕ್ರಿ.ಶ.1647
d) ಕ್ರಿ.ಶ.1628

ಶಿವಾಜಿಯು ಏಫ್ರೀಲ್ 20, 1627 ಪೂನಾ ಬಳಿಯ ಶಿವನೇರುದುಗ೯ದಲ್ಲಿ ಜನಿಸಿದನು. ಶಿವಾಜಿಯ ತಂದೆ ಷಹಜೀ ಬೋಂಸ್ಲೆ, ತಾಯಿ ಜೀಜಾಬಾಯಿ. ಶಿವಾಜಿಯು ಕ್ರಿ.ಶ 1674 ರಲ್ಲಿ "ರಾಯಗಡ" ದಲ್ಲಿ "ಮಹಾರಾಜ ಛತ್ರಪತಿ" ಎಂಬ ಬಿರುದಿನೊಂದಿಗೆ ಸಿಂಹಾಸನ ಏರಿದನು.

Q). ಶಿವಾಜಿಯ ನೌಕ ನೆಲೆ ಎಲ್ಲಿತ್ತು ?
a) ಕೊಲಾಬಾ
b) ಕಲ್ಯಾಣ
c) ಬೆಸ್ಸಿನ್
d) ಸಾಲ್ಸಿಟಿ
A✅✅✅

ಚೋಳರು ಬಿಟ್ಟರೆ ಭಾರತದಲ್ಲಿ ನೌಕ ಪಡೆಗೆ ಹೆಚ್ಚಿನ ಗಮನ ನೀಡಿದ ಕೀರ್ತಿ ಶಿವಾಜಿಗೆ ಸಲ್ಲುತ್ತದೆ. ಅವನು ದೌಲತಖಾನ್ ನೇತೃತ್ವದಲ್ಲಿ ಒಂದು ನೌಕಪಡೆ ನಿರ್ಮಿಸಿದನು ಕೋಲಾಬ ಅದರ ಕೇಂದ್ರವಾಗಿತ್ತು.

Q). ಬಾಲಾಜಿ ವಿಶ್ವನಾಥನು ಪೇಶ್ವೆಯಾದದು _____ರಲ್ಲಿ
a) 1712
b) 1713
c) 1715
d) 1718
B✅✅

ಬಾಲಾಜಿ ವಿಶ್ವನಾಥನು ಮರಾಠರ ಪ್ರಪ್ರಥಮ ಪೇಶ್ವೆ ಹಾಗೂ ಪೇಶ್ವೆ ಮನೆತನದ ಸಂಸ್ಥಾಪಕ ಇವನ ಆರಂಭ ಹೆಸರು ಬಾಲಾಜಿ ಭಟ್ಟ ಬಾಲಾಜಿ 1660 ರಲ್ಲಿ ಜಿಂಜಿರಾಧ ಶ್ರೀ ವರ್ಧನ ಎಂಬಲ್ಲಿ ಜನಿಸಿದನು.

Q). ಶಿವಾಜಿಯ ಆಧ್ಯಾತ್ಮಕ ಗುರು ಯಾರು?
a) ರಾಮದಾಸ
b) ರೈದಾಸ
c) ದಾದಾಜಿಕೊಂಡದೇವ
d) ಶಂಕರದೇವ

A✅✅✅

ಶಿವಾಜಿಯ ಬಾಲ್ಯದಲ್ಲಿ ತಂದೆಯ ಪ್ರೀತಿಯನ್ನು ಪಡೆಯುವಲ್ಲಿ ವಂಚಿತನಾದನು.ತಾಯಿ- ಜೀಜಾಬಾಯಿ,ದಾದಾಜಿಕೊಂಡದೇವ ಮತ್ತು ಗುರು ರಾಮದಾಸರು ಅವನನ್ನು ಮಹಾಯೋಧನನ್ನಾಗಿ ಸ್ವಧರ್ಮ ಮತ್ತು ಸ್ವರಾಜ್ಯ ನಿರ್ಮಾಣ ಕಾರನ್ನಾಗಿ ಪರಿವರ್ತಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು.

Q). ಶಿವಾಜಿ ಯಾವಗ ಸೂರತನ್ನು 2 ಬಾರಿ ಲೂಟಿ ಮಾಡಿದನು.
a) 1664 ಮತ್ತು 1670
b) 1665 ಮತ್ತು 1871
c) 1666 ಮತ್ತು 1672
d) 1667 ಮತ್ತು 1675

A✅✅1664 ಮತ್ತು 1670

1664-1670 ರ ಜನವರಿ 20 ರಂದು ಶಿವಾಜಿ ಮೊಗಲರ ಶ್ರೀಮಂತ ರೇವುಪಟ್ಟಣವಾದ ಸೂರತನ್ನು ಮುತ್ತಿ ಲೂಟಿ ಮಾಡಿದನು ಸುಮಾರು 1 ಕೋಟಿ.ರೂ ಸಂಪತ್ತು ಅವನ ವಂಶವಾಯಿತು. 1670- 2 ನೇ ಬಾರಿಗೆ ಸೂರತನ್ನು ಮುತ್ತಿ 66 ಲಕ್ಷ ರೂ ಸಂಪತ್ತನ್ನು ದೋಚಿದನು.

Q). ಶಿವಾಜಿಯ ಅಷ್ಠ ಪ್ರಧಾನರಲ್ಲಿ ಯಾರು ಶ್ರೇಷ್ಠರು?
a) ಸಚಿವ
b) ಅಮಾತ್ಯ
c) ಸುಮುಂತ
d) ಪೇಶ್ವ

B✅✅✅

ಶಿವಾಜಿ ಅಷ್ಠ ಪ್ರಧಾನರಲ್ಲಿ ಅಮಾತ್ಯ (ಮಜುಂದಾರ್) ಅರ್ಥ ಸಚಿವ, ಕಂದಾಯ ಮಂತ್ರಿ ಸಾರ್ವಜನಿಕ ಅದಾಯ ಖರ್ಚು-ವೆಚ್ಚ ವೀಕ್ಷಿಸುವುದು ಸಾರ್ವಜನಿಕ ಲೆಕ್ಕ ಪತ್ರಗಳನ್ನು ಪರಿಶೀಲಿಸುವುದು ಇವನ ಕರ್ತವ್ಯಗಳಾಗಿದ್ದು ಮಜುಂದಾರ ಅವನ ಮತ್ತೊಂದು ಹೆಸರು ರಾಮಚಂದ್ರ ನೀಲಕಂಠ.

Q). ಕೃಷ್ಣಾದಿಂದ ಅಟ್ಟೋಕವರಗೆ ಮರಾಠ ಧ್ವಜ ಹಾರಾಡುವಂತೆ ಮಾಡೋಣ ಹೀಗೆಂದು ಹೇಳಿದವರು...
a) 1 ನೇ ಬಾಜಿರಾಯ
b) ಬಾಲಾಜಿರಾವ
c) ಬಾಲಾಜಿ ವಿಶ್ವನಾಥ
d) ಶಿವಾಜಿ

A✅✅✅1 ನೇ ಬಾಜಿರಾಯ

ಒಂದನೇ ಬಾಜಿರಾಯ (ಕ್ರಿ.ಶ.1720-1740) ಬಾಲಾಜಿ ವಿಶ್ವನಾಥನ ಮರಣದ ನಂತರ ಅವನ ಹಿರಿಯ ಮಗ ಒಂದನೇ ಬಾಜೀರಾಯನನ್ನು ತನ್ನ ಪೇಶ್ವೆಯಾಗಿ ನೇಮಿಸಿಕೊಂಡನು. ಮೊಗಲ ಚಕ್ರವರ್ತಿಗಳ ದೌರ್ಬಲ್ಯದ ಪೂರ್ಣ ಲಾಭ ಪಡೆಯಲು ಮುಂದಾದನು. ಅವನು ಮರಾಠ ಮುಖಂಡರಿಗೆ ಹೀಗೆ ಹೇಳಿದನು."ಇದೀಗ ಹಿಂದೂಸ್ಥಾನದಿಂದ ಪರಕೀಯರನ್ನು ಹೊರ ಹಾಕುವ ಕಾಲ ಸನ್ನದ್ದವಾಗಿದೆ. ಮೊಗಲ ಸಾಮ್ರಾಜ್ಯವು ಒಂದು ಬಾಡುತ್ತಿರುವ ಮರ ಅದರ ಕಾಂಡವನ್ನು ನಾವು ಹೊಡೆಯೋಣ ಅದರ ಕೊಂಬೆಗಳು ತಾವಾಗಿಯೇ ಉರುಳಿ ಬೀಳುತ್ತವೆ." ಹಾಗದಲ್ಲಿ ಮರಾಠ ಧ್ವಜವನ್ನು ಕೃಷ್ಣಾ ನದಿಯಿಂದ ಅಟ್ಟೋಕವರೆಗೆ (ಸಿಂಧೂ ನದಿ) ಹಾರಾಡುವಂತೆ ಮಾಡೋಣ " ಸಾಹು ಪೇಶ್ವೆಯ ನೀತಿಯನ್ನು ಬೆಂಬಲಿಸಿ "ನಿನ್ನ ಹೆಮ್ಮರವನ್ನು ಹಿಮಾಲಯದ ಅಡಿಯಲ್ಲಿ ಬಿತ್ತು ನಿಜಕ್ಕೂ ನೀನು ತಂದಗೆ ತಕ್ಕ ಮಗ". ಹೇಳಿದನು.

Q). ಶಿವಾಜಿ ಯಾವ ಮೊಗಲ್ ದಂಡನಾಯಕನೊಡನೆ ಪುರಂದರ ಒಪ್ಪಂದ ಮಾಡಿಕೊಂಡನು?
a) ದಿಲವಾರಖಾನ್
b) ಜೈಸಿಂಗ್
c) ಬಹದ್ದೂರ್ ಖಾನ್
d) ಜಸ್ವಂತ್ ಸಿಂಗ್

B✅✅✅ಜೈಸಿಂಗ್

ಪುರಂದರ ಗಡ ಒಪ್ಪಂದ (ಜೂನ 22, 1665) ಮೊಗಲರ ದಾಳಿಗಳಿಂದ ಮರಾಠರಿಗೆ ತುಂಬಾ ಹಾನಿಯಾಯಿತು. ಮಾವಳಿ ಮುಖಂಡ ಮುನಾರಬಾಜಿ ದೇಶಪಾಂಡೆ 300 ಮಾವಳಿಗಳೊಂದಿಗೆ ಹೋರಾಡಿ ಹತನಾದನು. ವಿಧಿ ಇಲ್ಲದೆ ಶಿವಾಜಿ ರಾಯಗಡವನ್ನು ಉಳಿಸಿಕೊಳ್ಳಲು ಜೈಸಿಂಗನೊಡನೆ ಪುರಂದರಗಢ ಒಪ್ಪಂದ ಮಾಡಿಕೊಂಡನು.

Q). ಶಿವಾಜಿಗೆ ಕಿರೀಟ ಧಾರಣೆಯಾದ ವರ್ಷ........
a) ಕ್ರಿ.ಶ.1774
b) ಕ್ರಿ.ಶ.1778
c) ಕ್ರಿ.ಶ.1672
d) ಕ್ರಿ.ಶ.1674

ಶಿವಾಜಿಯ ಕಿರೀಟಧಾರಣೆ ಜೂನ್ 16, 1674 ರಂದು ರಾಯಗಡದಲ್ಲಿ ಶಿವಾಜಿ ಪಟ್ಟಾಭಿಷಿಕ್ತನಾಗಿ ’ ಛತ್ರಪತಿ’ ಎಂಬ ಬಿರುದು ಗಳಿಸಿದನು ಛತ್ರಪತಿ ಎಂದರೆ ರಾಜರ ರಾಜ ಎಂದರ್ಥ.

D✅✅✅


Q). ಶಿವಾಜಿ ಮರಣ ಹೊಂದಿದ ವರ್ಷ..........
a) ಕ್ರಿ.ಶ.1680
b) ಕ್ರಿ.ಶ.1984
c) ಕ್ರಿ.ಶ.1686
d) ಕ್ರಿ.ಶ.1690

A✅✅✅ಕ್ರಿ.ಶ.1680

ಶಿವಾಜಿ ಬೆಂಗಳೂರನ್ನು ಆಕ್ರಮಿಸಿ ಅದನ್ನು ಏಕೋಜಿಗೆ ಒಪ್ಪಿಸಿದನು. ಶ್ರೀರಂಗಪಟ್ಟಣವನ್ನು ಮುತ್ತಿ ಅದನ್ನು ಕೊಳ್ಳೆ ಹೊಡೆದನು. 1678 ರಲ್ಲಿ ತುಂಗಭದ್ರ ನದಿಯ ಉತ್ತರ ಭಾಗ ಅವನ ಕೈ ಸೇರಿತು. ಏಫ್ರಿಲ್ 14, 1680 ರಂದು ಶಿವಾಜಿ ತನ್ನ 53 ವಯಸ್ಸಿನಲ್ಲಿ ತೀರಿಕೊಂಡನು.
Q). ಶಿವಾಜಿ ತನ್ನ ರಾಜ್ಯವನನು .......... ಭಾಗಗಳಾಗಿ ವಿಭಾಗಿಸಿದ್ದನು?
a) 2
b) 3
c) 4
d) 5

C✅✅✅ಸರ್ನೋಬತ್ಡ

ಳಿತದ ಅನುಕೂಲಕ್ಕಾಗಿ ಸಾಮ್ರಾಜ್ಯವನ್ನು 4 ಪ್ರಾಂತ್ಯಗಳಾಗಿ (ಪೂನಾ,ಕೊಂಕಣ,ಉತ್ತರ ಕಾರವಾರ, ಸೂರತ್) ನಲ್ಲಿ ವಿಂಗಡಿಸಿದ್ದನು. ಪ್ರತಿ ಪ್ರಾಂತ್ಯಕ್ಕೆ ಒಬ್ಬೊಬ್ಬ ರಾಜ್ಯಪಾಲರನನ್ನು (ಸುಬೇದಾರ) ನೇಮಿಸಿದನು.

JNAANASAMPAD

ನಳಂದ ವಿಶ್ವವಿದ್ಯಾಲಯ

ಭಾರತದ ಪುರಾತನ ಕಾಲದ ಜ್ಞಾನದ ಖನಜ  "ನಾಲಂದಾ ವಿಶ್ವವಿದ್ಯಾಲಯ"  ━━━━━━━━━━━━━━━━━━━━━━ —ತಕ್ಷಶಿಲಾ ತರುವಾಯ ಪ್ರಖ್ಯಾತಿಗೆ ಬಂದ ನಾಲಂದಾ ವಿಶ್ವ...

Current post