ಭಾನುವಾರ, ಮಾರ್ಚ್ 25, 2018

ಭಾರತದ ಚಿಹ್ನೆಗಳು

ಭಾರತದ ಚಿನ್ಹೆಗಳು


ರಾಷ್ಟ್ರಧ್ವಜ‬:

ಭಾರತದ ರಾಷ್ಟ್ರ ಧ್ವಜದ ಉದ್ದ & ಅಗಲದ ಅನುಪಾತ 3:2. ಭಾರತದ ರಾಷ್ಟ್ರಧ್ವಜದ ಬಣ್ಣ ಕೆಸರಿ,ಬಿಳಿ,ಹಸಿರು ಹೊಂದಿದೆ. ರಾಷ್ಟ್ರಧ್ವಜದ ಮಧ್ಯಭಾಗದಲ್ಲಿ 24 ಕಡ್ಡಿಗಳನ್ನು ಹೊಂದಿರುವ ಅಶೋಕನು ಹೊರಡಿಸಿದ ಸಾರನಾಥ ಸೂಪ್ತದಿಂದ ಪಡೆದಿರುವ ಧರ್ಮ ಚಕ್ರವಿದೆ.ಇದು ನಿಲಿ ಬಣ್ಣದಿಂದ ಕೂಡಿದೆ. ಹಾಗೆಯೇ ಸಂವಿಧಾನ ರಚನಾ ಸಭೆಯು 22 ಜುಲೈ 1947 ರಲ್ಲಿ ರಾಷ್ಟ್ರಧ್ವಜವನ್ನು ಅಳವಡಿಸಿಕೊಂಡಿತು. ಆದರೆ ಧ್ವಜಸಂಹಿತೆ ಜಾರಿಗೆ ಬಂದದ್ದು ಮಾತ್ರ (flag code) 26 ಜನೆವರಿ 2002 ರಂದು ಜಾರಿಗೆ ಬಂದಿತು.

 ಭಾರತದ ಪ್ರತಿಯೊಬ್ಬ ರಾಷ್ಟ್ರಧ್ವಜ ಹಾರಿಸುವುದು ಮೂಲಭೂತ ಹಕ್ಕು ಎಂದು ಕಲಂ 19(i) ವಿವರಿಸುವುದು. ಭಾರತದ ತ್ರಿವರ್ಣ ಧ್ವಜವನ್ನು ಮೊಟ್ಟಮೊದಲಿಗೆ ತಯಾರಿಸಿದವರು ಮೇಡಂ ಭೀಕಾಜಿ ಕಾಮಾ.
ಆದರೆ ಭಾರತದ ಧ್ವಜವನ್ನು ಮೊದಲಿಗೆ ಲಾಹೋರದ ರಾವಿ ನದಿಯ ದಂಡೆ ಮೇಲೆ 1928 ರ ಕಾಂಗ್ರೆಸ್ಸ ಅಧಿವೇಶನದಲ್ಲಿ ಜವಾಹರಲಾಲ ನೆಹರೂ ಹಾರಿಸಿದರು. ಈಗ ಕೆಂಪು ಕೋಟೆಯ ಮೇಲೆ ಪ್ರತಿ ವರ್ಷ ರಾಷ್ಟ್ರೀಯ ಧ್ವಜ ಹಾರಿಸುವವರು ಪ್ರಧಾನಮಂತ್ರಿಗಳು. ತ್ರಿವರ್ಣ ಧ್ವಜದ ವಿನ್ಯಾಸಗೊಳಿಸಿದವರು ಪಿಂಗಳಿ ವೆಂಕಯ್ಯ.
ನಮ್ಮ ರಾಷ್ಟ್ರ ಧ್ವಜ ಕರ್ನಾಟಕದಲ್ಲಿ ಧಾರವಾಡ ಜಿಲ್ಲೆಯ ಗರಗ ಗ್ರಾಮದಲ್ಲಿ ತಯಾರಿಸಲಾಗುತ್ತದೆ.


ರಾಷ್ಟ್ರೀಯ_ಚಿನ್ಹೆ‬: 

ಭಾರತದ ರಾಷ್ಟ್ರೀಯ ಚಿನ್ಹೆಯನ್ನು ಉತ್ತರ ಪ್ರದೇಶದಲ್ಲಿ ಅಶೋಕನು ಹೊರಡಿಸಿರುವ ಸಾರನಾಥ ಸೂಪ್ತದಿಂದ ಪಡೆಯಲಾಗಿದೆ. ಇದರಲ್ಲಿ ನಾಲ್ಕು ಸಿಂಹಗಳು, ನೆಗೆಯುತ್ತಿರುವ ಕುದುರೆ, ಗೂಳಿ & ಆನೆಗಳಿವೆ. ಮಧ್ಯದಲ್ಲಿ ಧರ್ಮಚಕ್ರವಿದೆ. ಭಾರತ ಸರ್ಕಾರವು ಇದನ್ನು 26 ಜನೆವರಿ 1950 ರಂದು ಅಳವಡಿಸಿಕೊಂಡಿತು. ಇದರ ಕೆಳಗೆ ಮಂಡಕೊಪನಿಷತ್ತಿನಿಂದ ಪಡೆದಿರುವ ಸತ್ಯಮೇವ ಜಯತೇ ಯನ್ನು ದೇವನಾಗರಿ ಲಿಪಿಯಲ್ಲಿ ಬರೆಯಲಾಗಿದೆ. ರಾಷ್ಟ್ರೀಯ ಚಿನ್ಹೆಯು ಭಾರತದ ಸರ್ಕಾರದ ಹಕ್ಕನ್ನು ಸೂಚಿಸುವುದು.

ರಾಷ್ಟ್ರೀಯ_ಹೂವು‬:

ಭಾರತದ ಪುಷ್ಪ - ಕಮಲದ ಹೂವು. ಪುರಾಣಗಳಲ್ಲಿ ಕಮಲದ ಹೂ ತ್ಯಾಗದ ಸಂಕೇತವಾಗಿದೆ. ಕಮಲದ ವೈಜ್ಞಾನಿಕ ಹೆಸರು - ನೀಲುಂಬಾ ನುಸಿಫೇರಾ(Nelumbo nucifera).  ಸಸ್ಯ ಸಂಪತ್ತಿನಲ್ಲಿ ಭಾರತ ಜಗತ್ತಿನಲ್ಲಿ 10 ನೇ ಸ್ಥಾನದಲ್ಲಿದೆ.

‎ರಾಷ್ಟ್ರಗೀತೆ‬: 

ಭಾರತದ ರಾಷ್ಟ್ರಗೀತೆ 'ಜನಗಣಮನ". ಮೂಲತ ಇದು ಬಂಗಾಳಿ ಭಾಷೆಯಲ್ಲಿದ್ದು ಇದನ್ನು ರಚಿಸಿದವರು ರವೀಂದ್ರನಾಥ ಟ್ಯಾಗೋರ. ಸಂವಿಧಾನ ರಚನಾ ಸಭೆಯು ಹಿಂದಿ ಭಾಷಾಂತರದ ರಾಷ್ಟ್ರಗೀತೆಯನ್ನು 24 ಜನೆವರಿ 1950 ರಂದು ರಾಷ್ಟ್ರಗೀತೆಯಾಗಿ ಅಳವಡಿಸಿಕೊಂಡಿತು. ಈ ಗೀತೆಯನ್ನು ಮೊದಲಿಗೆ 1911 ರ ಕಲ್ಕತ್ತಾ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಯಿತು. ಜನಮಣ ಗೀತೆಯು ಮೂಲತಃ ಐದು ಪಂಕ್ತಿಗಳಿಂದ ಕೂಡಿದೆ ಅದರ ಮೊದಲನೇ ಪಂಕ್ತಿಯನ್ನು ಮಾತ್ರ ರಾಷ್ಟ್ರಗೀತೆಯಾಗಿ ಅಳವಡಿಸಕ್ಕೊಳ್ಳಲಾಗಿದೆ. ಭಾರತದ ರಾಷ್ಟ್ರಗೀತೆಯಲ್ಲಿ ಒಟ್ಟು 13 ಸಾಲುಗಳಿವೆ.
ರಾಷ್ಟ್ರಗೀತೆಯನ್ನು 48 ಸೆಕೆಂಡುಗಳಿಗೆ ಕಡಿಮೆ ಇಲ್ಲದಂತೆ ಹಾಗೂ 52 ಸೆಕೆಂಡುಗಳು ಮೀರದಂತೆ ಹಾಡುವ ನಿಯಮವಿದೆ. ಹಾಗೆಯೇ ರವೀಂದ್ರನಾಥ ಟ್ಯಾಗೋರ್ ರವರ 'ಅಮರ್ ಸೋನಾರ್ ಬಾಂಗ್ಲಾ' ಗೀತೆಯನ್ನು ಬಾಂಗ್ಲಾದೇಶ ತನ್ನ ರಾಷ್ಟ್ರಗೀತೆಯಾಗಿ ಅಳವಡಿಸಿಕೊಂಡಿದೆ( ಈ ಗೀತೆಯನ್ನು 1905 ರಲ್ಲಿ ಬಂಗಾಳ ವಿಭಜನೆ ವಿರೋಧಿಸಿ ರಚಿಸಿದ್ದರು)
ನಂತರದಲ್ಲಿ 1905 ರ ಬಂಗಾಳ ವಿಭಜನೆ ವಿರೋಧಿಸಿ ಇವರು ಹಿಂದೂ ಮುಸ್ಲಿಂರಿಗೆ "ರಕ್ಷಾಬಂಧನ" ಆಚರಿಸುವಂತೆ ಕರೆ ನೀಡಿದ್ದರು.


‎ರಾಷ್ಟ್ರೀಯ_ಹಾಡು‬:

ಸಂಸ್ಕ್ರತದಲ್ಲಿರುವ ವಂದೇ ಮಾತರಂ ಈ ಗೀತೆಯನ್ನು ಭಾರತದ ಸಂವಿಧಾನ ರಚನಾ ಸಭೇಯನ್ನು ಜನೆವರಿ 24 1950 ರಂದು ಅಳವಡಿಸಿಕೊಂಡಿತು. ಈ ಗೀತೆಯನ್ನು ಬಂಕೀಮಚಂದ್ರ ಚಟರ್ಜಿ ಚಟ್ಟೋಪಧ್ಯಾಯರು 1882 ರಲ್ಲಿ ರಚಿಸಿದ 'ಆನಂದಮಠ' ಕಾದಂಬರಿಯಿಂದ ಆಯ್ದುಕ್ಕೊಳ್ಳಲಾಗಿದೆ. ಈ ಗೀತೆಯನ್ನು ಮೊಟ್ಟಮೊದಲಿಗೆ 1896 ರ ಕಲ್ಕತ್ತಾ ಕಾಂಗ್ರೆಸ್ಸ ಅಧಿವೇಶನದಲ್ಲಿ ಹಾಡಲಾಯಿತು. ಭಾರತಕ್ಕೆ ಸ್ವಾತಂತ್ರ ದೊರೆಯವರೆಗೂ ಈ ಗೀತೆಯನ್ನು ರಾಷ್ಟ್ರಗೀತೆಯಾಗಿ ಹಾಡಲಾಗುತ್ತಿತ್ತು. ಮತ್ತು
 ಈ ಗೀತೆಯನ್ನು 1920 ರಲ್ಲಿ ಇಂಗ್ಲೀಷ ಭಾಷೆಗೆ ಭಾಷಾಂತರಿಸಿದವರು ಶ್ರೀಅರವಿಂದೋ ಘೋಷ್.

‎ರಾಷ್ಟ್ರೀಯ_ಪಂಚಾಂಗ‬:

ರಾಷ್ಟ್ರೀಯ ಪಂಚಾಂಗವು ಶಕ ವರ್ಷವನ್ನು ಆಧರಿಸಿದ ಗ್ರೇಗೋರಿಯನ್ನ ಪಂಚಾಂಗವನ್ನು ಹೋಲುತ್ತದೆ. ಇದನ್ನು ಮಾರ್ಚ 22, 1957 ರಂದು ಅವಡಿಸಿಕ್ಕೊಳಲಾಗಿದೆ. ಸಾಮಾನ್ಯ ವರ್ಷದ ಮೊದಲ ದಿನಾಂಕ - ಮಾರ್ಚ 21 ಮತ್ತು ಅಧಿಕ ವರ್ಷದ ಮೊದಲ ದಿನಾಂಕ - ಮಾರ್ಚ 22.
                                       ಕ್ರಿ.ಶ 78 ಶಾಲಿವಾನ ಶಕೆ ವರ್ಷವನ್ನು ಕುಶಾನರ ಅರಸ ಕನಿಷ್ಕನು ಅಧಿಕಾರಕ್ಕೆ ಬಂದಿರುವದರ ನೆನಪಿಗಾಗಿ ಜಾರಿಗೆ ತಂದನು.
2015 ರ ವರ್ಷವನ್ನು ಭಾರತೀಯ ಕ್ಯಾಲೆಂಡರನಂತೆ 1937 ನೇ ವರ್ಷ ಎನ್ನಲಾಗುವುದು. ಇನ್ನಷ್ಟು ವಿಶೇಷ ವೆಂದರೇ ಭಾರತದ ರಾಷ್ಟ್ರೀಯ ಪಂಚಾಂಗದ ಪ್ರಕಾರ ಮೊದಲನೇ ತಿಂಗಳು - ಚೈತ್ರ. ಕೊನೆಯ ತಿಂಗಳು - ಫಾಲ್ಗುಣ. ರಾಷ್ಟ್ರೀಯ ಪಂಚಾಂಗದ ತಿಂಗಳುಗಳು : ಚೈತ್ರ ವೈಶಾಖ ಜೇಷ್ಟ ಆಶಾಢ ಶ್ರಾವಣ ಭಾದ್ರಪದ ಅಶ್ವಿನ್ ಕಾರ್ತಿಕ ಮೃಗಶಿರ ಪುಷ್ಯ ಮಾಘ ಫಾಲ್ಗುಣ

ರಾಷ್ಟ್ರೀಯ_ಕ್ರೀಡೆ‬: 

ಭಾರತದ ರಾಷ್ಟ್ರೀಯ ಕ್ರೀಡೆ - ಹಾಕಿ
ಹಾಕಿ ಕ್ರೀಡೆಯಲ್ಲಿ ಒಂದು ತಂಡದಲ್ಲಿ ಒಟ್ಟು 11 ಆಟಗಾರರಿರುತ್ತಾರೆ. ಭಾರತ ಹಾಕಿ ತಂಡ ಒಟ್ಟು 08 ಸಲ ಓಲಂಪಿಕ್ಸನಲ್ಲಿ ಚಿನ್ನದ ಪದಕ ಗೆದ್ದಿದೆ. ಕರ್ನಾಟಕದ ಕೊಡಗು ಜಿಲ್ಲೆಗೆ ಹಾಕಿಯ ತವರೂರು ಎನ್ನುತ್ತಾರೆ. ಮತ್ತು ಇಲ್ಲಿಯ ಮಾಂತ್ರಿಕ ಆಟಗಾರರೆಂದೇ ಹೆಸರಾದ ಹಾಕಿಯ ಮಾಂತ್ರಿಕ - ಧ್ಯಾನಚಂದ್. ಧ್ಯಾನಚಂದರವರ ಹುಟ್ಟು ಹಬ್ಬದ ದಿನವಾದ ಅಗಷ್ಟ್ -29 ನ್ನು ಪ್ರತಿವರ್ಷ ಭಾರತದಲ್ಲಿ ರಾಷ್ಟ್ರೀಯ ಕ್ರೀಡಾ ದಿನವಾಗಿ ಆಚರಿಸುವರು.
ಕರ್ನಾಟಕದ ರಾಷ್ಟ್ರೀಯ ಕ್ರೀಡೆ ಸಹ ಹಾಕಿ ಆಗಿದೆ.
ಇಂದಿರಾಗಾಂಧಿ ಗೋಲ್ಡ್ ಕಪ್ ಭಾರತದ ಪ್ರಮುಖ ಹಾಕಿ ಕ್ರೀಡೆಯ ಟ್ರೋಫಿಯಾಗಿದೆ. ಹಾಗೂ ಅಂತರರಾಷ್ಟ್ರೀಯ ಹಾಕಿ ಪಂದ್ಯವೊಂದರ ಅವಧಿ - 70 ನಿಮಿಷಗಳಾಗಿದೆ.

ರಾಷ್ಟ್ರೀಯ_ನದಿ‬: 

ಭಾರತದ ರಾಷ್ಟ್ರೀಯ ನದಿ - ಗಂಗಾನದಿ
ನವೆಂಬರ್ 04, 2008 ರಂದು ಗಂಗಾನದಿಯನ್ನು ಭಾರತದ ರಾಷ್ಟ್ರೀಯ ನದಿಯನ್ನು ಪ್ರಧಾನಮಂತ್ರಿಗಳು ಘೋಷಿಸಿದರು.
 ಭಾರತದಲ್ಲಿ ಹರಿಯುವ ನದಿಗಳಲ್ಲಿ ಗಂಗಾ ನದಿ ಅತಿ ಉದ್ದವಾಗಿದೆ(2510 km) ಮತ್ತು
ಗಂಗಾ ನದಿ ಪ್ರಾಧಿಕಾರ ಸಂಸ್ಥೆ ಇರುವುದು ಬಿಹಾರದ ಪಾಟ್ನಾದಲ್ಲಿ.

‎ರಾಷ್ಟ್ರೀಯ_ಜಲಪ್ರಾಣಿ‬:

ಭಾರತ ಸರ್ಕಾರವು ಅಕ್ಟೋಬರ್ 05,2009 ರಂದು ಗಂಗಾ ನದಿಯ ಡಾಲ್ಫಿನ್ ಭಾರತದ ರಾಷ್ಟ್ರೀಯ ಜಲಪ್ರಾಣಿ ಎಂದು ಘೋಷಿಸಿದೆ ಮತ್ತು ಡಾಲ್ಫಿನದ ವೈಜ್ಞಾನಿಕ ಹೆಸರು - ಪ್ಲಾಂಟಾನಿಷ್ಟಾ ಗ್ಯಾಂಗ್ಯಾಟಿಕಾ.((Platanista gangetica)

ರಾಷ್ಟ್ರೀಯ_ಪಕ್ಷಿ‬:

ಭಾರತದ ರಾಷ್ಟ್ರೀಯ ಪಕ್ಷಿ - ನವಿಲು. ಭಾರತದ ವನ್ಯಜೀವಿ ರಕ್ಷಣಾ ಕಾಯ್ದೆ - 1972 ರ ಅಡಿಯಲ್ಲಿ ನವಿಲಗಳನ್ನು ಸಂರಕ್ಷಿಸಲಾಗುತ್ತಿದೆ. ನವಿಲಿನ ವೈಜ್ಞಾನಿಕ ಹೆಸರು - ಪಾವೋ ಕ್ರಿಸ್ಟಾಟಸ್ (pavo cristatus). ಹಾಗೇಯೇ ಮಂಡ್ಯ ಜಿಲ್ಲೆ ಆದಿಚುಂಚನಗಿರಿ ಹಾಗೂ ಹಾವೇರಿ ಜಿಲ್ಲೆಯ ಬಂಕಾಪೂರದಲ್ಲಿ ನವಿಲು ವನ್ಯಧಾಮಗಳಿವೆ.

ರಾಷ್ಟ್ರೀಯ_ಮರ‬:

 ಭಾರತದ ರಾಷ್ಟ್ರೀಯ ಮರ - ಬನಯಾನ್ ಅಥವಾ ಅರಳಿ ಮರ. ಅರಳಿ ಮರದ ವೈಜ್ಞಾನಿಕ ಹೆಸರು - ಫೈಕಾಸ್ ಬೆಂಗಾಲೆನಿಸ್ (ficus benghalensis)
ಮತ್ತು ಅರಳಿ ಮರದ ಬೇರುಗಳು ತಂತುರೂಪಗಳಾಗಿವೆ. ಹಾಗೆಯೇ ವಿಶೇಷವೆಂದರೇ ಗೌತನ ಬುದ್ದನಿಗೆ ಜ್ಞಾನೋದಯವಾದದ್ದು ಬಿಹಾರದ ಗಯಾದ ನಿರಂಜನ ನದಿಯ ದಡದಲ್ಲಿರುವ ಅರಳಿ ಮರದ ಕೆಳಗೆ. ಗೌತಮ ಬುದ್ದನ ಆಧ್ಯಾತ್ಮಿಕ ಗುರು - ಅಲಾರ ಕಮಾ. ಭಾರತದ ಅತ್ಯಂತ ದೊಡ್ಡ ಅರಳಿ ಇರುವುದು - ಕಲ್ಕತ್ತದಲ್ಲಿ. ಪ್ರಪಂಚದ ಅತಿ ದೊಡ್ಡ ವೃಕ್ಷ - ದೈತ್ಯ ಸಿಕೋಯ್ ಮರ.
ಹಾಗೆಯೇ ಮರಗಳ ಆಯುಷ್ಯವನ್ನು ನಿರ್ಧರಿಸುವುದು ಅವುಗಳು ಕಾಂಡದಲ್ಲಿರುವ ಸೆಲ್ಯುಲಸನಿಂದ ಮಾಡಲ್ಪಟ್ಟಿರುವ ವೃತ್ತಗಳ ಸಂಖ್ಯೆಯ ಆಧಾರದ ಮೇಲೆ.

‎ರಾಷ್ಟ್ರೀಯ_ಹಣ್ಣು‬: 

ಭಾರತದ ರಾಷ್ಟ್ರೀಯ ಹಣ್ಣು - ಮಾವಿನ ಹಣ್ಣು. ಮಾವಿನ ವೈಜ್ಞಾನಿಕ ಹೆಸರು - ಮ್ಯಾಂಜಿಫೇರಾ ಇಂಡಿಕಾ (mangifera indica)
ಮಾವಿನ ಹಣ್ಣಿನಲ್ಲಿರುವ ಜೀವಸತ್ವಗಳು - A,C,D
ಹಾಗೆಯೇ ಭಾರತವು ಮಾವಿನ ಉತ್ಪಾದನೆಯಲ್ಲಿ ಜಗತ್ತಿನಲ್ಲಿ ಪ್ರಥಮ ಸ್ಥಾನದಲ್ಲಿದೆ.

ರಾಷ್ಟ್ರೀಯ_ವಂಶಪಾರಂಪರ್ಯ_ಪ್ರಾಣಿ‬:

ಭಾರತ ಸರ್ಕಾರವು ಅಕ್ಟೋಬರ್ 23, 2010 ರಂದು ಆನೆಯನ್ನು ಭಾರತದ ವಂಶಪಾರಂಪರ್ಯ ಪ್ರಾಣಿ ಎಂದು ಘೋಷಿಸಿದೆ. ಆನೆಯ ವೈಜ್ಞಾನಿಕ ಹೆಸರು - ಎಲಿಫಾಸ್ ಮ್ಯಾಕ್ಷಿಮಸ್ (elephas maximus)
 ಮತ್ತು ಭೂವಾಸಿಗಳಲ್ಲಿ ದೊಡ್ಡದಾದ ಪ್ರಾಣಿ - ಆಪ್ರಿಕಾದ ಆನೆ. ಭಾರತದ ಆನೆಗಳ ಯೋಜನೆ ಜಾರಿಗೆ ತಂದ ವರ್ಷ - 1992. ಭಾರತದಲ್ಲಿ ಅತಿ ಹೆಚ್ಚು ಆನೆಗಳನ್ನು ಹೊಂದಿರುವ ರಾಜ್ಯ - ಕರ್ನಾಟಕ.
ಕರ್ನಾಟಕದ ರಾಜ್ಯ ಪ್ರಾಣಿ - ಆನೆ.

ರಾಷ್ಟ್ರೀಯ_ಪ್ರಾಣಿ‬:

 1972 ರಿಂದ ಭಾರತದ ರಾಷ್ಟ್ರೀಯ ಪ್ರಾಣಿ ಹುಲಿ ಎಂದು ಘೋಷಿಸಲಾಯಿತು. ಭಾರತದ ಮೊದಲ ರಾಷ್ಟ್ರೀಯ ಪ್ರಾಣಿ ಸಿಂಹವಾಗಿತ್ತು. ಮತ್ತೂ
ಹುಲಿಯ ವೈಜ್ಞಾನಿಕ ಹೆಸರು - ಪ್ಯಾಂಥೇರಾ ಟ್ರೈಗಿಸ್. (Panthera tigris). ಭಾರತದ ಮೊದಲ ಹುಲಿ ಅಭಯಾರಣ್ಯ - ಉತ್ತರಖಂಡದ ಕಾರ್ಬೆಟ್
ಹಾಗೆಯೇ ಭಾರತದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯ - ಕರ್ನಾಟಕ. ವಿಸ್ತೀರ್ಣದಲ್ಲಿ ಭಾರತದ ದೊಡ್ಡದಾದ ಹುಲಿ ಅಭಯರಾಣ್ಯ - ಆಂದ್ರಪ್ರದೇಶದ ನಾಗಾರ್ಜುನ ಸಾಗರ. ಭಾರತದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಅಭಯಾರಣ್ಯ - ಪಶ್ಚಿಮ ಬಂಗಾಳದ ಸುಂದರಬನ್ಸ್
ಮತ್ತು ಭಾರತದಲ್ಲಿ ಹುಲಿ ಯೋಜನೆ ಜಾರಿಗೆ ಬಂದ ವರ್ಷ - 1972

ರಾಷ್ಟ್ರೀಯ_ಕಟ್ಟಡ‬:

ದೆಹಲಿಯಲ್ಲಿರುವ ಇಂಡಿಯಾ ಗೇಟ್ ಇದನ್ನು ಎರಡನೇ ಮಹಾಯುದ್ದದಲ್ಲಿ ಮರಣ ಹೊಂದಿರುವ ಭಾರತೀಯ ಸೈನಿಕರ ನೆನಪಿಗಾಗಿ ಕಟ್ಟಿಸಲಾಗಿದೆ.

ರಾಷ್ಟ್ರೀಯ_ದೊರೆ‬:

ಮೌರ್ಯ ವಂಶದ ಚಂದ್ರಗುಪ್ತ ಮೌರ್ಯ.



∆∆∆∆∆∆∆∆∆∆∆∆∆∆∆∆∆∆∆∆∆∆∆∆∆∆∆∆∆∆∆∆∆∆∆
ಸಂಗ್ರಹ: ANAND SHIKKERI (Asst master).
∆∆∆∆∆∆∆∆∆∆∆∆∆∆∆∆∆∆∆∆∆∆∆∆∆∆∆∆∆∆∆∆∆∆∆

ಭಾನುವಾರ, ಮಾರ್ಚ್ 11, 2018

ದಕ್ಷಿಣ ಭಾರತದ ಶಾಸನಗಳು & ಅದರ ನಿರ್ಮಾಪಕರು


*ದಕ್ಷಿಣ ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು ಮತ್ತು ಅವುಗಳ ನಿರ್ಮಾಪಕರು (Famous Ancient Historical Inscriptions in India),*


■ ದಕ್ಷಿಣ ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು :


● ಸಮುದ್ರಗುಪ್ತನ ಅಲಹಾಬಾದ್ ಶಾಸನದ ಕರ್ತೃ ----- ಹರಿಷೇಣ


● ಸಮುದ್ರಗುಪ್ತನನ್ನು ನೂರು ಕದನಗಳ ಸಿಂಹ ಎಂದು ಸಂಭೋದಿಸಿದ ಶಾಸನ ----- ಅಲಹಾ ಬಾದ್ ಸ್ತಂಭ ಶಾಸನ


● ಅಲಹಾಬಾದ್ ಸ್ತಂಭ ಶಾಸನ ಮೊದಲು ಇದ್ದ ಪ್ರದೇಶ ----- ಕೌಸಂಬಿ


● ಅಲಹಾಬಾದ್ ಸ್ತಂಭ ಶಾಸನವನ್ನು ಕೌಸಂಬಿಯಿಂದ ಅಲಹಾಬಾದಿಗೆ ಸಾಗಿಸಿದ ತುಘಲಕ್ ದೊರೆ ----- ಫೀರೋಜ್ ಷಾ ತುಘಲಕ್


● ದೆಹಲಿಯಲ್ಲಿರುವ ಗುಪ್ತರ ಕಾಲದ ಸ್ತಂಭ ಶಾಸನ ----- ಮೆಹ್ರೋಲಿ ಕಂಬ್ಬಿಣದ ಸ್ತಂಭ ಶಾಸನ


● ಫಿರೋಜ್ ಷಾ ತುಘಲಕ್, ದೆಹಲಿಗೆ ರವಾನಿಸಿದ ಅಶೋಕನ ಶಿಲಾಶಾಸನಗಳು ----- ಮಿರತ್ ಶಾಸನ ಹಾಗೂ ತೋಪ್ರ ಶಾಸನ


● ಗ್ರೀಕ್ ಹಾಗೂ ಅರೇಬಿಕ್ ಭಾಷೆಗಳಲ್ಲಿರುವ ಅಶೋಕನ ಶಾಸನಗಳು ಇರುವ ಪ್ರದೇಶ ----- ಕಂದಾಹಾರ್


● ಗಿರ್ನಾರ್ ಹಾಗೂ ಜುನಾಗಡ್ ಶಾಸನದ ಕರ್ತೃ ----- ರುದ್ರದಾಮನ್


● ಸುದರ್ಶನ ಕೆರೆಯ ಇತಾಹಾಸದ ಮೇಲೆ ಬೆಳಕು ಚೆಲ್ಲುವ ಶಾಸನಗಳು ----- ರುದ್ರದಾಮನ್ ಹಾಗೂ ಸ್ಕಂದ ಗುಪ್ತನ ಶಾಸನಗಳು


● ತೆಲುಗಿನ ಪ್ರಥಮ ಶಾಸನ ----- ಕಲಿಮಲ್ಲ ಶಾಸನ


● ತಮಿಳಿನ ಪ್ರಥಮ ಶಾಸನ ----- ಮಾಂಗುಳಂ ಶಾಸನ


● ಶಾಸನಗಳ ಪಿತಾಮಹಾ ಶಾಸನಗಳ ರಾಜ ಸ್ವಕಥನಗಾರ ಎಂದು ಖ್ಯಾತಿವೆತ್ತ ಮೌರ್ಯ ಅರಸ ----- ಅಶೋಕ


● ಅಶೋಕನ ಶಾಸನಗಳು ಈ ಲಿಪಿಯಗಳಲ್ಲಿ ಲಭ್ಯವಾಗಿದೆ ----- ಬ್ರಾಹ್ಮಿ ಹಾಗೂ ಖರೋಷ್ಠಿ


● ಕಳಿಂಗ ಯುದ್ಧದ ಬಗೆಗೆ ಬೆಳಕು ಚೆಲ್ಲುವ ಅಶೋಕನ ಶಾಸನ -----13 ನೇ ಶಿಲಾ ಶಾಸನ


● ಅಸೋಕನ ಶಾಸನವನ್ನು ಮೊಟ್ಟ ಮೊದಲು ಓದಿದವರು -----1837 ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಜೇಮ್ಸ್ ಪ್ರಿನ್ಸಸ್


● ಅಶೋಕನನ್ನು ಪ್ರಿಯದರ್ಶಿ ಅಶೋಕ ಎಂದು ಸಂಭೋದಿಸಿಲಾದ ಶಾಸನ ----- ಮಸ್ಕಿ ಶಾಸನ


● ಮಸ್ಕಿ ಶಾಸನ ಪ್ರಸ್ತುತ ಈ ಜಿಲ್ಲೆಯಲ್ಲಿದೆ ----- ಕೊಪ್ಪಳ


● ಅಶೋಕನನ್ನು ರಾಜ ಅಶೋಕ , ದೇವನಾಂಪ್ರಿಯ ಎಂಬ ಹೆಸರುಗಳಿಂದ ಸಂಭೋಧಿಸಲಾದ ಶಾಸನ ----- ಬಳ್ಳಾರಿ ಜಿಲ್ಲೆಯ ನಿಟ್ಟೂರು ಶಾಸನ


● ನಿಟ್ಟೂರಿನ ಶಾಸನದ ರಚನಾಕಾರ ----- ಉಪಗುಪ್ತ


● ನಿಟ್ಟೂರಿನ ಶಾಸನದ ಲಿಪಿಕಾರ ----- ಚಡಪ


● ಸಾರಾನಾಥದ ಅಶೋಕನ ಸ್ತಂಭವನ್ನು ಭಾರತ ಸರ್ಕಾರ ರಾಷ್ಟ್ರೀಯ ಲಾಂಛನವನ್ನಾಗಿ ಅಳವಡಿಸಿಕೊಂಡ ವರ್ಷ ----- 1950ರಲ್ಲಿ


● ಸಾರಾನಾಥದ ಸ್ಥೂಪದ ಕೆಳಭಾಗದಲ್ಲಿ ಸತ್ಯ ಮೇವ ಜಯತೆ ಎಂಬ ಹೇಳಿಕೆಯನ್ನು ಈ ಲಿಪಿಯಲ್ಲಿ ಬರೆಯಲಾಗಿದೆ ----- ದೇವನಾಗರಿ


● ಅಶೋಕನು ಬೌದ್ಧಧರ್ಮವನ್ನು ಸ್ವೀಕರಿಸಿದ ಪರಿಯನ್ನು ತಿಳಿಸುವ ಶಾಸನ ----- ಬಬ್ರುಶಾಸನ


● ಮೊಟ್ಟ ಮೊದಲ ಭಾರಿಗೆ ಸಂಸ್ಕೃತದಲ್ಲಿ ಶಾಸನ ಬರೆಸಿದ ರಾಜ ----- ಶಕರ ಪ್ರಸಿದ್ದ ಅರಸ ರುದ್ರಧಮನ


● ಅಮೋಘವರ್ಷನು ಕೊಲ್ಲಾಪುರದ ಮಹಾಲಕ್ಷ್ಮೀಗೆ ತನ್ನ ಎಡಗೈ ಬೆರಳನ್ನು ಕತ್ತರಿಸಿ ಸಮರ್ಪಿಸಿದ ಬಗ್ಗೆ ತಿಳಿಸುವ ಶಾಸನ ----- ಸಂಜಾನ್ ದತ್ತಿ ಶಾಸನ


● ದಂತಿದುರ್ಗ ----- ಸಮನ್ ಗಡ್ ಹಾಗೂ ಎಲ್ಲೋರದ ಗುಹಾ ಶಾಸನ


● ಒಂದನೇ ಕೃಷ್ಣ ----- ಭಾಂಡ್ಕ ಮತ್ತು ತಾಳೇಗಾಂ ಶಾಸನ


● ಧೃವ ----- ಜೆಟ್ಟಾಯಿ ಶಾಸನ


● ಅಮೋಘವರ್ಷ ----- ಸಂಜಾನ್ ತಾಮ್ರ ಶಾಸನ


© ಬಾದಾಮಿ ಶಾಸನದ ಕರ್ತೃ ----- 1 ನೇ ಪುಲಿಕೇಶಿ




● ಮಹಾಕೂಟ ಸ್ತಂಭ ಶಾಸನದ ಕರ್ತೃ ----- ಮಂಗಳೇಶ


● ಮಹಾಕೂಟ ಸ್ತಂಭ ಶಾಸನ ----- ಬಾದಾಮಿಯ ಮಹಾಕೂಟೇಶ್ವರ ದೇವಲಾಯದಲ್ಲಿದೆ


●ರವಿ ಕೀರ್ತೀ ----- ಐಹೋಳೆ ಶಾಸನ


● ಐಹೋಳೆ ಶಾಸನ ----- ಮೇಗುತಿ ಜಿನ ದೇವಾಲಯದಲ್ಲಿ ಕೆತ್ತಲಾಗಿದೆ


● ಚಂದ್ರವಳ್ಳಿ ಶಾಸನದ ಕರ್ತೃ ----- ಮಯೂರವರ್ಮ (ಚಿತ್ರದುರ್ಗ)


● ಬ್ರಾಹ್ಮಿಲಿಪಿಯಲ್ಲಿರುವ ಪ್ರಪ್ರಥಮ ಸಂಸ್ಕೃತ ಶಾಸನ ----- ಚಂದ್ರವಳ್ಳಿ ಶಾಸನ


● ಕರ್ನಾಟಕದ ಅತ್ಯಂತ ಪ್ರಾಚೀನ ಸಂಸ್ಕೃತ ಶಾಸನ ----- ಚಂದ್ರವಳ್ಳಿ ಶಾಸನ


● ಕನ್ನಡದ ಮೊಟ್ಟ ಮೊದಲ ಶಾಸನ ----- ಹಲ್ಮಿಡಿ ಶಾಸನ


● ಹಲ್ಮಿಡಿ ಶಾಸನ ಇಲ್ಲಿ ಇರುವುದು ----- ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಲ್ಮಿಡಿ ಗ್ರಾಮ


● ಹಲ್ಮಿಡಿ ಶಾಸನದ ಕರ್ತೃ ----- ಕಾಕುಸ್ಥವರ್ಮ


● ತಾಳಗುಂದ ಶಾಸನದ ಕರ್ತೃ ----- ಕವಿ ಕುಬ್ಜ


● ತಾಳಗುಂದ ಶಾಸನವನ್ನು ಬರೆಯಿಸಿದವರು ----- ಶಾಂತಿ ವರ್ಮ (ಶಿವಮೊಗ್ಗ ದಲ್ಲಿದೆ)


● ಮಹಿಪವೊಲು ತಾಮ್ರ ಶಾಸನದ ಕರ್ತೃ ----- ಶಿವಸ್ಕಂದ ವರ್ಮ


● ವಾಯಲೂರು ಸ್ತಂಭ ಶಾಸನದ ಕರ್ತೃ ----- ರಾಜ ಸಿಂಹ


● ಕರ್ನಾಟಕದ ಸಂಗೀತವನ್ನು ತಿಳಿಸುವ ಮೊಟ್ಟ ಮೊದಲ ಶಾಸನ ----- 1ನೇ ಮಹೇಂದ್ರ ಮರ್ಮನ್ ನ “ಕುಡಿಮಿಯಾ ಮಲೈ ಶಾಸನ ”


● ನಾನಾ ಘಾಟ್ ಶಾಸನದ ಕರ್ತೃ ----- ನಾಗನೀಕ


● ಗುಹಾಂತರ ನಾಸಿಕ್ ಶಾಸನದ ಕರ್ತೃ ----- ಗೌತಮೀ ಬಾಲಾಶ್ರೀ


● ವೆಳ್ವಕುಡಿ ತಾಮ್ರ ಶಾಸನದ ಕರ್ತೃ ----- ಪರಾಂತಕ ಚೋಳ


°°°°°°°°°°°′°°°°°°°°°°°°°°°°°°°°°°°°°°°°°°°°°°°° ಸಂಗ್ರಹ:ANAND SHIKKERI (Asst Master)

ಕೃಪೆ: ವಾಟ್ಸಪ್ ಮಾಹಿತಿ.
°°°°°°°°°°°°°°°°°°°°°°°°°°°°°°°°°°°°°°°°°°′°°°°°°°

ಶುಕ್ರವಾರ, ಮಾರ್ಚ್ 9, 2018

ಪ್ರಿಟ್ಜಕರ್ ವಾಸ್ತುಶಿಲ್ಪ ಗೌರವ ಮತ್ತು ಬಾಲಕೃಷ್ಣ ದೋಷಿ


ಭಾರತದ ವಾಸ್ತುಶಿಲ್ಪಿ ಬಾಲಕೃಷ್ಣ ದೋಷಿ ಅವರಿಗೆ ನೊಬೆಲ್‌ಗೆ ಸಮಾನವಾದ ‘ಪ್ರಿಟ್ಜಕರ್‌’ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.


60 ವರ್ಷಗಳಿಗಿಂತಲೂ ಹೆಚ್ಚು ಕಾಲ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿಯು ₹65ಲಕ್ಷ (1ಲಕ್ಷ ಡಾಲರ್‌) ಮೊತ್ತವನ್ನು ಒಳಗೊಂಡಿದೆ.

ಬೆಂಗಳೂರು ಐಐಎಂ, ಅಹಮದಾಬಾದ್‌ನ ‘ಸೆಂಟರ್ ಫಾರ್ ಎನ್ವಿರಾನ್‌ಮೆಂಟಲ್ ಪ್ಲಾನಿಂಗ್ ಅಂಡ್ ಟೆಕ್ನಾಲಜಿ’ ಸೇರಿದಂತೆ ಹಲವು ಕಟ್ಟಡಗಳಿಗೆ ಬಾಲಕೃಷ್ಣ ವಿನ್ಯಾಸ ಮಾಡಿದ್ದಾರೆ.

ಬಾಲಕೃಷ್ಣ ದೋಷಿ ಜನನ

ಆಗಸ್ಟ್ ೨೬, ೧೯೨೭ ರಂದು ಪುಣೆಯಲ್ಲಿ ಜನಿಸಿದರು.‌
ಅವರ ಶೈಕ್ಷಣಿಕ ವೃತ್ತಿಜೀವನವನ್ನು ಮುಂಬೈನಲ್ಲಿರುವ ಸರ್ ಜೆಜೆ ಕಾಲೇಜ್ ಆಫ್ ಆರ್ಕಿಟೆಕ್ಚರ್ನಲ್ಲಿ ಪ್ರಾರಂಭಿಸಿದರು. ಅವರು 1956 ರಲ್ಲಿ ತಮ್ಮದೇ ಆದ ಅಭ್ಯಾಸ, ವಾಸ್ತುಶಿಲ್ಪವನ್ನು ಸ್ಥಾಪಿಸಿದರು ಮತ್ತು 1960 ರ ದಶಕದಲ್ಲಿ ಅವರ ಸ್ವಂತ ವಿನ್ಯಾಸದ ಶಾಲೆ  ಅಹಮದಾಬಾದ್ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಅನ್ನು ಸ್ಥಾಪಿಸಿದರು (CEPT). 1950 ರ ದಶಕದಲ್ಲಿ ಚಂಡೀಗಢ ಮತ್ತು ಅಹಮದಾಬಾದ್ನಲ್ಲಿ ಆಧುನಿಕತಾವಾದದ ಮಾಸ್ಟರ್ ಆಗಿದ್ದ ಸ್ವಿಸ್-ಫ್ರೆಂಚ್ ವಾಸ್ತುಶಿಲ್ಪಿ ಲೆ ಕೊರ್ಬ್ಯೂಸಿಯರ್ ಅವರು ನಿಕಟವಾಗಿ ಕೆಲಸ ಮಾಡಿದರು.ಈ ಪುರಸ್ಕಾರದ ಸಂದರ್ಭ ನನ್ನ ಗುರು, ಲೆ ಕಾರ್ಬ್ಯುಸಿಯರ್ಗೆ ನಾನು ಈ ಪ್ರತಿಷ್ಠಿತ ಬಹುಮಾನವನ್ನು ಅರ್ಪಿಸಿದ್ದೇನೆ ಎಂದು ದೋಶಿ ತಿಳಿಸಿದ್ದಾರೆ, ಅವರ ಬೋಧನೆಗಳು ನನಗೆ ಗುರುತನ್ನು ಪ್ರಶ್ನಿಸಲು ದಾರಿ ಮಾಡಿಕೊಟ್ಟವು ಮತ್ತು ಸುಸ್ಥಿರ ಸಮಗ್ರ ಆವಾಸಸ್ಥಾನಕ್ಕಾಗಿ ಪ್ರಾದೇಶಿಕವಾಗಿ ಅಳವಡಿಸಿಕೊಂಡ ಸಮಕಾಲೀನ ಅಭಿವ್ಯಕ್ತಿಗಳನ್ನು ಕಂಡುಕೊಳ್ಳಲು ನನ್ನನ್ನು ಒತ್ತಾಯಿಸಿತು.

ಇತಿಹಾಸದಲ್ಲೇ ಮೊದಲ ಭಾರತೀಯ ವಾಸ್ತುಶಿಲ್ಪಿ ಮತ್ತು ಪ್ರಶಸ್ತಿಯ ಇತಿಹಾಸದಲ್ಲಿ 45 ನೇ ಪ್ರಶಸ್ತಿ ವಿಜೇತರಾಗಿದ್ದಾರೆ. ವಾಸ್ತುಶಿಲ್ಪಿ, ನಗರ ಯೋಜಕ, ಶಿಕ್ಷಕರು, ಅವರ ಸಮಗ್ರತೆ ಮತ್ತು ಭಾರತಕ್ಕೆ ಮತ್ತು ಅದಕ್ಕೂ ಮೀರಿದ ಅವರ ದಣಿವರಿಯದ ಕೊಡುಗೆಗಳಿಗಾಗಿ ಅವರ ಹಲವಾರು ಕೊಡುಗೆಗಳಿಗಾಗಿ, ಪ್ರಿಟ್ಜ್ಕರ್ ಆರ್ಕಿಟೆಕ್ಚರ್ ಪ್ರಶಸ್ತಿ ಜ್ಯೂರಿ 2018 ಪ್ರಿಟ್ಜ್ಕರ್ ಲಾರಿಯೇಟ್ ಆಗಿ ಬಾಲಕೃಷ್ಣ ದಾಶಿ ಅವರನ್ನು ಆಯ್ಕೆ ಮಾಡಿರುತ್ತಾರೆ ಎಂದು ತೀರ್ಪುಗಾರರ ಉಲ್ಲೇಖಿಸಿದ್ದಾರೆ. 2005 ರಿಂದ 2007 ರ ನಡುವಿನ ಪ್ರಿಟ್ಜ್ಕರ್ ಆರ್ಕಿಟೆಕ್ಚರ್ ಪ್ರೈಜ್ ಜ್ಯೂರರ್ ಆಗಿ ಸೇವೆ ಸಲ್ಲಿಸಿದ್ದ 90 ವರ್ಷ ವಯಸ್ಸಿನ ವಾಸ್ತುಶಿಲ್ಪಿ, ಅರ್ಬನ್ ಪ್ಲಾನರ್ ಮತ್ತು ಶಿಕ್ಷಕ, ಜೀವನಶೈಲಿ ಮತ್ತು ವಾಸ್ತುಶಿಲ್ಪದ ಬೆಸುಗೆಯನ್ನು ಮಾಡುವಾಗ ಆಚರಿಸಲಾಗುತ್ತದೆ ಎಂದು ನನ್ನ ನಂಬಿಕೆಯನ್ನು ಇದು ಪುನರುಚ್ಚರಿಸುತ್ತದೆ. ವರ್ಷದ ಜ್ಯೂರಿಯ ಸದಸ್ಯರು ಭಾರತೀಯ ಕೈಗಾರಿಕೋದ್ಯಮಿ, ಹೂಡಿಕೆದಾರರು, ಲೋಕೋಪಕಾರಿ ಮತ್ತು ಟಾಟಾ ಸನ್ಸ್, ರತನ್ ಟಾಟಾದ ಮಾಜಿ ಅಧ್ಯಕ್ಷರಾಗಿದ್ದರು.



ದೋಶಿಯ ವಾಸ್ತುಶೈಲಿಯು ಮಾನವ ಜೀವನದ ಮೂಲಭೂತ ಅಗತ್ಯತೆಗಳು, ಸ್ವಯಂ ಮತ್ತು ಸಂಸ್ಕೃತಿಯ ಸಂಪರ್ಕ ಮತ್ತು ಸಾಮಾಜಿಕ ಸಂಪ್ರದಾಯಗಳ ಅರ್ಥೈಸುವಿಕೆ, ಸ್ಥಳ ಮತ್ತು ಅದರ ಪರಿಸರಕ್ಕೆ ಸಂಬಂಧಿಸಿದಂತೆ ಮತ್ತು ಆಧುನಿಕತಾವಾದದ ಪ್ರತಿಕ್ರಿಯೆಯ ನಡುವಿನ ಸಂಬಂಧವನ್ನು ಪರಿಶೋಧಿಸುತ್ತದೆ. ಬಾಲ್ಯದ ನೆನಪುಗಳು, ಹವಾಮಾನದ ಲಯದಿಂದ ದೇವಾಲಯದ ಘಂಟೆಗಳ ರಿಂಗಿಂಗ್ಗೆ, ಅವರ ವಿನ್ಯಾಸಗಳನ್ನು ತಿಳಿಸಿ. ಅವರು ವಾಸ್ತುಶೈಲಿಯನ್ನು ದೇಹದ ವಿಸ್ತರಣೆಯೆಂದು ವಿವರಿಸುತ್ತಾರೆ, ಮತ್ತು ಹವಾಮಾನ, ಭೂದೃಶ್ಯ, ಮತ್ತು ನಗರೀಕರಣದ ಬಗ್ಗೆ ಗಮನ ಹರಿಸುವಾಗ ಅವರ ಗಮನವನ್ನು ಸಮರ್ಥವಾಗಿ ನಿರ್ವಹಿಸುವ ಅವರ ಸಾಮರ್ಥ್ಯ, ವಸ್ತುಗಳ ಮೇಲಿನ ಆಯ್ಕೆ, ಅತಿಕ್ರಮಿಸುವ ಜಾಗಗಳು, ಮತ್ತು ನೈಸರ್ಗಿಕ ಮತ್ತು ಸುಸಂಗತಗೊಳಿಸುವ ಅಂಶಗಳನ್ನು ಬಳಸಿಕೊಳ್ಳುವ ಮೂಲಕ ಪ್ರದರ್ಶಿಸಲಾಗುತ್ತದೆ.


2018 ರ ಜ್ಯೂರಿ ಉಲ್ಲೇಖದ ಭಾಗವು ಭಾಗಶಃ ವರ್ಷಗಳಲ್ಲಿ, ಬಾಲಕೃಷ್ಣ ದೋಷಿ ಯಾವಾಗಲೂ ಗಂಭೀರವಾದ ವಾಸ್ತುಶಿಲ್ಪವನ್ನು ಸೃಷ್ಟಿಸಿದೆ, ಎಂದಿಗೂ ಅಲಂಕಾರಿಕ ಅಥವಾ ಪ್ರವೃತ್ತಿಗಳ ಅನುಯಾಯಿಯಾಗಿದ್ದಾರೆ. ಉನ್ನತ ಮಟ್ಟದ ಜವಾಬ್ದಾರಿ ಮತ್ತು ಅಧಿಕೃತ ವಾಸ್ತುಶೈಲಿಯ ಮೂಲಕ ತನ್ನ ದೇಶದ ಮತ್ತು ಅದರ ಜನರಿಗೆ ಕೊಡುಗೆ ನೀಡುವ ಆಸೆ, ಅವರು ಸಾರ್ವಜನಿಕ ಆಡಳಿತ ಮತ್ತು ಉಪಯುಕ್ತತೆಗಳನ್ನು, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳಿಗೆ ಯೋಜನೆಗಳನ್ನು ರಚಿಸಿದ್ದಾರೆ, ಮತ್ತು ಖಾಸಗಿ ಗ್ರಾಹಕರ ನಿವಾಸಗಳು. ತೀರ್ಪುಗಾರರ ಮುಂದುವರಿಯುತ್ತದೆ, ಅವರ ಕಟ್ಟಡಗಳು ಇರುವ ಸಂದರ್ಭದ ಬಗ್ಗೆ ದೋಷಿಯವರಿಗೆ ಚೆನ್ನಾಗಿ ತಿಳಿದಿರುತ್ತದೆ. ಅವರ ಪರಿಹಾರಗಳು ಸಾಮಾಜಿಕ, ಪರಿಸರ ಮತ್ತು ಆರ್ಥಿಕ ಆಯಾಮಗಳನ್ನು ಪರಿಗಣಿಸಿವೆ ಮತ್ತು ಆದ್ದರಿಂದ ಅವರ ವಾಸ್ತುಶಿಲ್ಪವು ಸಮರ್ಥನೀಯತೆಯೊಂದಿಗೆ ಸಂಪೂರ್ಣವಾಗಿ ನಿಶ್ಚಿತವಾಗಿದೆ. ಹಾಗಾಗಿಯೇ ಭಾರತೀಯ ವಾಸ್ತುಶಿಲ್ಪಿ ಬಾಲಕೃಷ್ಣ ದೋಷಿ(90) ಅವರು ಪ್ರಿಟ್ಝ್‌ಕರ್‌ ಆರ್ಕಿಟೆಕ್ಚರ್‌ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಪುಣೆ ಮೂಲದವರಾದ ಬಾಲಕೃಷ್ಣ ದೋಷಿ ಈ ಪ್ರಶಸ್ತಿಗೆ ಭಾಜನರಾದ ಮೊದಲ ಭಾರತೀಯರಾಗಿದ್ದಾರೆ.ಬಾಲಕೃಷ್ಣ ದೋಷಿ ಅವರು ಗಂಭೀರವಾದ ವಾಸ್ತುಶಿಲ್ಪವನ್ನು ಸೃಷ್ಟಿಸುತ್ತ ಬಂದಿದ್ದಾರೆ. ಅತ್ಯುತ್ತಮ ಗುಣಮಟ್ಟ, ದೃಢವಾದ ಹೊಣೆಗಾರಿಕೆ ಮತ್ತು ತಮ್ಮ ದೇಶಕ್ಕೆ ಏನಾದರೂ ಕೊಡುಗೆ ನೀಡಲೇಬೇಕೆಂಬ ಹಂಬಲ ಅವರದ್ದಾಗಿತ್ತು. ಅವರು ಬರೇ ಕಟ್ಟಡಗಳ ವಿನ್ಯಾಸ ಮಾಡುತ್ತಿರಲಿಲ್ಲ, ಸಂಸ್ಥೆಗಳ ವಿನ್ಯಾಸ ಮಾಡುತ್ತಿದ್ದರು. ಹಲವಾರು ಸರಕಾರಿ ಮತ್ತು ಸಾರ್ವಜನಿಕ ಸೌಲಭ್ಯಗಳ ಕಟ್ಟಡಗಳು, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳ ವಿನ್ಯಾಸಗಳನ್ನು ರಚಿಸಿದ್ದರು. ಎಂದು ಪ್ರಿಟ್ಝ್‌ಕರ್‌ ಆಯ್ಕೆದಾರರ ಮಂಡಳಿ ತಿಳಿಸಿದೆ.


**********************************************ಸಂಗ್ರಹ: ANAND SHIKKERI (Asst master)
ಕೃಪೆ: ಗೂಗಲ್ & ಪ್ರಜಾವಾಣಿ
***********************************************

ಗುರುವಾರ, ಮಾರ್ಚ್ 8, 2018

ಜಾಗತೀಕ ಸೇನಾ ಬಲದ ಸಮೀಕ್ಷೆಯಲ್ಲಿ ಭಾರತ


ಸೇನಾ ಬಲದ ಜಾಗತಿಕ ಸಮೀಕ್ಷೆ: ಭಾರತಕ್ಕೆ 4ನೇ ಸ್ಥಾನ

ಸೇನಾ ಬಲದ ಜಾಗತಿಕ ಸಮೀಕ್ಷೆ: ಭಾರತಕ್ಕೆ 4ನೇ ಸ್ಥಾನ
ಬೆಂಗಳೂರು: ವಿವಿಧ ದೇಶಗಳ ಸೇನಾ ಶಕ್ತಿ ಎಷ್ಟಿದೆ ಎಂಬ ಜಾಗತಿಕ ಸಮೀಕ್ಷೆ ಮತ್ತು ಅದರ ಆಧಾರದಲ್ಲಿ ನೀಡಲಾದ ರ‍್ಯಾಂಕಿಂಗ್‌ ಅನ್ನು ಗ್ಲೋಬಲ್‌ ಫೈರ್‌ ಪವರ್‌ ಸಂಸ್ಥೆಯು ಬಿಡುಗಡೆಗೊಳಿಸಿದೆ.
ಸೇನಾ ಶಕ್ತಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ ಭಾರತ ನಾಲ್ಕನೇ ಸ್ಥಾನ ಪಡೆದಿದೆ. 50 ಅಂಶಗಳ ಆಧಾರದಲ್ಲಿ ಈ ಸಮೀಕ್ಷೆ ನಡೆಸಲಾಗಿದೆ.
ಸಣ್ಣ ಮತ್ತು ಹೆಚ್ಚು ಆಧುನಿಕವಾದ ದೇಶಗಳು ಮತ್ತು ದೊಡ್ಡ ಹಾಗೂ ಕಡಿಮೆ ಆಧುನಿಕವಾದ ದೇಶಗಳ ಸಾಮರ್ಥ್ಯವನ್ನು ಅಳೆಯುವುದಕ್ಕೆ ಬೇಕಾದ ರೀತಿಯಲ್ಲಿ ಸೂತ್ರವನ್ನು ಅಭಿವೃದ್ಧಿಪಡಿಸಲಾಗಿತ್ತು. ಬೋನಸ್‌ ಅಂಕ ಮತ್ತು ದಂಡನಾ ಅಂಕಗಳ ನೀಡಿಕೆ ಮೂಲಕ ಎಲ್ಲ ದೇಶಗಳಿಗೂ ಸಮಾನ ಅವಕಾಶ ನೀಡಲಾಗಿದೆ ಎಂದು ಸಮೀಕ್ಷಾ ವರದಿಯಲ್ಲಿ ಹೇಳಲಾಗಿದೆ.
ಅಂಕ ನೀಡಿಕೆಗೆ ಪರಿಗಣನೆ
* ಶಸ್ತ್ರಾಸ್ತ್ರದ ಒಟ್ಟು ಸಂಖ್ಯೆಯನ್ನು ಮಾತ್ರ ಆಧರಿಸಿ ಶ್ರೇಣಿ ನೀಡಲಾಗಿಲ್ಲ. ಶಸ್ತ್ರಾಸ್ತ್ರ ವೈವಿಧ್ಯ ಮತ್ತು ಸಮತೋಲನಕ್ಕೆ ಒತ್ತು ನೀಡಲಾಗಿದೆ.
* ದೇಶಗಳ ಜನಸಂಖ್ಯೆ ಆಧಾರದಲ್ಲಿಯೂ ಅಂಕ ನೀಡಲಾಗಿದೆ. ಯುದ್ಧಕ್ಕೆ ಹೋಗುವ ಸಾಮರ್ಥ್ಯ ಇರುವ ಜನರ ಸಂಖ್ಯೆ (ಸೈನಿಕರಲ್ಲದೆ) ಎಷ್ಟು ಎಂಬುದರ ಅಧಾರದಲ್ಲಿಯೂ ಅಂಕ ನೀಡಲಾಗಿದೆ.
* ಅಣ್ವಸ್ತ್ರ ಇದೆ ಎಂದು ಘೋಷಿಸಿರುವ ಅಥವಾ ಘೋಷಿಸಿಲ್ಲದ ದೇಶಗಳಲ್ಲಿ ಇರುವ ಅಣ್ವಸ್ತ್ರಗಳ ಸಂಖ್ಯೆಯನ್ನು ಗಣನೆಗೆ ತೆಗೆದುಕೊಳ್ಳಲಾಗಿಲ್ಲ. ಆದರೆ ಈ ದೇಶಗಳಿಗೆ ಬೋನಸ್‌ ಅಂಕ ನೀಡಲಾಗಿದೆ.
* ಭೌಗೋಳಿಕ ಅಂಶಗಳು, ನೈಸರ್ಗಿಕ ಸಂಪನ್ಮೂಲ, ಸ್ಥಳೀಯ ಕೈಗಾರಿಕೆಯ ಪ್ರಭಾವಗಳಿಗೂ ಅಂಕ ನೀಡಲಾಗಿದೆ.
* ಎಲ್ಲೆಡೆಯಿಂದಲೂ ನೆಲದಿಂದ ಆವೃತವಾಗಿರುವ ದೇಶಗಳಲ್ಲಿ ನೌಕಾಪಡೆ ಇಲ್ಲ ಎಂಬುದಕ್ಕೆ ಅಂಕ ಕಡಿತಗೊಳಿಸಲಾಗಿಲ್ಲ.
* ನೌಕಾಪಡೆಗಳಿರುವ ದೇಶಗಳಲ್ಲಿ ವೈವಿಧ್ಯಮಯ ನೌಕೆಗಳು ಇಲ್ಲದಿದ್ದಾಗ ಅಂಕ ಕಡಿತ ಮಾಡಲಾಗಿದೆ.
* ನ್ಯಾಟೊ ಮಿತ್ರಕೂಟದ ನಡುವೆ ಸಂಪನ್ಮೂಲ ಹಂಚಿಕೆಗೆ ಅವಕಾಶ ಇರುವುದರಿಂದ ಈ ದೇಶಗಳಿಗೆ ಬೋನಸ್‌ ಅಂಕ ಸಿಕ್ಕಿದೆ.
* ರಾಜಕೀಯ ಮತ್ತು ಸೇನೆಯ ಈಗಿನ ನಾಯಕತ್ವವನ್ನು ಗಣನೆಗೆ ತೆಗೆದುಕೊಳ್ಳಲಾಗಿಲ್ಲ.

133 ದೇಶಗಳ ಸಮೀಕ್ಷೆ ನಡೆಸಲಾಗಿದೆ: ಸೈನಿಕರ ಸಂಖ್ಯೆ

1. ಚೀನಾ 22,60,000
2. ಅಮೆರಿಕ 13,73,650
3. ಭಾರತ 13,62,500
4. ಉತ್ತರ ಕೊರಿಯಾ 9,45,000
5. ರಷ್ಯಾ 7,98,527
6. ಪಾಕಿಸ್ತಾನ 6,37,000
ಯುದ್ಧವಿಮಾನ/ಹೆಲಿಕಾಪ್ಟರ್‌
1. ಅಮೆರಿಕ 13,762
2. ರಷ್ಯಾ  3,794
3. ಚೀನಾ 2,955
4. ಭಾರತ 2,101
5. ಜಪಾನ್‌ 1,594
10. ಪಾಕಿಸ್ತಾನ 951
ಯುದ್ಧ ಟ್ಯಾಂಕ್‌ಗಳು
1. ರಷ್ಯಾ 20,216
2. ಚೀನಾ 6,457
3. ಅಮೆರಿಕ 5,884
4. ಉತ್ತರ ಕೊರಿಯಾ 5,025
5. ಸಿರಿಯಾ 4,640
6. ಭಾರತ 4,426
8. ಪಾಕಿಸ್ತಾನ 2,924
ನೌಕಾಬಲ
1. ಉತ್ತರ ಕೊರಿಯಾ 967
2. ಚೀನಾ 714
3. ಅಮೆರಿಕ 415
4. ಇರಾನ್‌ 398
5. ರಷ್ಯಾ 352
6. ಈಜಿಪ್ಟ್‌ 319
7. ಭಾರತ 295
11. ಪಾಕಿಸ್ತಾನ 197
ಸಮಗ್ರ ರ‍್ಯಾಂಕಿಂಗ್‌
1. ಅಮೆರಿಕ
2. ರಷ್ಯಾ
3. ಚೀನಾ
4. ಭಾರತ
13. ಪಾಕಿಸ್ತಾನ

ರಕ್ಷಣಾ ಬಜೆಟ್‌

1. ಅಮೆರಿಕ  5.87 ಲಕ್ಷ ಕೋಟಿ ಡಾಲರ್‌ (ಅಂದಾಜು ₹410 ಲಕ್ಷ ಕೋಟಿ ರೂಪಾಯಿ)
2. ಚೀನಾ 1.61 ಲಕ್ಷ ಕೋಟಿ ಡಾಲರ್‌ (ಸುಮಾರು ₹ 100 ಲಕ್ಷ ಕೋಟಿ)
3. ಸೌದಿ ಅರೇಬಿಯಾ 56,725 ಕೋಟಿ ಡಾಲರ್‌ (ಸುಮಾರು ₹37 ಲಕ್ಷ ಕೋಟಿ)
4. ಭಾರತ 51,000 ಕೋಟಿ ಡಾಲರ್‌ (32,500 ಲಕ್ಷ

ಬುಧವಾರ, ಮಾರ್ಚ್ 7, 2018

ಸಂತ ಸೇವಾಲಾಲ ದಿನಾಚರಣೆ



















ಸಂತ_ಸೇವಾಲಾಲರ ೨೭೯ ನೇ ಜಯಂತಿಯ ಪ್ರಯುಕ್ತ ಅವರ ಇತಿಹಾಸ ನನ್ನ ಓದುಗರಿಗಾಗಿ


ಪೆಬ್ರವರಿ 15, 2018 ಮಹಾ ಸಂತ ಶ್ರೀ ಸೇವಾಲಾಲರ 279ನೇ ಜಯಂತಿ. ಕರ್ನಾಟಕ ಸರಕಾರ ಈ ಮಹಾಸಂತನ ಜಯಂತಿಯನ್ನು ಕರ್ನಾಟಕದಾದ್ಯಂತ ಮೊಟ್ಟಮೊದಲ ಬಾರಿಗೆ ಸರಕಾರದ ವತಿಯಿಂದ ಆಚರಿಸುತ್ತಿದ್ದು, ತನ್ನಿಮಿತ್ತ ಈ ಲೇಖನ, ಲೋಕಕಲ್ಯಾಣಕ್ಕಾಗಿ ಈ ಭರತ ಭೂಮಿಯಲ್ಲಿ ಹಲವು ಜನ ಸಾಧು-ಸಂತರು, ಸತ್ಪುರುಷರು, ಮೇಧಾವಿಗಳು, ದಾರ್ಶನಿಕರು, ಬುದ್ಧಿಜೀವಿಗಳು ಮತ್ತು ತ್ಯಾಗಿಗಳು ಅವತರಿಸಿದ್ದಾರೆ. ಜನತೆಯಲ್ಲಿನ ಜಾತಿಪದ್ಧತಿ ಮತ್ತು ಧರ್ಮಾಂಧತೆಗಳನ್ನು ತೊಡೆದುಹಾಕಲು ಆಯಾ ಕಾಲಘಟ್ಟದಲ್ಲಿ ಹಲವು ಜನ ಸಾಂಸ್ಕೃತಿಕ ನಾಯಕರು, ಮೇಧಾವಿಗಳು ಹೋರಾಟ ಮಾಡಿದ್ದಾರೆ.

ಸೇವಾಲಾಲನ ಜನನ, ಮರಣ, ಜೀವನ, ಸಾಧನೆ, ಹೋರಾಟಗಳ ಹಿನ್ನೆಲೆಯಲ್ಲಿ ಲಂಬಾಣಿ ಮೌಖಿಕ ಪರಂಪರೆಯಲ್ಲಿ ಹಲವು ಐತಿಹ್ಯ ಕಥೆ ಪುರಾಣಗಳು ಹುಟ್ಟಿಕೊಂಡಿವೆ. ಇವುಗಳು ಸೇವಾಲಾಲನ ವಾಸ್ತವ ಸಂಗತಿಗಳಿಗಿಂತ ಹೆಚ್ಚಾಗಿ ಅವನನ್ನು ಒಬ್ಬ ಪೌರಾಣಿಕ ವ್ಯಕ್ತಿಯನ್ನಾಗಿ ಚಿತ್ರಿಸಿ ದೈವತ್ವಕ್ಕೆ ಏರಿಸಿವೆ. ವಾಸ್ತವವಾಗಿ ಸೇವಾಲಾಲ ತಮ್ಮ ಜೀವಿತ ಕಾಲಾವಧಿಯಲ್ಲಿ ತನ್ನನ್ನು ನಂಬಿದ ಒಂದು ಜನಾಂಗದ ತನ್ನದೆಲ್ಲವನ್ನೂ ಧಾರೆ ಎರೆದ ಒಬ್ಬ ಮಹಾಸಂತನೆಂಬುದು ಸತ್ಯ. ಲಂಬಾಣಿಗರಲ್ಲಿ ಸೇವಾಲಾಲ್ ಬಹುದೊಡ್ಡ ಸಾಧುಪುರುಷ. ಬಾಲಬ್ರಹ್ಮಚಾರಿಯಾಗಿ ತಪಸ್ಸು, ಧ್ಯಾನ ಮತ್ತು ಭಕ್ತಿ ಮೂಲಕ ಅಧ್ಯಾತ್ಮವನ್ನು ಅಪ್ಪಿಕೊಂಡು, ತನ್ನ ಜನಾಂಗದ ಸೇವೆಯನ್ನು ಮಾಡಿದ ಮಹಾನ್ ಹಿತಚಿಂತಕ. ಅಧ್ಯಾತ್ಮದ ಮೂಲಕವಾಗಿ ಜನಾಂಗಕ್ಕೆ ಉಪದೇಶಗಳನ್ನು ನೀಡಿ, ಸನ್ಮಾರ್ಗದತ್ತ ಕೊಂಡೊಯ್ದ ಮಾರ್ಗದರ್ಶಕ. ಸೇವಾಲಾಲರ ಬೋಧನೆ ಮತ್ತು ಚಿಂತನೆಗಳು ಬಂಜಾರ ಜನಾಂಗದಲ್ಲಿ ಇಂದು ಐಕ್ಯತೆ ಯನ್ನುಂಟುಮಾಡಿರುವುದು ಸ್ಪಷ್ಟ.

ಇಂದು ಬಂಜಾರರು ಸಾಂಸ್ಕೃತಿಕ ನೆಲೆಯಲ್ಲಿ ತನ್ನ ಅಸ್ಮಿತೆಯನ್ನು ಗುರುತಿಸಿಕೊಳ್ಳಲು ಮಹಾನುಭಾವರ ಸತ್ಕಾರ್ಯಗಳೇ ಕಾರಣವಾಗಿವೆ. ಹೀಗಾಗಿ ಬಂಜಾರ ಸಮುದಾಯದಲ್ಲಿ ಸೇವಾಲಾಲರು ವೀರನಾಗಿ, ವಿರಾಗಿಯಾಗಿ, ಒಬ್ಬ ಶ್ರೇಷ್ಠ ದಾರ್ಶನಿಕನಾಗಿ ಮತ್ತು ಸಾಂಸ್ಕೃತಿಕ ನಾಯಕನಾಗಿ ಚಿರಸ್ಥಾಯಿಯಾಗಿದ್ದಾರೆ. ಸೇವಾಲಾಲರು ಹುಟ್ಟಿನಿಂದಲೇ ದೈವಾಂಶ ಸಂಭೂತ. ಆತನ ಚರಿತ್ರೆ, ಪವಾಡ, ಅವತಾರ, ಮೊದಲಾದವುಗಳನ್ನು ಲಂಬಾಣಿಗಳು ತಮ್ಮ ಭಜನೆಗಳಲ್ಲಿ ದಿನಗಟ್ಟಲೆ, ವಾರಗಟ್ಟಲೇ ಹಾಡುತ್ತಾರೆ. ಸೇವಾಲಾಲರ ಕಾಲ, ಜನನ, ವೃತ್ತಾಂತ, ಮರಣ ಮತ್ತು ಬದುಕಿನ ಬಗೆಗೆ ಈಗಾಗಲೇ ಸಾಕಷ್ಟು ಚರ್ಚೆ ನಡೆದಿದೆ. ಚಾರಿತ್ರಿಕ ಆಧಾರಗಳು ಇಲ್ಲದ್ದರಿಂದ ಯಾವುದೇ ಖಚಿತವಾದ ಮಾಹಿತಿಗಳು ದೊರೆಯುವುದಿಲ್ಲ. ಅವರ ಕಥನ ಗೀತೆಗಳು, ಲಾವಣಿಗಳು, ಭಜನೆ-ಗೀತೆ ಹಾಗೂ ಕೆಲವು ಭೌಗೋಳಿಕ ಆಧಾರಗಳನ್ನು ಆಧರಿಸಿ ಇದೀಗ ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಸೂರಗೊಂಡನಕೊಪ್ಪವೇ ಸೇವಾಲಾಲರ ಜನ್ಮಸ್ಥಳವೆಂದು ನಿರ್ಧರಿಸಲಾಗಿದೆ. ಈ ಪ್ರದೇಶದಲ್ಲಿ ಇಂದಿಗೂ ಕಂಡುಬರುವ ಝುಮ್ರಿ ಝೋಲ್, ಭೂರಿಪಟಾರ್, ಚಂದನಖೋಳಿ, ಕಾಳೋಕೂಂಡೋ, ಕಿಂಚೇರ್ ಗುಂಡಿ, ಬನದವ್ವನ ಗುಡಿ ಮತ್ತು ಗೊಲ್ಲನಮಟ್ಟಿ ಮೊದಲಾದ ಸ್ಥಳಗಳು ಅವರ ಲಾವಣಿಗಳಲ್ಲಿ ಸ್ಪಷ್ಟವಾಗಿ ದಾಖಲಾಗಿರುವುದರಿಂದ ಸೂರಗೊಂಡನಕೊಪ್ಪ ಪ್ರದೇಶವೇ ಸೇವಾಲಾಲರ ಜನ್ಮಸ್ಥಳ ಆಗಿರುವುದರಲ್ಲಿ ಯಾವ ಸಂದೇಹಗಳು ಇರಲಾರವು.

ಭೀಮಾ ನಾಯಕ ಹಾಗೂ ಧರ್ಮಿಣಿ ಬಾಯಿಗೆ ಮದುವೆ ಮಾಡುತ್ತಾರೆ. ಮದುವೆಯಾಗಿ 12 ವರ್ಷ ಕಳೆದರೂ ಸಂತಾನ ಪ್ರಾಪ್ತಿಯಾಗುವುದಿಲ್ಲ. ಈ ದಂಪತಿಗಳಿಬ್ಬರೂ ಜಗನ್ಮಾತೆಯ ಭಕ್ತಿಸೇವೆಯಲ್ಲಿ ಸುಖ-ಸಂತೋಷದಿಂದ ಬದುಕು ಸಾಗಿಸುತ್ತಿದ್ದರು. ಸಂತಾನ ಪ್ರಾಪ್ತಿಗಾಗಿ ಕಂಡ ಕಂಡ ದೇವರು-ದೇವತೆಗಳಿಗೆ ಮೊರೆ ಹೋದರೂ ಪ್ರಯೋಜನವಾಗಲಿಲ್ಲ. ಕೊನೆಗೆ, ಜಗದಂಬೆಯನ್ನೇ ನಂಬಿಕೊಂಡು ಅವಳ ಭಕ್ತಿಯಲ್ಲಿ ಕಾಲ ಕಳೆಯುತ್ತಾ, ಸಂತಾನ ಪ್ರಾಪ್ತಿಗಾಗಿ ಸಂಕಲ್ಪವನ್ನು ಮಾಡಿ ಭೀಮಾ ನಾಯಕರು ಘೋರವಾದ ತಪಸ್ಸನ್ನು ಕೈಗೊಳ್ಳುತ್ತಾನೆ. ಕೊನೆಗೆ ಶಿವ-ಪಾರ್ವತಿಯ ಕರುಣೆಯಿಂದ ಸಂತಾನ ಭಾಗ್ಯವನ್ನು ಈ ನಡುವೆ ತಮಗೆ ಮಗುವಾದರೆ ಭಕ್ತಿಯ ಹೆಸರಲ್ಲಿ ನಿನಗೆ ಒಪ್ಪಿಸುತ್ತೇವೆ ಎಂದು ಮರಿಯಮ್ಮನಲ್ಲಿ ಹರಕೆ ಹೊತ್ತಿರುತ್ತಾರೆ. ಹೀಗೆ ಹುಟ್ಟಿದ ಮಗು ಸಾಮಾನ್ಯ ಮಗುವಾಗಿರಲಿಲ್ಲ. ಅವನೊಬ್ಬ ಸತ್ಪುರುಷನಾಗಿದ್ದ. ಮಾಣಿಕ್ಯದಂತಹ ಮಗುವಿಗೆ ಸಾಕ್ಷಾತ್ ಮಾತೆ ಜಗದಂಬೆಯೇ ಮಾರುವೇಷದಲ್ಲಿ ಬಂದು, ಸೇವಾಭಾಯಾ, ಸೇವಾಲಾಲ ಎಂದು ನಾಮಕರಣ ಮಾಡುತ್ತಾಳೆ.

ಆ ಮಗು ಶಿವನ ಅವತಾರಿಯಾಗಿದ್ದು, ದೇವಿಯ ಭಕ್ತನಾಗಿದ್ದಾನೆ. ಆತನು ಬಂಜಾರ ಕುಲದ ವಂಶೋದ್ಧಾರಕನಾಗಿದ್ದು, ದುಷ್ಟರನ್ನು ಸಂಹರಿಸಿ, ಶಿಷ್ಟರ ರಕ್ಷಣೆ ಮಾಡುವನೆಂದು ಜಗದಂಬೆ ಹೇಳಿ, ಅಲ್ಲಿಂದ ಕಾಲಚಕ್ರ ಗತಿಸಿ ಸೇವಾಲಾಲನಿಗೆ 12 ವರ್ಷ ತುಂಬಿದಾಗ ಮರಿಯಮ್ಮ ತನ್ನ ಷರತ್ತನ್ನು ಈಡೇರಿಸಬೇಕೆಂದು ಧರ್ಮಿಣಿ ಬಾಯಿಯ ಕನಸಿನಲ್ಲಿ ಬಂದು ಸೇವಾಲಾಲನನ್ನು ತನ್ನ ಸೇವೆಗೆ ಬಿಡಬೇಕೆಂದು ಒತ್ತಾಯಿಸುತ್ತಾಳೆ. ಅದಕ್ಕೆ ಧರ್ಮಿಣಿಯು ಒಪ್ಪದೇ ಹೋದಾಗ ನೇರವಾಗಿ ಸೇವಾಲಾಲನನ್ನು ತನ್ನ ಭಕ್ತನಾಗಬೇಕೆಂದು, ತನ್ನ ಜತೆಗೆ ಬರಬೇಕೆಂದು ಕೇಳಿದಾಗ ಅವನೂ ಭಕ್ತನಾಗಲು ತಿರಸ್ಕರಿಸುತ್ತಾನೆ. ತಾನು ಪರಮಾತ್ಮನ ಸೇವಕನೆಂದು, ಮರಿಯಮ್ಮಳ ಸೇವೆ ಮಾಡಲಾರನೆಂದು ಹಠ ಹಿಡಿಯುತ್ತಾನೆ. ಇದರಿಂದ ಅವಮಾನಿತಳಾದ ಮರಿಯಮ್ಮ ಸೇವಾಲಾಲನ ಕುಟುಂಬದ ಸರ್ವಸ್ವವನ್ನು ನಾಶ ಮೂಲಕ ಪರಿಪರಿಯಾಗಿ ಕಾಡಿಸುತ್ತಾಳೆ. ಇದರಿಂದ ಹತಾಶನಾದ ಸೇವಾಭಾಯಾ ಅನಿವಾರ್ಯವಾಗಿ ಜಗನ್ಮಾತೆಯ ಭಕ್ತನಾಗಲು ಒಪ್ಪಿಕೊಳ್ಳುತ್ತಾನೆ.

ಕಾಲಗತಿಯಲ್ಲಿ ಹತ್ತಾರು ವರ್ಷಗಳವರೆಗೆ ಮರಿಯಮ್ಮನ ಸೇವೆಗೆ ತೊಡಗಿಸಿಕೊಂಡ ಸೇವಾಲಾಲರು ಮುಂದೆ ಸಮುದಾಯದಲ್ಲಿ ಜಗನ್ಮಾತೆಗಿಂತ ಹೆಚ್ಚಿನ ಜನಪ್ರಿಯತೆಯನ್ನು ಪಡೆಯುತ್ತಾನೆ. ಜನರು ಮರಿಯಮ್ಮನನ್ನು ಮರೆತು ಸೇವಾಲಾಲನನ್ನೇ ಪೂಜಿಸುವಂತೆ ಮಹಾನ್ ಸಾಧಕನಾಗಿ ಮೆರೆಯುತ್ತಾನೆ. ತನ್ನ ಜನಸಮುದಾಯದ ಏಳಿಗೆಗಾಗಿ ಶ್ರಮಿಸಿ, ಅವರ ಬದುಕನ್ನು ಹಸನುಗೊಳಿಸಲು ನಿರಂತರವಾಗಿ ಹೋರಾಡುತ್ತಾನೆ. ಮರಿಯಮ್ಮಳಿಂದ ಮೊದಲೇ ವರವನ್ನು ಪಡೆದುಕೊಂಡಿದ್ದ ಸೇವಾಲಾಲ ತನ್ನ ಭಕ್ತರು ಕೇಳಿದ ವರಗಳ ತಕ್ಷಣವೇ ಈಡೇರಿಸಿ ಪ್ರಖ್ಯಾತಿಯನ್ನು ಪಡೆದುಕೊಂಡನು. ಈತನ ಜನಪ್ರಿಯತೆಯನ್ನು ಕಂಡು ಮರಿಯಮ್ಮ ಸಹಿಸಲಾರದೇ ಅವನು ಬ್ರಹ್ಮಚಾರಿಯಾಗಿರುವುದರಿಂದಲೇ ಇಷ್ಟೊಂದು ಪ್ರಭಾವಶಾಲಿಯಾಗಿರವನೆಂದು ಬಗೆದು, ಅವನಿಗೆ ಮದುವೆ ಮಾಡಿಸುವ ಮೂಲಕ ಆತನ ಜಜನಪ್ರಿಯತೆಯನ್ನು ಕುಗ್ಗಿಸಬೇಕೆಂದು ನಿರ್ಧರಿಸುತ್ತಾಳೆ. ಅಂತೆಯೇ, ಸೇವಾನ ಬಳಿಗೆ ಬಂದು ಮದುವೆಯಾಗುವಂತೆ ಅವನನ್ನು ಒತ್ತಾಯಿಸುತ್ತಾಳೆ. ಅದಕ್ಕೆ ಒಪ್ಪಿಕೊಳ್ಳದ ಸೇವಾಲಾಲ ತಾನು ಸಮಸ್ತ ಸಮುದಾಯದವರಿಗೆ ‘‘ಭಾಯಾ’’ (ಸಹೋದರ) ಆಗಿರುವುದರಿಂದ ನಾನು ಯಾರೊಂದಿಗೆ ಮದುವೆಯಾಗಲೆಂದು ವಾದಿಸುತ್ತಾನೆ.

ಎಲ್ಲಾ ನಾರಿಯರು ನನಗೆ ಸಹೋದರಿಯರು ಆಗಿರುವುದರಿಂದ ಈ ಮದುವೆ ಅಲ್ಲಗಳೆಯುತ್ತಾನೆ. ಆಧ್ಯಾತ್ಮ ಜೀವಿಯಾಗಿ ಸಾಧಕನಾಗಿದ್ದ ಸೇವಾಭಾಯಾ ಮರಿಯಮ್ಮನ ಮಾತನ್ನು ತಿರಸ್ಕರಿಸುತ್ತಾನೆ. ಮರಿಯಮ್ಮ ಅವಮಾನಿತಳಾಗಿ ಮತ್ತೆ ಮತ್ತೆ ಒತ್ತಾಯಿಸಿದಾಗ, ಬ್ರಹ್ಮನು ತನ್ನ ಹಣೆಬರಹದಲ್ಲಿ ಮದುವೆಯಾಗುವುದನ್ನು ಬರೆದಿಲ್ಲವಾದ್ದರಿಂದ ಮದುವೆಯಾಗುವುದಾದರೂ ಹೇಗೆ ? ಎಂದು ಪ್ರಶ್ನಿಸುತ್ತಾನೆ. ಹಾಗಾದರೆ, ನಿನ್ನ ಹಣೆಯ ಬರಹವನ್ನು ಪರೀಕ್ಷಿಸಲು ದೇವಲೋಕಕ್ಕೆ ಹೋಗೋಣವೆಂದು ಅವನನ್ನು ಕರೆಯುತ್ತಾಳೆ. ಅದಕ್ಕೆ ಸಮ್ಮತಿಸಿದ ಸೇವಾಭಾಯಾ ಮರಿಯಮ್ಮನೊಂದಿಗೆ ದೇವಲೋಕಕ್ಕೆ ಹೋಗಲು ಅಣಿಯಾಗುತ್ತಾನೆ. ಸೇವಾ ಭಾಯಾ ತಾನು ಸ್ವರ್ಗಲೋಕಕ್ಕೆ ತನ್ನ ಹಣೆಯ ಬರಹವನ್ನು ಕೇಳಲು ಬ್ರಹ್ಮನಲ್ಲಿಗೆ ಹೋಗುವ ಪ್ರಸ್ತಾಪಿಸಿ, ತನ್ನ ಶರೀರವನ್ನು ದೇವಸ್ಥಾನದಲ್ಲಿಟ್ಟು, ಬೇವಿನ ಸೊಪ್ಪಿನಲ್ಲಿ ಮುಚ್ಚಿಡಬೇಕೆಂದು, ತಾನು ಹಿಂದಿರುಗಿ ಬರುವವರೆಗೆ ನಿರಂತರವಾಗಿ ಭಜನೆ ಮಾಡುತ್ತಿರಬೇಕೆಂದು, ಬೇವಿನ ಸೊಪ್ಪಿನಲ್ಲಿರುವ ನನ್ನ ಶರೀರವನ್ನು ಅಪ್ಪಿ-ತಪ್ಪಿಯೂ ಯಾರೂ ಮುಟ್ಟಬಾರದೆಂದು ತನ್ನ ಬಂಧು-ಬಾಂಧವರಿಗೆಲ್ಲಾ ತಿಳಿಸಿ, ಸ್ವರ್ಗಕ್ಕೆ ಹೊರಡುತ್ತಾನೆ.

ಅವನು ಹೇಳಿ ಹೋದಂತೆ ಸಮುದಾಯದವರೆಲ್ಲಾ ಕಟ್ಟುನಿಟ್ಟಾಗಿ ನಡೆದುಕೊಳ್ಳುತ್ತಾರೆ. ಸ್ವರ್ಗದಲ್ಲಿ ಪರಮಾತ್ಮನ ಸಮಕ್ಷಮದಲ್ಲಿ ಮರಿಯಮ್ಮ ಮತ್ತು ಸೇವಾಲಾಲ ತಮ್ಮ ವಾದಗಳನ್ನು ಮಂಡಿಸುತ್ತಾರೆ. ಕೊನೆಗೆ ಸೇವಾಲಾಲನ ಹಣೆಯ ಬರಹವನ್ನು ಪರೀಕ್ಷಿಸಿದ ಪರಮಾತ್ಮನು ಅವನಿಗೆ ಮದುವೆ ಎಂಬುದೇ ಸ್ಪಷ್ಟಪಡಿಸುತ್ತಾನೆ. ಇದರಿಂದ ಇನ್ನಷ್ಟು ಅವಮಾನಿತಳಾದ ಮರಿಯಮ್ಮ ಇನ್ನು ತನಗೆ ಉಳಿಗಾಲ ಇಲ್ಲವೆಂದು, ಲಂಬಾಣಿ ಸಮುದಾಯದಲ್ಲಿ ತನ್ನ ಅಸ್ತಿತ್ವವೇ ಇಲ್ಲದಂತಾಗುವುದೆಂದು ಯೋಚಿಸಿ ಸೇವಾನಿಗಿಂತ ಮೊದಲೇ ಭೂಲೋಕಕ್ಕೆ ಇಳಿದು ಬಂದು ಮಾರುವೇಷದಲ್ಲಿ ನೇರವಾಗಿ ತಾಯಿ ಧರ್ಮಿಣಿ ಬಾಯಿ ಬಳಿಗೆ ಹೋಗುತ್ತಾಳೆ. ‘‘ನಿನ್ನ ಮಗ ಸೇವಾಲಾಲ ದೇವಸ್ಥಾನದಲ್ಲಿ ಸತ್ತು ಬಿದ್ದಿದ್ದು, ನೀನು ಇಲ್ಲಿ ನಿಶ್ಚಿಂತವಾಗಿ ಕಸೂತಿ ಹಾಕುತ್ತಿದ್ದೀಯ ?’’ ಎಂದು ಅವಳಿಗೆ ಹೇಳುತ್ತಲೇ ದು:ಖಿತಳಾದ ಧರ್ಮಿಣಿ ಬಾಯಿ ಎದ್ದು-ಬಿದ್ದು ದೇವಸ್ಥಾನಕ್ಕೆ ಬಂದು ಯಾರು ತಡೆದರೂ ಕೇಳದೇ ಮಗನ ದೇಹದ ಮೇಲೆ ರಪ್ಪನೇ ಬಿದ್ದು ಗೋಳಿಡುತ್ತಾಳೆ.

ಸೇವಾ ಭಾಯಾ ಭೂಲೋಕಕ್ಕೆ ಕಾಲಿಡುವಷ್ಟರಲ್ಲಿ ಆತನ ದೇಹಕ್ಕೆ ಮನುಷ್ಯರ ಸ್ಪರ್ಶವಾಗುತ್ತಿದ್ದಂತೆಯೇ ಆತನ ಆತ್ಮವು ಮರಳಿ ದೇಹವನ್ನು ಸೇರದೇ ಹಿಂದಿರುಗಿ ಸ್ವರ್ಗಕ್ಕೆ ಹೋಗಿಬಿಡುತ್ತದೆ. ಹೀಗೆ ಅಮರನಾದ ಸೇವಾಲಾಲರ ದೇಹಾಂತ್ಯವಾದ ಮೇಲೆ ಮಹಾರಾಷ್ಟ್ರದ ವಾಸಿಮ್ ಜಿಲ್ಲೆಯ ಅಕ್ಕೋಲ ತಾಲ್ಲೂಕಿನ ಸಮೀಪದಲ್ಲಿರುವ ಪೊಹರಾಗಢ ಎಂಬಲ್ಲಿ ಅಂತ್ಯಸಂಸ್ಕಾರ ನಡೆಯಿತು. ಈಗ ಅಲ್ಲಿ ಸೇವಾಲಾಲ್ ಮತ್ತು ಜಗನ್ಮಾತೆ ಮರಿಯಮ್ಮಳ ಬೃಹತ್ ಮಂದಿರಗಳನ್ನು ಕಟ್ಟಿದ್ದು, ಅದು ಬಂಜಾರರ ಪುಣ್ಯಕ್ಷೇತ್ರವಾಗಿದೆ. ಭಾರತದಾದ್ಯಂತ ನೆಲೆಯಾಗಿರುವ ಅಸಂಖ್ಯಾತ ಬಂಜಾರರು ಈ ತೀರ್ಥಕ್ಷೇತ್ರಕ್ಕೆ ಸಾಗರೋಪಾದಿಯಲ್ಲಿ ಬಂದು ದೇವರ ದರ್ಶನ ಪಡೆದು ಪಾವನರಾಗುತ್ತಾರೆ. ಸೇವಾಲಾಲರ ಜನ್ಮಭೂಮಿ ಕರ್ನಾಟಕದ ಸೂರಗೊಂಡ ನಕೊಪ್ಪದಲ್ಲಿ ಇಂದು ಕರ್ನಾಟಕ ಸರಕಾರದ ಸುಪರ್ದಿಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ಜರುಗಿ, ವಿಸ್ತಾರವಾದ ತೀರ್ಥಕ್ಷೇತ್ರವಾಗಿ ಪರಿಣಮಿಸಿದೆ. ಸರಕಾರ ಈಚೆಗೆ ಮತ್ತೆ 13 ಎಕರೆ ಜಮೀನನ್ನು ನೀಡಿ, ಬೃಹತ್ ಪ್ರಮಾಣದಲ್ಲಿ ಈ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಿದೆ.

ಪ್ರತಿ ವರ್ಷ ನಡೆಯುವ ಸಂತ ಸೇವಾಲಾಲನ ಜಯಂತಿಗಾಗಿ ಕರ್ನಾಟಕದ ಭಕ್ತಾದಿಗಳು ಶಬರಿಮಲೆಯ ಸ್ವಾಮಿಗಳಂತೆ ವ್ರತಾಧಾರಿಗಳಾಗಿ ಶ್ವೇತವಸ್ತ್ರಗಳನ್ನುಟ್ಟು, ಲಕ್ಷಾಂತರ ಸಂಖ್ಯೆಯಲ್ಲಿ ಸೇರಿ ವಿಜೃಂಭಣೆಯಿಂದ ಯಾತ್ರೆಯಲ್ಲಿ ಪಾಲ್ಗೊಂಡು ಪುನೀತರಾಗುತ್ತಿದ್ದಾರೆ. 2018ರ ಈ ಜಯಂತಿಯನ್ನು ಕರ್ನಾಟಕ ಸರಕಾರ ಅಧಿಕೃತವಾಗಿ ರಾಜ್ಯಾದ್ಯಂತ ಆಚರಿಸಲು ಮುಂದಾಗಿದ್ದು, ಈ ಸಂಭ್ರಮದಲ್ಲಿ ಪಾಲ್ಗೊಳ್ಳಲು ಸಾಗರೋಪಾದಿಯಲ್ಲಿ ಭಕ್ತರು ಸೇರುವ ನಿರೀಕ್ಷೆ ಇದೆ. ಸೇವಾಲಾಲರು ಯೋಗಿಯಾಗಿ, ಮಹಾಸಂತರಾಗಿ ಲೋಕಕಲ್ಯಾಣಕ್ಕಾಗಿ ದೇಶಾದ್ಯಂತ ಸಂಚರಿಸಿ, ಅವರ ಬದುಕನ್ನು ಪಾವನ ಮಾಡುತ್ತಾ, ಅವರ ಬಾಳಿಗೆ ಬೆಳಕನ್ನು ನೀಡುತ್ತಾ, ಬಡತನ, ಕಷ್ಟ-ಕಾರ್ಪಣ್ಯಗಳಿಂದ ಬಳಲುತ್ತಿದ್ದವರಿಗೆ ಸುಂದರವಾಗಿ, ಸುವಿಚಾರಗಳನ್ನು ಹೇಳುತ್ತಾ, ತಿದ್ದಿ-ತೀಡುತ್ತಾ ಕಲ್ಯಾಣ ಮಾಡಿದ್ದಾನೆ.
********************************************
ಕೃಪೆ: ಗೂಗಲ್ ಮತ್ತು ವಾಟ್ಸಪ್ ಮಾಹಿತಿ.
ಸಂಗ್ರಹ: ಆನಂದ ಶಿಕ್ಕೇರಿ  (ಸಹ ಶಿಕ್ಷಕರು) ವಿಜಯಪುರ.
********************************************

ಸೋಮವಾರ, ಮಾರ್ಚ್ 5, 2018

90ನೇ ಆಸ್ಕರ್ ಪ್ರಶಸ್ತಿ


*90ನೇ ಆಸ್ಕರ್ ಪ್ರಶಸ್ತಿ ಪ್ರದಾನ : 

ವಿಜೇತರ ಪಟ್ಟಿ*

==============≠=

*ಅಮೆರಿಕದ ಲಾಸ್ ಏಂಜೆಲಿಸ್ ನಲ್ಲಿ 05-03-2018 ರಂದು ನಡೆದ ಸಿನಿಮಾರಂಗದ ಅತ್ಯುನ್ನತ ಪ್ರಶಸ್ತಿ  2018 ನೇ ಸಾಲಿನ 90ನೇ ಆಸ್ಕರ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ದಿ ಶೇಪ್ ಆಫ್ ವಾಟರ್ ಅತ್ಯುತ್ತಮ ನಿರ್ದೇಶನ ಸೇರಿದಂತೆ ಒಟ್ಟು ನಾಲ್ಕು ಪ್ರಶಸ್ತಿಗಳನ್ನು ಗಳಿಸಿದೆ. ಗ್ಯುಲ್ಲೆರ್ಮೋ ಡೆಲ್ ಟೊರೊ ನಿರ್ದೇಶನದ ದಿ ಶೇಪ್ ಆಫ್ ವಾಟರ್ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಗಳಿಸಿದೆ. ಇದೇ ಸಿನಿಮಾ ಗ್ಯುಲ್ಲೆರ್ಮೋಗೆ ಸರ್ವಶ್ರೇಷ್ಠ ನಿರ್ದೇಶಕ ಪ್ರಶಸ್ತಿ ದಕ್ಕಿಸಿಕೊಟ್ಟಿದೆ. ಅಲ್ಲದೆ ಉತ್ತಮ ಸಂಗೀತ ಹಾಗೂ ಶ್ರೇಷ್ಠ ಪ್ರೊಡಕ್ಷನ್ ಡಿಸೈನ್ ಈ ವಿಭಾಗಗಳಲ್ಲೂ ಎರಡು ಪ್ರಶಸ್ತಿಗಳನ್ನು ಗಳಿಸಿದೆ.*

===============

*ಪ್ರಶಸ್ತಿ ವಿಜೇತರ ಪಟ್ಟಿ :*

*ಶ್ರೇಷ್ಠ ನಟ : ಗ್ಯಾರಿ ಓಲ್ಡ್‍ಮ್ಯಾನ್ (ಚಿತ್ರ : ಡಾರ್ಕೆಸ್ಟ್ ಅವರ್ )*

* *ಶ್ರೇಷ್ಠ ನಟಿ : ಫ್ರಾನ್ಸೆಸ್ ಮ್ಯಾಕ್‍ಡೊರ್ಮಾಂಡ್ (ಚಿತ್ರ : ಮಿಸ್ಸೂರಿ)*

* *ಅತ್ಯುತ್ತಮ ಪೋಷಕ ನಟಿ :  ಅಲಿಸನ್ ಜಾನ್ನೇ (ಐ, ಟೊನ್ಯಾ )*

* *ಉತ್ತಮ ಪೋಷಕ ನಟ : ಸ್ಯಾಮ್ ರಾಕ್‍ವೆಲ್ (ಥ್ರೀ ಬಿಲ್‍ಬೋಡ್ರ್ಸ್ ಔಟ್‍ಸೈಡ್ ಎಬ್ಬಂಗ್, ಮಿಸ್ಸೂರಿ )*

* *ಉತ್ತಮ ಮೂಲ ಕಥೆ-ಗೆಟೌಟ್*

* *ಉತ್ತಮ ಚಿತ್ರಕಥೆ-ಕಾಲ್ ಮಿ ಬೈ ಯುವರ್ ನೇಮ್*

* *ಉತ್ತಮ ಅನಿಮೇಷನ್ ಸಿನಿಮಾ-ಕೋಕೋ*

* *ಉತ್ತಮ ವಿದೇಶಿ ಭಾಷೆ ಚಿತ್ರ-ಎ ಫ್ಯಾಂಟಾಸ್ಟಿಕ್ ವುಮೆನ್(ಚಿಲಿ)*

* *ಉತ್ತಮ ಮೂಲ ಗಾಯನ-ರಿಮೆಂಬರ್ ಮೀ, ಕೋಕೋ*

* *ಉತ್ತಮ ಸಾಕ್ಷ್ಯಚಿತ್ರ-ಇಕಾರಸ್*

* *ಉತ್ತಮ ಕಿರು ಸಾಕ್ಷ್ಯಾಚಿತ್ರ-ಹೆವನ್ ಇಸ್ ಎ ಟ್ರಾಫಿಕ್ ಜಾಮ್ ಆನ್ ದಿ 405*

* *ಉತ್ತಮ ಲೈವ್ ಆ್ಯಕ್ಷನ್ ಶಾರ್ಟ್-ದಿ ಸೈಲೆಂಟ್ ಚೈಲ್ಡ್*

* *ಉತ್ತಮ ಅನಿಮೇಷನ್ ಕಿರುಚಿತ್ರ-ಡಿಯರ್ ಬ್ಯಾಸ್ಕೆಟ್ ಬಾಲ್*

================

* *ಉತ್ತಮ ಚಿತ್ರ ಸಂಕಲನ, ಉತ್ತಮ ಶಬ್ಧ ಸಂಕಲನ ಮತ್ತು ಉತ್ತಮ ಶಬ್ಧ ಸಂಯೋಜನೆ-ಡನ್‍ಕ್ರಿಕ್(3 ಪ್ರಶಸ್ತಿಗಳು)*

============

* *ಉತ್ತಮ ಛಾಯಾಗ್ರಹಣ ಮತ್ತು ಉತ್ತಮ ದೃಶ್ಯ ಪರಿಣಾಮ-ಬ್ಲೇಡ್ ರನ್ನರ್.*

===============

*ಭಾರತದ ಪ್ರತಿಭಾವಂತ ನಟ ಅಲಿ ಫಜಲ್ ಹಾಗೂ ಬ್ರಿಟಿಷ್ ತಾರೆ ಜುಡಿ ಡೆಂಚ್ ಅಭಿನಯದ ವಿಕ್ಟೋರಿಯಾ ಅಂಡ್ ಅಬ್ದುಲ್ ಸಿನಿಮಾ ಅತ್ಯುತ್ತಮ ಮೇಕಪ್, ಹೇರ್‍ಸ್ಟೈಲ್ ಮತ್ತು ಕಾಸ್ಟ್ಯೂಮ್ ಡಿಸೈಸ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತಾದರೂ, ಆ ಪ್ರಶಸ್ತಿಗಳು ಡಾರ್ಕೆಸ್ಟ್ ಹವರ್ ಮತ್ತು ಫ್ಯಾಂಟಮ್ ಥ್ರೆಡ್ ಸಿನಿಮಾಗಳ ಪಾಲಾದವು.*

==============

*‘ದ ಶೇಪ್ ಆಫ್ ವಾಟರ್’ ಅತ್ಯುತ್ತಮ ಚಿತ್ರ*

##############

*‘ದ ಶೇಪ್ ಆಫ್ ವಾಟರ್’ 2018ನೇ ಸಾಲಿನ 90ನೇ ಆಸ್ಕರ್ ಪ್ರಶಸ್ತಿಯ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದೆ. ಇದರ ನಿರ್ದೇಶಕರು ಗಿಲ್ಲೆರ್ಮೊ ಡೆಲ್ ಟೊರೊ ಈ ಸಾಲಿನ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಗಳಿಸಿದ್ದಾರೆ. ಈ ಚಿತ್ರದ ನಿರ್ಮಾಪಕರು ಜೆ. ಮಿಲ್ಸ್ ಡೇಲ್ ಆಗಿದ್ದಾರೆ. ಅತ್ಯುತ್ತಮ ಚಿತ್ರ ಸೇರಿದಂತೆ ನಾಲ್ಕು ವಿಭಾಗಗಳಲ್ಲಿ ಶೇಪ್ ಆಫ್ ವಾಟರ್ ಪ್ರಶಸ್ತಿ ಗಳಿಸಿಕೊಂಡಿದೆ. ಶೀತಲ ಯುದ್ಧದ ಫ್ಯಾಂಟಸಿ ಚಿತ್ರವಾಗಿರುವ ದ ಶೇಪ್ ಆಫ್ ವಾಟರ್ ನಲ್ಲಿ ಸ್ಯಾಲ್ಲಿ ಹಾಕಿನ್ಸ್ ಮೂಕ ದ್ವಾರಪಾಲಕಳಾಗಿ ನಟಿಸಿದ್ದು ಈಕೆ ಸರ್ಕಾರಿ ಪ್ರಯೋಗಾಲಯದಿಂದ ವಶಪಡಿಸಿಕೊಂಡ ಜನಚರ ಪ್ರಾಣಿ ಜೊತೆ ಪ್ರೀತಿಯಲ್ಲಿ ಬೀಳುತ್ತಾಳೆ ಇದೆ ಈ ಚಿತ್ರದ ಕಥೆ.*

====================================

ಸಂಗ್ರಹ: ANAND SHIKKERI (Asst master)

 ಕೃಪೆ: ವಾಟ್ಸಪ್ ಮಾಹಿತಿ

=================================

ಅಂತರಾಷ್ಟ್ರೀಯ ಮಹಿಳಾ ದಿನ


ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಪ್ರತಿ ವರ್ಷ ಮಾರ್ಚ ೮ರಂದು ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ. ಈ ದಿನದಂದು ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಾಧನೆಗಳನ್ನು ನೆನೆಯಲಾಗುತ್ತದೆ.

 ಅಂತರಾಷ್ಟ್ರೀಯ ಮಹಿಳೆಯರ ದಿನ:

1910ರ ಆಗಸ್ಟ್‌ನಲ್ಲಿ ಡೆನ್ಮಾರ್ಕ್‌ನ ಕೋಪೆನ್‌ಹೇಗನ್‌ನಲ್ಲಿ ಎರಡನೆಯ ಅಂತರರಾಷ್ಟ್ರೀಯ ಸೋಷಿಯಲಿಸ್ಟ್ ಮಹಿಳಾ ಸಮ್ಮೇಳನ ನಡೆಯಿತು. ಅಲ್ಲಿನ ಕಾರ್ಮಿಕರ ಪ್ರತಿನಿಧಿ ಸಭೆಯ ಸಭಾಂಗಣದಲ್ಲಿ 17 ದೇಶಗಳ ಪ್ರತಿನಿಧಿಗಳು ಸೇರಿದ್ದರು. ಅಮೆರಿಕೆಯ ಹಲವಾರು ಕಾರ್ಮಿಕ ಸಂಘಟನೆಗಳ ನಾಯಕಿಯರು ಬಂದಿದ್ದರು. ಈ ಸಮ್ಮೇಳನಕ್ಕೆ ಅಂತರರಾಷ್ಟ್ರೀಯ ಮಹಿಳಾ ಸೆಕ್ರೆಟೇರಿಯೆಟ್‌ನ ಮುಖ್ಯಸ್ಥೆಯಾಗಿದ್ದ ಕ್ಲಾರಾ ಜೆಟ್‌ಕಿನ್ ಅಧ್ಯಕ್ಷೆಯಾಗಿದ್ದಳು. ಈ ಸಮ್ಮೇಳನದಲ್ಲಿ ಚರ್ಚಿತವಾದ ಎರಡು ವಿಷಯಗಳೆಂದರೆ ಸಾರ್ವತ್ರಿಕ ಮತದಾನದ ಹಕ್ಕು ಮತ್ತು ಮಹಿಳೆಯರ ಹೆರಿಗೆ ಭತ್ಯೆ ಮತ್ತು ಇತರ ಸೌಕರ್ಯಗಳು.
ಕ್ಲಾರಾ ಜೆಟ್‌ಕಿನ್ ಈ ಸಮ್ಮೇಳನದಲ್ಲಿ ಮಾರ್ಚ್ 8ನ್ನು ಮಹಿಳಾ ದಿನವನ್ನಾಗಿ ಆಚರಿಸಬೇಕೆಂದು ೧೯೧೧ರಲ್ಲಿ ನಿರ್ಣಯ ಮಂಡಿಸಿದರು. ಅಲ್ಲಿ ನೆರೆದಿದ್ದ ವಿವಿಧ ರಾಷ್ಟ್ರಗಳ ಸದಸ್ಯ ಪ್ರತಿನಿಧಿಗಳು ಸರ್ವಾನುಮತದಿಂದ ಸಮ್ಮತಿಸಿದರು. ಈ ಸಮ್ಮೇಳನದಲ್ಲಿ ಫಿನ್ಲೆಂಡ್‌ನಲ್ಲಿ ಆಗಷ್ಟೇ ಚುನಾಯಿತರಾಗಿದ್ದ ಮೂವರು ಮಹಿಳೆಯರಿದ್ದು, ಅವರು ಜೆಟ್‌ಕಿನ್‌ ಸಲಹೆಯನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು. ಹೀಗೆ ಅಂತರರಾಷ್ಟ್ರೀಯ ಮಹಿಳಾ ದಿನವೆನ್ನುವುದು ಪ್ರತಿಭಟನೆ ಮತ್ತು ರಾಜಕೀಯ ಕ್ರಿಯಾಶೀಲತೆಯ ದಿನವಾಗಿ ಅಸ್ತಿತ್ವಕ್ಕೆ ಬಂದಿತು.
1911ರಲ್ಲಿ ಮತದಾನದ ಹಕ್ಕನ್ನು ಬೇಡಿಕೆಯಾಗಿಟ್ಟುಕೊಂಡು ಮೊದಲ ಬಾರಿ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು. ಇದಕ್ಕೂ ಮೊದಲು 1903ರಲ್ಲಿ ಅಮೆರಿಕೆಯಲ್ಲಿ ಮತದಾನದ ಹಕ್ಕಿಗಾಗಿ ಹೋರಾಟ ನಡೆಸಿದ್ದ ಮಹಿಳಾ ಕಾರ್ಮಿಕ ಸಂಘಟನೆಗಳು ‘ಮಹಿಳೆಯರ ಟ್ರೇಡ್ ಯೂನಿಯನ್ ಲೀಗ್’ ಸ್ಥಾಪಿಸಿ ರಾಜಕೀಯ ಮತ್ತು ಆರ್ಥಿಕ ಕಲ್ಯಾಣವನ್ನು ತಮ್ಮ ಸಂಘಟನೆಯ ಮುಖ್ಯ ಧ್ಯೇಯವನ್ನಾಗಿಸಿಕೊಂಡವು.
1908ರ ಫೆಬ್ರುವರಿ ಕೊನೆಯ ಭಾನುವಾರ ಅಮೆರಿಕೆಯಲ್ಲಿ ಮತದಾನದ ಹಕ್ಕಿಗಾಗಿ ಬೃಹತ್ ಪ್ರತಿಭಟನಾ ಪ್ರದರ್ಶನಗಳು ನಡೆದಿದ್ದವು. ನಂತರ 1909ರಲ್ಲಿ ಸಿದ್ಧ ಉಡುಪುಗಳ ಕಾರ್ಖಾನೆಗಳಲ್ಲಿ 20,000ದಿಂದ 30,000ದಷ್ಟು ಮಹಿಳೆಯರು ಚಳಿಗಾಲದಲ್ಲಿ 13 ವಾರಗಳ ಕಾಲ ಮುಷ್ಕರ ನಡೆಸಿ ದಸ್ತಗಿರಿಯಾದರು. ಮಹಿಳೆಯರ ಟ್ರೇಡ್ ಯೂನಿ ಯನ್ ಲೀಗ್‌ನವರು ಜಾಮೀನು ನೀಡಿ ಬಂಧಿತ ಕೆಲಸ ಗಾರರನ್ನು ಬಿಡಿಸಿಕೊಂಡರು. ಈ ಅಮೆರಿಕದ ಮಹಿಳೆಯರ ಹೋರಾಟದಿಂದ ಸ್ಫೂರ್ತಿಗೊಂಡ ಕ್ಲಾರಾ ಜೆಟ್‌ಕಿನ್ ಸೋಷಿಯಲಿಸ್ಟ್ ಮಹಿಳೆಯರ ಸಮ್ಮೇಳನದಲ್ಲಿ ವರ್ಷಕ್ಕೊಮ್ಮೆ ದಿನವನ್ನು ನಿಗದಿಪಡಿಸಿ ಮಹಿಳೆಯರು ತಮ್ಮ ಬೇಡಿಕೆಗಳನ್ನು ಒತ್ತಾಯಿಸಲು ಅನುವಾಗುವಂತಹ ವ್ಯವಸ್ಥೆಗಾಗಿ ಸಲಹೆ ನೀಡಿ ಕಾರ್ಯರೂಪಕ್ಕೆ ತರಲು ಶ್ರಮಿಸಿದಳು.

ಇತಿಹಾಸ

"ಅಂತರಾಷ್ಟ್ರೀಯ ಮಹಿಳೆಯರ ದಿನ" ಮೊದಲ ಬಾರಿಗೆ ಹೊರ ಹೊಮ್ಮಿದ್ದು ಕೂಲಿ ಚಳುವಳಿ(ಲೇಬರ್ ಮೊವ್ಮೆಂಟ್ಸ್) ಚಟುವಟಿಕೆ ಉತ್ತರ ಅಮೆರಿಕಮತ್ತು ಯೂರೋಪ್ ಪ್ರದೇಶಗಳಲ್ಲಿ ನಡೆದಾಗ. ೧೯೦೯: ಸಂಯುಕ್ತ ಸಂಸ್ಥಾನಗಳಲ್ಲಿ ಮೊದಲ "ಅಂತರಾಷ್ಟ್ರೀ ಯ ಮಹಿಳೆಯರ ದಿನ"ಫೆಬ್ರವರಿ ೨೮ ರಂದು ಕಂಡು ಬಂತು. ಅಮೇರಿಕಾದ ಸಾಮಾಜವಾದಿ ಪಕ್ಷ ಈ ದಿನವನ್ನ ಕೆಲಸದ ಪರಿಸ್ಥಿತಿಯನ್ನ ವಿರೋಧಿಸಿ ನ್ಯೂಯಾರ್ಕ್ ನಗರದಲ್ಲಿ ನಡೆದ "ಸರ್ಕಾರಿ ಕಾರ್ಮಿಕರ ಚಳುವಳಿ" ಯಲ್ಲಿ ಪ್ರತಿಭಟಿಸಿದ ಮಹಿಳೆಯರಿಗೆ ಅರ್ಪಿಸಲಾಯಿತು.
೧೯೧೦: ಅಂತರಾಷ್ಟ್ರೀಯ ಸಮಾಜವಾದಿ ಕೊಪೆಂಹಗೆನ್‍ನಲ್ಲಿ ನಡೆದ ಚರ್ಚೆಯಲ್ಲಿ ಅದಿಷ್ಟಿತಗೊಳಿಸಲಾಯಿತು. ಈ ಪ್ರಸ್ಥಾಪವನ್ನು ಅವಿರೋಧವಾಗಿ ೧೦೦ ಮಹಿಳೆಯರು ೧೭ ದೇಶಗಳಿಂದ ಸಹಕರಿಸಿದರು. ಇದು ಫಿನ್ನಿಷ್ ಪಾರ್ಲಿಮೆಂಟ್‍ಗೆ ಆಯ್ಕೆಯಾದ ಮೊದಲ ಮೂವರು ಮಹಿಳೆಯರನ್ನೂ ಸಹ ಒಳಗೊಂಡಿತ್ತು.
೧೯೧೧: ಕೊಪೆಂಹಗೆನ್‍ನ ಮೊದಲ ಹೆಜ್ಜೆಯ ಫಲಿತಾಂಶವಾಗಿ, ಅಂತರಾಷ್ಟ್ರೀಯ ಮಹಿಳೆಯರ ದಿನವನ್ನು ಮೊದಲ ಬಾರಿಗೆ ಮಾರ್ಚ್ ೧೯ ರಂದು ಆಸ್ಟ್ರೇಲಿಯ, ಡೆನ್ಮಾರ್ಕ್, ಜರ್ಮನಿ ಮತ್ತು ಸ್ವಿಡ್ಜರ್ಲ್ಯಾಂಡ್ ದೇಶಗಳು ಗುರುತಿಸಿದವು. ಅಂದು ಒಂದು ಮಿಲಿಯನ್‍ಗಿಂತಲು ಹೆಚ್ಹು ಮಹಿಳೆಯರು ಹಾಗು ಪುರುಷರು ಈ ಚಳುವಳಿಯಲ್ಲಿ ಭಾಗವಹಿಸಿದರು.
ಇದಲ್ಲದೇ ಮತಚಲಾಯಿಸುವ ಹಕ್ಕು, ಸಾರ್ವಜನಿಕ ಕಛೇರಿ, ಮಹಿಳೆಯರಿಗೆ ಕೆಲಸ ಮಾಡುವ ಹಕ್ಕು ಹಾಗು ಉದ್ಯೋಗ ತರಬೇತಿಯನ್ನು ಜಾರಿಗೆ ತರಲು ಬೇಡಿಕೆಯಿಟ್ಟಿದ್ದಲ್ಲದೇ ಕೆಲಸದಲ್ಲಿನ ತಾರತಮ್ಯವನ್ನ ವಿರೋಧಿಸಿ ಪ್ರತಿಭಟಿಸಿದರು. ೧೯೧೩-೧೯೧೪ : ಅಂತರಾಷ್ಟ್ರೀಯ ಮಹಿಳೆಯರ ದಿನದ ಆಚರಣೆ "೧ನೇ ವಿಶ್ವ ಯುದ್ಧ"ವನ್ನ ತಡೆಗಟ್ಟುವ ಯಾಂತ್ರಿಕ ಕೌಶಲ್ಯವಾಗಿ ಮಾರ್ಪಟ್ಟಿತು.
ಇದೇ ವೇಳೆಯಲ್ಲಿ ಶಾಂತಿ ಚಳುವಳಿಯ ಅಂಗವಾಗಿ ರಷ್ಯಾದ ಮಹಿಳೆಯರು ಫೆಬ್ರವರಿಯ ಕೊನೆಯವಾರದಲ್ಲಿ ವಿಶ್ವ ಮಹಿಳಾ ದಿನವನ್ನ ಆಚರಿಸಿ ಗಮನಸೆಳೆದರು. ಅತ್ತ ಯುರೋಪಿನಲ್ಲಿ ಅದೇ ಸಾಲಿನ ಮಾರ್ಚಿ ೮ ರಂದು ಮಹಿಳೆಯರು ಯುದ್ಧನೀತಿಯನ್ನ ವಿರೋಧಿಸಿ, ಐಕ್ಯಮತ ವನ್ನ ಸಹಕರಿಸಿ ಬ್ರುಹತ್ ಚಳುವಳಿ ನಡೆಸಿದರು.
೧೯೧೭: ಮತ್ತೆ ಯುದ್ಧ ನೀತಿಯನ್ನ ವಿರೋಧಿಸಿ ರಷ್ಯಾದ ಮಹಿಳೆಯರು ಊಟ ಮತ್ತು ಶಾಂತಿ ಚಳುವಳಿಯನ್ನ ಫೆಬ್ರವರಿ ತಿಂಗಳ ಕೊನೆಯಭಾನುವಾರದಲ್ಲಿಇದು ಗ್ರೆಗೊರಿಯನ್ ಕ್ಯಾಲೆಂಡರಿನ ಪ್ರಕಾರ ಮಾರ್ಚ ೮ ರಂದು       ನಡೆಸಿದರು. ನಾಲ್ಕು ವಾರಗಳ ನಂತರ ರಾಜ ಮನೆತನದ ಆಳ್ವಿಕೆಯನ್ನು ನಿಲ್ಲಿಸಿ ಮತಚಲಾಯಿಸುವ ಅಧಿಕಾರವನ್ನ ಸರ್ಕಾರ ನೀಡಿತು. ಅಂದಿನ ದಿನಗಳಲ್ಲಿ ಮಹಿಳಾ ದಿನಾಚರಣೆ ಮುಂದುವರೆದ ಮತ್ತು ಮುಂದುವರೆಯುತ್ತಿರುವ ದೇಶಗಳಲ್ಲಿ ಹೊಸ ಆಯಾಮವನ್ನು ಪಡೆಯಿತು. ಬೆಳೆಯುತ್ತಿದ್ದ ಅಂತರಾಷ್ಟ್ರೀಯ ಮಹಿಳಾ ಚಳುವಳಿ, ಅವುಗಳ ಸಾಮರ್ಥ್ಯವನ್ನ ಹೆಚ್ಹಿಸಿದ ನಾಲ್ಕು "ಜಾಗತಿಕ ಸಂಯುಕ್ತ ರಾಷ್ಟ್ರೀಯ ಮಹಿಳಾ ಸಮಾಲೋಚನೆ", ಮಹಿಳಾ ಹಕ್ಕು, ರಾಜಕೀಯ ಹಾಗು ಆರ್ಥಿಕ ಕ್ಷೆತ್ರಗಳಲ್ಲಿ ಭಾಗವಹಿಸುವ ಹಕ್ಕನ್ನ ಪಡೆಯಲು ಪೋಷಿಸಿದವು.
ದಿನಕಳೆದಂತೆ ಅಂತರಾಷ್ಟ್ರೀಯ ಮಹಿಳೆಯರ ದಿನ ಬೆಳವಣಿಗೆಯ ಪ್ರತಿಬಿಂಬದ ಜೊತೆಗೆ ಸಾಧರಣ ಮಹಿಳೆಯ ಧೀರತನ ಮತ್ತು ಧೃಡತೆ ದೇಶ ಹಾಗು ಸಮುದಾಯದ ಇತಿಹಾಸದಲ್ಲಿ ವಹಿಸಿದ ಅಸಾಧಾರಣ ಪಾತ್ರವನ್ನ ಬಿಂಬಿಸುತ್ತಾ ಬದಲಾವಣೆಯ ಕರೆಯನ್ನ ನೀಡುತ್ತದೆ.

ಸಂಯುಕ್ತ ರಾಷ್ರಗಳು ಮತ್ತು ಲಿಂಗ ಸಮಾನತೆ

೧೯೪೫ ರಲ್ಲಿ ಸಹಿ ಮಾಡಿದ ಸಂಯುಕ್ತ ರಾಷ್ಟ್ರಗಳ ಅಂತರಾಷ್ಟ್ರೀಯ "ಲಿಂಗ ಸಮಾನತಾ ತತ್ವ" ಅಂಗೀಕಾರಕ್ಕೆ ಬಂತು.ಅಲ್ಲಿಯ ನಂತರ ವಿಶ್ವವ್ಯಾಪ್ಯ ಒಪ್ಪಂದ ನೀತಿ, ನಿರ್ದಿಷ್ಟಮಾನ, ಮಹಿಳಾಭಿವ್ರುದ್ದಿ ಕಾರ್ಯಕ್ರಮ ಹಾಗು ಯೋಜನೆಗಳು ಕಾರ್ಯರೂಪಕ್ಕೆ ಬಂದವು. ಕೆಲ ವರ್ಷಗಳ ನಂತರ ಸಂಯುಕ್ತ ರಾಷ್ರಗಳು ಮತ್ತು ಅದರ ತಾಂತ್ರಿಕ ಏಜೆನ್ಸ್ಸಿಗಳು ಮಾನವ ಹಕ್ಕುಗಳನ್ನ ಅಭಿನಂದಿಸಿ ಮಹಿಳೆಯರು ಭಾಗವಹಿಸುವುದನ್ನು ಪ್ರೋತ್ಸಾಹಿಸಿದವು. ಮಹಿಳೆಯರನ್ನು ಪ್ರಬಲಗೊಳಿಸುವ ಸಂಯುಕ್ತ ರಾಷ್ರಗಳ ಕಾರ್ಯ ವಿಶ್ವದಾದ್ಯಂತ ಮುಂದುವರೆಯಿತು.

ಭಾರತದಲ್ಲಿ ಮಹಿಳಾ ದಿನಾಚರಣೆ

ಭಾರತದಲ್ಲಿ ಮಹಿಳಾ ದಿನಾಚರಣೆಗೆ ಸಾಮಾಜಿಕ ಅಥವಾ ರಾಜಕೀಯ ಹಿನ್ನೆಲೆ ಏನೂ ಇಲ್ಲವಾದರೂ, ಭಾರತದಲ್ಲೂ ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನ ಸಾಧಾರಣವಾಗಿ ಗಂಡಸರು ಮಹಿಳೆಯರಿಗೆ ತಮ್ಮ ಗೌರವವನ್ನು ವ್ಯಕ್ತಪಡಿಸುತ್ತಾರೆ. ಆದರೆ ಭಾರತಕ್ಕೆ ಮಹಿಳಾ ಸಮಾನತೆ ಎಂಬುದು ಹೊಸ ಕಲ್ಪನೆಯೇನಲ್ಲ. ಅರ್ಧನಾರೀಶ್ವರ ಎಂಬ ಅದ್ಭುತ ಕಲ್ಪನೆ ಹುಟ್ಟಿದ್ದು ಭಾರತದಲ್ಲಿ. ಪ್ರಕೃತಿ ಅಥವಾ ಹೆಣ್ಣು ಹಾಗೂ ಪುರುಷ ಅಥವಾ ಗಂಡು ಒಬ್ಬರಿಂದೊಬ್ಬರು ಬೇರೆ ಅಲ್ಲ, ಸೃಷ್ಟಿಯಲ್ಲಿ ಇವರಿಬ್ಬರದು ಸಮಪಾಲು ಎಂಬುದೇ ಅರ್ಧನಾರೀಶ್ವರ ಎಂಬ ಕಲ್ಪನೆಯ ಸಂಕ್ಷಿಪ್ತ ಅರ್ಥ. ಪಶ್ಚಿಮ ರಾಷ್ಟ್ರಗಳ ಸಂಸ್ಕೃತಿಯಲ್ಲೆಲ್ಲೂ ಹೆಣ್ಣಿಗಿಲ್ಲದ ದೈವಿಕ ಪಟ್ಟವನ್ನು ಕೊಟ್ಟಿದ್ದು ಭಾರತೀಯರು. ಋಗ್ವೇದದಲ್ಲಿ ಲೋಪಾಮುದ್ರ ಹಾಗೂ ವಾಕ್ ಅಂಬ್ರಿಣಿ ಎಂಬ ಆ ಕಾಲದ ಪ್ರಬಲ ನಾರಿಯರ ಕೊಡುಗೆ ಇದೆ. ನಮ್ಮ ಗಾಯತ್ರಿ ಮಂತ್ರ ಕೂಡ ವೇದಗಳ ತಾಯಿಯೆಂದು ಕರೆಯಲ್ಪಡುವ ಗಾಯತ್ರಿಯನ್ನು ಕುರಿತಾಗಿದೆ. ವೇದಕಾಲದಲ್ಲಿ ಸಮಾಜದಲ್ಲಿ ನಾರಿಗೆ ಪುರುಷನಿಗೆ ಸಮಾನವಾದ ಹಕ್ಕುಗಳಿದ್ದವು. ಶಿಕ್ಷಣದಲ್ಲಿ ಸಮಾನತೆಯಿತ್ತು, ಆರ್ಥಿಕ ವಿಚಾರಗಳಲ್ಲಿ ಪತಿ ಪತ್ನಿಯ ಸಲಹೆ ಕೇಳುತ್ತಿದ್ದ, ಆದರೆ ಒಂದು ಹಂತದಲ್ಲಿ ಭಾರತೀಯ ಸಂಸ್ಕೃತಿ ಹೆಣ್ಣಿಗೆ ಕೊಟ್ಟ ದೈವಿಕ ಪಟ್ಟವೆ ಅವಳಿಗೆ ಮುಳುವಾಯಿತೆ ಎಂಬ ಪ್ರಶ್ನೆಯೂ ಬರುತ್ತದೆ. ನಾರಿ ಕ್ಷಮಯಾಧರಿತ್ರಿ ಹೌದು, ಆದರೆ ತನಗಾಗುವ ಎಲ್ಲ ಅನ್ಯಾಯವನ್ನೂ ಸಹಿಸಿಕೊಳ್ಳಬೇಕೆ? ತಾಳ್ಮೆ, ಕರುಣೆ ಮುಂತಾದ ನಾರಿಯ ಗುಣಗಳು ಸಮಾಜದಲ್ಲಿ ಅವಳ ಸಮಾನತೆಯನ್ನು ಪುರುಷರು ಕಸಿದುಕೊಳ್ಳಲು ಕಾರಣವಾಯಿತೆ? ಭಾರತೀಯ ಸಂಸ್ಕೃತಿಯ ಉದಾತ್ತ ತತ್ವಗಳ ಅಪಹಾಸ್ಯವೆಂಬಂತೆ ನಮ್ಮಲ್ಲಿ ಸತೀ ಪದ್ಧತಿ, ವರದಕ್ಷಿಣೆ ಮುಂತಾದ ಪಿಡುಗುಗಳು ಹುಟ್ಟಿಕೊಂಡವು. ಹೆಣ್ಣಿಗೆ ಶಿಕ್ಷಣ ಇಲ್ಲದಾಯಿತು. ಈಚೆಗೆ ಹೆಚ್ಚಾಗಿ ವರದಿಯಾಗುತ್ತಿರುವ ಅತ್ಯಾಚಾರದಂಥ ಕ್ರೂರ ಅಪರಾಧಗಳಿಗೆ ಕೂಡ ಭಾರತೀಯರು ಸಾಕ್ಷಿಯಾದರು. ಸಮಾಜದಲ್ಲಿ ಹೆಣ್ಣಿನ ಸ್ಥಾನ ಕುಸಿದಂತೆ ಹೆಣ್ಣನ್ನು ಹೆರುವುದೇ ಅಪರಾಧ ಎಂಬಂತಾಯಿತು. ಸ್ತ್ರೀ ಭ್ರೂಣ ಹತ್ಯೆ ಪ್ರಾರಂಭವಾಯಿತು. ಆದರೆ ಇದೆಲ್ಲ ಭಾರತೀಯ ಸಂಸ್ಕೃತಿಯ ದೋಷ ಎಂದುಕೊಳ್ಳುವುದು ತಪ್ಪು. ನಮ್ಮ ಸಂಸ್ಕೃತಿಯ ತತ್ವಗಳು ಪಾಲನೆಯಾಗಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ.

ಭಾರತದಲ್ಲಿ ಹೆಣ್ಣಿಗೆ ಸಮಸ್ಯೆಗಳೇನೆ ಇದ್ದರೂ, ಅವುಗಳನ್ನೆಲ್ಲ ಬಗಲಿಗಿಟ್ಟು ಮಹಿಳೆ ಎಲ್ಲ ರಂಗಗಳಲ್ಲೂ ಪುರುಷನಿಗೆ ಸಮಾನವಾಗಿ ಸಾಧನೆಗೈಯುತ್ತಿದ್ದಾಳೆ. ಭಾರತ ಹೆಣ್ಣು ಪ್ರಧಾನಿಯಾಗಿದ್ದನ್ನು, ರಾಷ್ಟ್ರಪತಿಯಾಗಿದ್ದನ್ನು ಕಂಡಿದೆ. ಅದರಿಂದ ದೇಶಕ್ಕಾದ ಒಳಿತು ಕೆಡುಕುಗಳು ಚರ್ಚಾಸ್ಪದವಾಗಿದ್ದರೂ ಕೂಡ, ಭಾರತ ಅವರಿಗೆ ಒಂದು ವೇದಿಕೆ ಒದಗಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಪ್ರಖ್ಯಾತ ಬಹುರಾಷ್ಟ್ರೀಯ ಕಂಪೆನಿಗಳ ಹಿಂದೆ ಗಂಡಿಗೆ ಸಮಾನಶಕ್ತಿಯಾಗಿ ದುಡಿದ ಮಹಿಳೆಯರಿದ್ದಾರೆ. ರಾಜಕೀಯದಲ್ಲಿ ದೊಡ್ಡ ಹೆಸರು ಮಾಡಿದ್ದಾಳೆ ಹೆಣ್ಣು. ಸಾಂಸ್ಕೃತಿಕ ಕ್ಷೇತ್ರದಲ್ಲೂ ಹಿಂದುಳುದಿಲ್ಲ. ರಂಗಭೂಮಿ, ಸಂಗೀತ, ಕಲೆ, ಚಲನಚಿತ್ರ - ಎಲ್ಲ ಕ್ಷೇತ್ರಗಳಲ್ಲೂ ಹೆಣ್ಣಿನ ಸಾಧನೆ ಮುಂದುವರೆದಿದೆ. ಮೊದಲೆಲ್ಲ ಚಲನಚಿತ್ರಗಳಲ್ಲಿ ನಟನೆಯಲ್ಲಿ ಹೆಸರು ಮಾಡುತ್ತಿದ್ದರೆ, ಈಗ ತಾಂತ್ರಿಕ ಕೆಲಸಗಳಿಗೂ ಹೆಣ್ಣು ಕೈ ಹಾಕಿ ಯಶಸ್ವಿಯಾಗಿದ್ದಾಳೆ. ಹೆಸರುಗಳು ಅನಗತ್ಯ, ಈ ಸಾಲುಗಳನ್ನು ಓದುತ್ತಿದ್ದಂತೆ ನಿಮ್ಮ ಮನದಲ್ಲಿ ಆ ಹೆಸರುಗಳು ಬಂದೇ ಬರುತ್ತವೆ. 

ಸಾಧನೆಯ ಹಾದಿಯಲ್ಲಿ ಕೆಲವು ಮಹಿಳೆಯರು ಮುಂದುವರೆದಿದ್ದರೆ, ಸಮಾನತೆ ಎಂಬ ಪದವನ್ನು ತಪ್ಪಾಗಿ ಅರ್ಥ ಮಾಡಿಕೊಂಡವರೂ ನಮ್ಮಲ್ಲಿ ಸಿಗುತ್ತಾರೆ. ಹೆಚ್ಚಿದ ವಿವಾಹ ವಿಚ್ಛೇದನಗಳು, ಮುರಿದು ಬಿದ್ದ ಸಂಸಾರಗಳು ಇದಕ್ಕೆ ಉದಾಹರಣೆ. ವರದಕ್ಷಿಣೆಯ ವಿಚಾರದಲ್ಲಿ ಹೆಣ್ಣಿಗೆ ಕೊಟ್ಟ ಹಕ್ಕನ್ನು ತಪ್ಪಾಗಿ ಬಳಸಿಕೊಂಡು ಸಂಸಾರಗಳನ್ನು ಬೀದಿಗೆ ತಂದವರೂ ಇದ್ದಾರೆ. ಸಮಾನತೆ ಎಂದರೆ "ಯಾರು ಮೇಲು, ಒಂದು ಕೈ ನೋಡಿಯೇ ಬಿಡೋಣ" ಎಂಬ ಪೈಪೋಟಿಯಲ್ಲ. ಇಬ್ಬರು ಪರಸ್ಪರ ಅರಿತುಕೊಂಡು, ಒಬ್ಬರನ್ನೊಬ್ಬರು ತಿದ್ದಿಕೊಂಡು, ಒಬ್ಬರ ಕೊರತೆಯನ್ನು ಇನ್ನೊಬ್ಬರು ನೀಗಿಸುವುದು ಸಮಾನತೆ. ಒಬ್ಬರಿಗೊಬ್ಬರು ಪೂರಕವಾಗಿರಬೇಕು, ಒಬ್ಬರನ್ನು ಇನ್ನೊಬ್ಬರು ಸಂಪೂರ್ಣಗೊಳಿಸಬೇಕು - ಅರ್ಧನಾರೀಶ್ವರದ ಕಲ್ಪನೆಯೇ ಇದು. 

ತಾಯಿಯಾಗಿ, ಸೋದರಿಯಾಗಿ, ಪತ್ನಿಯಾಗಿ, ಮಗಳಾಗಿ ಹೆಣ್ಣು ನಿರ್ವಹಿಸುವ ಪಾತ್ರಗಳು ಹಲವು. ಗಂಡು ಅವಳಿಗೆ ಸಮಾನನಲ್ಲ, ಹೆಣ್ಣೇ ಗಂಡಿಗಿಂತ ಬಲಶಾಲಿ ಎಂಬ ಮಾತು ಸುಳ್ಳಲ್ಲ. ಇದು ಸೃಷ್ಟಿ ಹೆಣ್ಣಿಗೆ ಕೊಟ್ಟ ಶಕ್ತಿ. ಹಾಗೆಯೇ ಗಂಡು ಈ ಶಕ್ತಿಯನ್ನು ಅರಿತು, ಅದರ ಸದ್ಬಳಕೆಯಾಗುವಂತೆ ನೋಡಿಕೊಳ್ಳಬೇಕು. ಈ ಮಹಿಳಾ ದಿನವು ನಮ್ಮಲ್ಲಿ ಹೆಣ್ಣಿನ ಕುರಿತ ಗೌರವಭಾವನ್ನು ಹೆಚ್ಚಿಸಲಿ. ಸಮಾನತೆಗಾಗಿ ಹೆಣ್ಣು ಹೋರಾಡುವಂತಾಗುವುದು ಬೇಡ, ಹೆಣ್ಣಿಗೆ ಭಾರತ ಸಂಸ್ಕೃತಿಯಲ್ಲಿ ಮೊದಲಿನಿಂದಲೆ ಇದ್ದ ಅವಳ ಅರ್ಹ ಸ್ಥಾನ ದೊರಕಲಿ ಎಂದು ಆಶಿಸೋಣ.

******************************************** ಸಂಗ್ರಹ: ANANAD SHIKKERI (Asst master)
ಕೃಪೆ: WEBZINE Blog, GooGle.                         *******************************************

ಭಾರತೀಯ ಸಾಮ್ರಾಜ್ಯಗಳು


ಭಾರತೀಯ ಸಾಮ್ರಾಜ್ಯಗಳು:

೧) ಮೌರ್ಯರು :

━━━━━━━━━

ರಾಜ್ಯದ ನಾನಾ ಭಾಗಗಳಲ್ಲಿ ದೊರೆತಿರುವ ಶಾಸನಗಳು ಕನ್ನಡನಾಡು ಉತ್ತರದ ಮೌರ್ಯರ ಆಡಳಿತಕ್ಕೆ ಕ್ರಿ.ಪೂ. 3ನೇ ಶತಮಾನದಲ್ಲಿ ಒಳಪಟ್ಟಿತ್ತು ಎಂದು ಸಾರುತ್ತವೆ.  ಮೌರ್ಯರ ಹೆಸರಾಂತ ದೊರೆ ಅಶೋಕ (ಕ್ರಿ.ಪೂ. 273-233) ನ ಶಾಸನಗಳು ರಾಜ್ಯದ 11 ಸ್ಥಳಗಳಲ್ಲಿ ಕಂಡು ಬಂದಿವೆ.
* ಚಂದ್ರಗುಪ್ತ ಮೌರ್ಯನು ತನ್ನ ಗುರು ಭದ್ರಬಾಹುವಿನೊಡನೆ ಕರ್ನಾಟಕದ ಶ್ರವಣ ಬೆಳಗೊಳದಲ್ಲಿ ಬಂದು ನೆಲೆಸಿದ್ದನು.

* ಅಶೋಕನ ಕರ್ನಾಟಕದ ಪ್ರಾಂತ್ಯಗಳ ರಾಜಧಾನಿಗಳು  :
ಸುವರ್ಣಗಿರಿ,  ಇಸಿಲ,  ತೊಸಿಲ,  ಸಂಪ.

* ಕರ್ನಾಟಕದಲ್ಲಿ ಅಶೋಕನ ಶಾಸನಗಳು ದೊರೆತ ಸ್ಥಳಗಳು :
- ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ,  ಅ.ಸಿದ್ದಾಪುರ,  ಜಿ.ರಾಮೇಶ್ವರ.
- ರಾಯಚೂರು ಜಿಲ್ಲೆಯ ಗವಿಮಠ,ಮಾಸ್ಕಿ,  ಪಾಲ್ಕಿಗುಂಡು,  ಕೊಪ್ಪಳ.
- ಗುಲ್ಬರ್ಗಾ ಜಿಲ್ಲೆಯ ಸನ್ನತಿ.
- ಬಳ್ಳಾರಿ ಜಿಲ್ಲೆಯ ನಿಟ್ಟೂರು,  ಉದೇಗೊಳ್ಳಂ 

೨)  ಶಾತವಾಹನರು (ಕ್ರಿ.ಪೂ. 238 - ಕ್ರಿ.ಶ 225) : 

━━━━━━━━━━━━━━━━━━━━━━━━━━━━━━━━━-
ಮೌರ್ಯರ ಸಾಮಂತರಾಗಿದ್ದ ಇವರು, ಮೌರ್ಯರ ನಂತರ ಸ್ವತಂತ್ರರಾಗಿ,  (ಕ್ರಿ.ಪೂ. 225 ರವರೆಗೆ ಆಳ್ವಿಕೆ ನಡೆಸಿದರು.  
* ಇವರ ರಾಜಧಾನಿ  :  ಪೈತಾನ್ ಅಥವಾ ಪ್ರತಿಷ್ಠಾನ.
* ಇವರ ಲಾಂಛನ :  ವರುಣ.
* ಇವರೇ ಕ್ರಿ.ಶ 78ರಲ್ಲಿ ಶಾಲಿವಾಹನ ಶಕೆಯನ್ನು ಪ್ರಾರಂಭಿಸಿದವರು.
* ಶಾತವಾಹನರ ಮೂಲ ಪುರುಷ  :  ಸಿಮುಖ. 
* ಈ ಸಂತತಿಯ ಅತ್ಯಂತ ಪ್ರಮುಖ ದೊರೆ : ಗೌತಮಿಪುತ್ರ ಶಾತಕರ್ಣಿ 
* ಶಾತವಾಹನರನ್ನು ' ಶಾತಕರ್ಣಿಗಳೆಂದು' ಕರೆಯುತ್ತಾರೆ.

೩)  ಬನವಾಸಿಯ ಕದಂಬರು (ಕ್ರಿ.ಶ 345 - 540)

━━━━━━━━━━━━━━━━━━━━━━━━━━━━━━━━━━━━━━━━━
* ಈ ಸಂತತಿಯ ಸ್ಥಾಪಕ  :ಮಯೂರವರ್ಮ (ಮಯೂರಶರ್ಮ)  (345-360)
* ಕದಂಬರ ರಾಜಧಾನಿ :  ಬನವಾಸಿ (ಉ.ಕನ್ನಡ ಜಿಲ್ಲೆಯಲ್ಲಿದೆ) 
* ಬನವಾಸಿಗೆ ವನವಾಸಿ,  ವೈಜಯಂತಿ,  ಬೈಜಾಂಟಾಯಿನ್ ಎಂಬ ಹೆಸರುಗಳಿದ್ದವು.
* ಇವರ ಲಾಂಛನ :  ಸಿಂಹ.

೪)  ತಲಕಾಡಿನ ಗಂಗರು  (ಕ್ರಿ.ಶ 350- 999)

━━━━━━━━━━━━━━━━━━━━━━━━━━━━━━━━━━━━━━━━━
* ದಡಿಗ ಮತ್ತು ಮಾದವರು ಗಂಗ ವಂಶದ ಸ್ಥಾಪಕರು. 
* ಈ ಸಂತತಿಯ ಮೊದಲ ದೊರೆ : ದಡಿಗ (350 -400)
* ಇವರ ಮೊದಲ ರಾಜಧಾನಿ :  ಕೋಲಾರ ಬಳಿಯ ಕುವಲಾಲ
* ಇವರ ಎರಡನೆಯ ರಾಜಧಾನಿ : ತಲಕಾಡು
* ತಲಕಾಡಿನ ಮತ್ತೊಂದು ಹೆಸರು  :  ತಲವನಪುರ.
* ಇವರ ಮೂರನೇ ರಾಜಧಾನಿ :  ಚೆನ್ನಪಟ್ಟಣ ಬಳಿಯ ಮಾಕುಂದ
* ಇವರ ಲಾಂಛನ : ಆನೆ(ಮದಗಜ) 
* ಈ ಸಂತತಿಯ ಅತ್ಯಂತ ಪ್ರಸಿದ್ಧ  ದೊರೆ : ದುರ್ವಿನೀತ (540-600)
* ಶ್ರವಣಬೆಳಗೊಳದಲ್ಲಿ ಬಾಹುಬಲಿ ವಿಗ್ರಹವನ್ನು ಕೆತ್ತಿಸಿದ ಚಾವುಂಡರಾಯ ಗಂಗರ ಆಸ್ಥಾನದಲ್ಲಿ ಮಂತ್ರಿ ಹಾಗೂ ದಂಡನಾಯಕನಾಗಿದ್ದನು.
* ಚಾವುಂಡರಾಯನು 4ನೇ ರಾಚಮಲ್ಲನ ಪ್ರಧಾನಮಂತ್ರಿಯಾಗಿದ್ದನು. 

೫) ಬಾದಾಮಿಯ ಚಾಲುಕ್ಯರು (ಕ್ರಿ.ಶ 500- 757) : 

━━━━━━━━━━━━━━━━━━━━━━━━━━━━━━━━━━━━━━━━━
* ಈ ಸಂತತಿಯ ಸ್ಥಾಪಕ  :  ಜಯಸಿಂಹ 
* ಇವರ ರಾಜಧಾನಿ  : ಬಾದಾಮಿ ಅಥವಾ ವಾತಾಪಿ (ಬಿಜಾಪುರ ಜಿಲ್ಲೆಯಲ್ಲಿದೆ) 
* ಈ ಸಂತತಿಯ ಅತ್ಯಂತ ಪ್ರಸಿದ್ಧ  ದೊರೆ :  ಇಮ್ಮಡಿ ಪುಲಕೇಶಿ (609-642) 
* ಇವರ ರಾಜ ಲಾಂಛನ  : ವರಹ.
* ಇಮ್ಮಡಿ ಪುಲಕೇಶಿಯ ಆಸ್ಥಾನಕ್ಕೆ ಭೇಟಿಯಿತ್ತ ವಿದೇಶಿ ಪ್ರವಾಸಿಗ :  ಚೀನಾದ ಬೌದ್ಧ ಯಾತ್ರಿಕ  ಹ್ಯೂಯನ್ ತ್ಸಾಂಗ್. 

೬) ಮಾನ್ಯಖೇಟದ ರಾಷ್ಟ್ರಕೂಟರು  (ಕ್ರಿ.ಶ 345 - 540) : 

━━━━━━━━━━━━━━━━━━━━━━━━━━━━━━━━━━━━━━━━━
* ಈ ಸಂತತಿಯ ಸ್ಥಾಪಕ : ದಂತಿದುರ್ಗ
* ಇವರ ರಾಜಧಾನಿ :  ಮಾನ್ಯಖೇಟ ಅಥವಾ ಮಾಲಖೇಡವಾಗಿತ್ತು.
* ಇವರ ಲಾಂಛನ : ಗರುಡ
* ಈ ಸಂತತಿಯ ಅತ್ಯಂತ ಹೆಸರಾಂತ   ದೊರೆ :ಅಮೋಘವರ್ಷ ನೃಪತುಂಗ (814-878)
* ಕ್ರಿ.ಶ 851 ರಲ್ಲಿ ಅರಬ್ ಪ್ರವಾಸಿ ಸುಲೈಮಾನ್ ನು ಇವನ ಆಸ್ಥಾನಕ್ಕೆ ಭೇಟಿ ಕೊಟ್ಟಿದ್ದನು. 

೭) ಕಲ್ಯಾಣದ ಚಾಲುಕ್ಯರು (ಕ್ರಿ.ಶ 973-1156 ಹಾಗೂ 1183-1200)

━━━━━━━━━━━━━━━━━━━━━━━━━━━━━━━━━━━━━━━━━
* ಇಮ್ಮಡಿ ತೈಲಪ ಕಲ್ಯಾಣದ ಚಾಲುಕ್ಯ ಸಂಸ್ಥಾನದ ಸ್ಥಾಪಕ
* ಇವರ ರಾಜಧಾನಿ : ಕಲ್ಯಾಣ
* ಈ ಸಂತತಿಯ ಅತ್ಯಂತ ಪ್ರಮುಖ ದೊರೆ : 6ನೇ ವಿಕ್ರಮಾದಿತ್ಯ (1076-1126)
* 1156 ರಲ್ಲಿ ಸಿಂಹಾಸನವನ್ನು ಕಳೆದುಕೊಂಡ ಇವರ ದೊರೆಗಳು ಪುನಃ 1183 ರಿಂದ 1200 ರವರೆಗೆ ರಾಜ್ಯಭಾರ ನಡೆಸಿದರು. 

೮) ಕಲ್ಯಾಣಿಯ ಕಲಚೂರಿಗಳು  (ಕ್ರಿ.ಶ 1156 - 1183)

━━━━━━━━━━━━━━━━━━━━━━━━━━━━━━━━━━━━━━━━━
* ಕೇವಲ ಸಾಮಂತರಾಗಿ ಅಧಿಕಾರ ನಡೆಸುತ್ತಿದ್ದ  ಕಲ್ಯಾಣಿಯ ಕಲಚೂರಿಗಳು ಬಿಜ್ಜಳ (1156-1168) ನಿಂದಾಗಿ ಅಲ್ಪಕಾಲ ಸ್ವತಂತ್ರವಾಗಿ ರಾಜ್ಯಭಾರ ನಡೆಸಿದರು. 
* ಹೆಸರಾಂತ ಸಮಾಜ ಸುಧಾಕರ ಬಸವಣ್ಣನವರು ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು. 

೯) ದ್ವಾರಸಮುದ್ರದ ಹೊಯ್ಸಳರು  (ಕ್ರಿ.ಶ 985 - 1346) : 

━━━━━━━━━━━━━━━━━━━━━━━━━━━━━━━━━━━━━━━━━
* ಈ ಸಂತತಿಯ ಮೂಲ ಪುರುಷ  : ಸಳ.
* ಇವರ ರಾಜಧಾನಿ : ಹಳೇಬೀಡು ಅಥವಾ ದ್ವಾರಸಮುದ್ರವಾಗಿತ್ತು.
* ಈ ಸಂತತಿಯ ಅತ್ಯಂತ ಪ್ರಮುಖ ದೊರೆ : ವಿಷ್ಣುವರ್ಧನ ಅಥವಾ ಬಿಟ್ಟಿದೇವ (1108-1152) 
* ಬೇಲೂರಿನ ಚೆನ್ನಕೇಶವ ಮತ್ತು ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯಗಳು ಹೊಯ್ಸಳರ ಕೊಡುಗೆಗಳಾಗಿವೆ.

*******************************************ಸಂಗ್ರಹ: ANAND SHIKKERI (Asst Master
*******************************************

ಶನಿವಾರ, ಮಾರ್ಚ್ 3, 2018

ವಿಶ್ವ ವನ್ಯಜೀವಿ ದಿನ

ವಿಶ್ವ ವನ್ಯಜೀವಿ ದಿನ.











    

 ಏಕೆ? ಈ ದಿನವನ್ನು ಆಚರಿಸಲಾಗುತ್ತದೆ:                        ಕಾಡುಪ್ರಾಣಿಗಳ ಬೇಟೆ ಜತೆಗೆ ಅವುಗಳ ಚರ್ಮ, ಉಗುರು, ಕೊಂಬು, ದಂತಗಳ ಮಾರಾಟ ಅಕ್ರಮವಾಗಿ ನಡೆಯುತ್ತಿದೆ. ಇದರಿಂದ ಹಲವು ವನ್ಯಜೀವಿಗಳ ಸಂತತಿ ಅಳಿವಿನಂಚಿನಲ್ಲಿವೆ. ಅರಣ್ಯ ಪ್ರದೇಶದ ಒತ್ತುವರಿ, ಮರಗಳ ಮಾರಣಹೋಮದಿಂದ ಕಾಡುಪ್ರಾಣಿಗಳು ಜನವಸತಿ ಪ್ರದೇಶಗಳತ್ತ ಬರುತ್ತಿವೆ. ಇದರಿಂದ ಭವಿಷ್ಯದಲ್ಲಿ ಪ್ರಕೃತಿಯಲ್ಲಿ ಅಸಮತೋಲನ ಕಂಡುಬರಲಿದೆ. ಈ ಹಿನ್ನೆಲೆಯಲ್ಲಿ ವನ್ಯಜೀವಿಗಳು ಮತ್ತು ಅರಣ್ಯ ಸಂಪತ್ತಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವದಾದ್ಯಂತ ವಿಶ್ವ ವನ್ಯಜೀವಿ ದಿನವನ್ನು ಪ್ರತಿವರ್ಷ ಮಾರ್ಚ್‌ 3ರಂದು ಆಚರಿಸಲಾಗುತ್ತದೆ.


2013ರ ವಿಶ್ವಸಂಸ್ಥೆ ಸಮಾವೇಶದಲ್ಲಿ ಮಾರ್ಚ್‌ 3 ದಿನವನ್ನು ವಿಶ್ವ ವನ್ಯಜೀವಿಗಳ ದಿನವೆಂದು ಘೋಷಿಸಲಾಯಿತು. ಜಗತ್ತಿನ ಸಸ್ಯ ಹಾಗೂ ಪ್ರಾಣಿ ಪ್ರಭೇದಗಳ ಬಗ್ಗೆ ಜಾಗೃತಿ ಮೂಡಿಸುವುದು ವಿಶ್ವ ವನ್ಯಜೀವಿ ದಿನಾಚರಣೆಯ ಧ್ಯೇಯವಾಗಿದೆ ಸಿಐಟಿಇಎಸ್‌ ಒಪ್ಪಂದಕ್ಕೆ 1973 ಮಾರ್ಚ್‌ 3ರಂದು ಸಹಿ ಹಾಕಲಾಯಿತು. ಇದರ ನೆನಪಿಗಾಗಿ ಮಾರ್ಚ್‌ ರಂದು ವನ್ಯಜೀವಿ ದಿನವನ್ನು ಆಚರಿಸಲಾಗುತ್ತದೆ. ಸಿಐಟಿಇಎಸ್‌ ಅಂತಾರಾಷ್ಟ್ರೀಯ ಒಪ್ಪಂದವಾಗಿದ್ದು, ವಿಶ್ವದಾದ್ಯಂತ ಸಸ್ಯ ಹಾಗೂ ವನ್ಯ ಜೀವಿ ಸಂಕುಲಗಳ ಮೇಲೆ ಹಾನಿ ಆಗದಂತೆ ನಿಗಾವಹಿಸುತ್ತದೆ.

ಪ್ರತಿವರ್ಷ ಒಂದು ಧ್ಯೇಯದೊಂದಿಗೆ ಈ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷದ ಧ್ಯೇಯ 'ಬಿಗ್‌ ಕ್ಯಾಟ್ಸ್‌' . ಸಿಂಹ, ಹುಲಿ, ಲೆಪಾರ್ಡ್‌, ಜಾಗ್ವರ್‌, ಚಿರತೆ, ಸ್ನೋ ಲೆಪಾರ್ಡ್‌, ಪೂಮಾ, ಕ್ಲೌಡೆಡ್‌ ಲೆಪಾರ್ಡ್‌ ಹಾಗೂ ಇಂಥ   Ü ಜಾತಿಗೆ ಸೇರಿದ ಕಾಡು ಪ್ರಾಣಿಗಳ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಎಲ್ಲ ದೇಶಗಳು ಭಾಗಿಯಾಗಿದ್ದು ಅದರಲ್ಲೂ ಭಾರತ ವಿಶಿಷ್ಟವಾದ ದೇಶ. ವಿವಿಧ ಸಂಸ್ಕೃತಿ ಹಾಗೂ ಪರಂಪರೆಯನ್ನು ಇಲ್ಲಿ ಕಾಣಬಹುದು. ಈ ನೆಲದಲ್ಲಿ ಭಾಷೆ, ಉಡುಗೆ, ಆಹಾರ, ಆಚರಣೆಗಳು ಒಂದಕ್ಕಿಂತ ಒಂದು ಜಾಗಕ್ಕೆ ಎಷ್ಟೊಂದು ವ್ಯತ್ಯಾಸ! ಇದಕ್ಕೆ ಕಾರಣವೆಂದರೆ ನಮ್ಮ ದೇಶದಲ್ಲಿರುವ ವಿವಿಧ ಭೂಗೋಳಿಕ ಪ್ರದೇಶಗಳು.
ಆ ಪ್ರದೇಶಕ್ಕೆ ಅನುಗುಣವಾಗುವಂತೆ ಅವರ ಉಡುಗೆ, ಆಹಾರ ಮತ್ತು ಜೀವನ ಶೈಲಿ ಇರುತ್ತದೆ. ಇದೇ ರೀತಿ ಆಯಾ ಭೌಗೋಳಿಕ ಪ್ರದೇಶಗಳಿಗೆ ಹೊಂದುವಂತೆ ಪ್ರಾಣಿಗಳು ಕೂಡ ವಿಕಾಸಗೊಳಿಸಿಕೊಂಡಿರುತ್ತವೆ. ಇದು ಸಾವಿರಾರು ವರ್ಷಗಳ ಕ್ರಿಯೆ. ಎಷ್ಟೋ ಬಾರಿ ನಮಗೆ ಇಂತಹ ಪ್ರಾಣಿಗಳು ನಮ್ಮ ದೇಶದಲ್ಲಿವೆ ಎನ್ನುವುದೇ ಗೊತ್ತಿರುವುದಿಲ್ಲ.ಉದಾರಣೆಗೆ ಕಂದು ಬಣ್ಣದ ಕರಡಿಗಳು, ಹಿಮ ತೋಳಗಳು, ಕಾಡು ಕುದುರೆ, ಕೆಂಪು ಪಾಂಡ, ಸ್ನೋ ಲೆಪರ್ಡ್ಸ್.. ಅಮೆರಿಕ ಹಾಗೂ ಕೆನಡಾದಲ್ಲಿ ದೇಶಗಳು ಕಂದು ಬಣ್ಣದ ಕರಡಿಗಳಿಗೆ ಹೆಸರುವಾಸಿ. ಇದನ್ನು ಅವರು ಗ್ರಿಸ್ಲ್ಯ ಬೇಯರ್ಸ್ ಎಂದು ಕರೆಯುತ್ತಾರೆ. ಇಂತಹ ಕರಡಿಗಳು ನಮ್ಮ ದೇಶದಲ್ಲೂ ಇವೆ! ಪೋರ್ಚುಗಲ್, ಜರ್ಮನಿ ಹಾಗೂ ಸ್ಕಾಟ್ಲೆಂಡ್ ಕಾಡುಕುದುರೆಗಳಿಗೆ ಹೆಸರುವಾಸಿ. ಇಂತಹ ಕಾಡುಕುದುರೆಗಳನ್ನು ಅಸ್ಸಾಂ ರಾಜ್ಯದ ಸೈಕೋವಾ ನ್ಯಾಷನಲ್ ಪಾರ್ಕ್ ನಲ್ಲಿ ನಾವು ಕಾಣಬಹುದು. ಇಂತಹ ಹಲವಾರು ವಿಶೇಷ ಪ್ರಾಣಿಗಳು ನಮ್ಮ ದೇಶದಲ್ಲಿದ್ದು, ಅಳಿವಿನ ಅಂಚಿನಲ್ಲಿವೆ. ಅವುಗಳ ಸಂತತಿ ತೀವ್ರವಾಗಿ ಕಡಿಮೆ ಆಗಿವೆ.
           ಐಯುಸಿಎನ್ ಎಂಬ ವಿಶ್ವ ಸಂಸ್ಥೆಯು ಭಾಗವಾಗಿರುವ ಇಲಾಖೆಯಿಂದ ಮಾಹಿತಿ ಪಡೆದು, ವನ್ಯ ಜೀವಿಗಳ ಸಂತತಿ ಯಾವ ಪ್ರಮಾಣದಲ್ಲಿದೆ ಎಂಬುದನ್ನು ರೆಡ್ ಡೇಟಾ ಬುಕ್ ಎಂಬ ಪುಸ್ತಕದಲ್ಲಿ ಕೊಡುತ್ತಾರೆ. ರೆಡ್ ಅಂದರೆ ಕೆಂಪು. ಕೆಂಪು ಅಪಾಯದ ಸೂಚನೆ. ಯಾವ ಜೀವಿಗಳು ಅಪಾಯದಲ್ಲಿವೆ ಎಂದು ಈ ಪುಸ್ತಕ ತಿಳಿಸುತ್ತದೆ. ಅವುಗಳ ಮುಖ್ಯ ವಿಂಗಡಣೆಗಳು ಹೀಗಿವೆ.
ಪೂರ್ತಿ ಗತಿಸಿಹೋದ ಪ್ರಾಣಿಗಳು.
                                ಯಾವ ಪ್ರಾಣಿಯ ಸಂತತಿ ಪೂರ್ತಿಯಾಗಿ ಗತಿಸಿಹೋಗಿದೆಯೋ ಅದನ್ನು "ಎಸ್ಟ್ರಿನ್ಕ್ಟ್" ಎಂದು ಕರೆಯುತ್ತಾರೆ. ನಮ್ಮ ದೇಶದಲ್ಲಿ ಇಂಡಿಯನ್ ಚೀತಾ ಪೂರ್ತಿಯಾಗಿ ಗತಿಸಿಹೋಗಿದೆ. ಬ್ರಿಟಿಷರ ಕಾಲದಲ್ಲಿ ಇವುಗಳನ್ನು ಬೇಟೆಯಾಡಲಾಗಿತ್ತು. ರಾಜಸ್ತಾನದ ಭಾಗಗಳಲ್ಲಿ ಇವುಗಳು ಹಿಂದೆ ಇದ್ದವು. ನೋಡಲು ಚಿರತೆ ರೀತಿ ಇರುತ್ತವೆ. ಆದರೆ ಗಾತ್ರ ಚಿಕ್ಕದು. ಇವುಗಳು ಅತಿ ವೇಗದ ಪ್ರಾಣಿಗಳು. ಆಫ್ರಿಕಾದಲ್ಲಿ ಮಾತ್ರ ಈಗ ನಾವು ಇವುಗಗಳನ್ನು ನೋಡಬಹುದು.  

0 ವರ್ಷದಲ್ಲಿ ಗತಿಸಿ ಹೋಗುವ ಸಂತತಿ

ಯಾವುದೇ ಪ್ರಾಣಿಗಳ ಸಂತತಿ ಪ್ರಪಂಚದಲ್ಲಿ 50ಕ್ಕೂ ಕಡಿಮೆ ಅಥವಾ 10 ವರ್ಷದಲ್ಲಿ ಶೇ 90ರಷ್ಟು ಇಳಿಕೆ ಆಗಿದ್ದಲ್ಲಿ ಅವುಗಳನ್ನು ಕ್ರಿಟಿಕಲಿ ಎಂಡೇಂಜರ್ಡ್ ಎಂದು ಕರೆಯಲಾಗುತ್ತದೆ. ಅವುಗಳು ಗತಿಸಿ ಹೋಗುವ ಸಾಧ್ಯತೆ ತುಂಬ ಹೆಚ್ಚಿರುತ್ತದೆ. ಅವುಗಳ ಸಂರಕ್ಷಣೆಗೆ ಮುಂದಾಗದಿದ್ದಲ್ಲಿ ಮುಂದಿನ 10 ವರ್ಷದಲ್ಲಿ ಗತಿಸಿ ಹೋಗುವ ಸಾಧ್ಯತೆ ಇರುತ್ತದೆ. ಅರುಣಾಚಲ ಪ್ರದೇಶದಲ್ಲಿನ ನಂದಪ ಹಾರುವ ಅಳಿಲುಗಳು ಈ ವಿಂಗಡಣೆಗೆ ಬರುತ್ತದೆ. ಇದನ್ನು ಆಹಾರಕ್ಕಾಗಿ ಕೊಲ್ಲಲಾಗುತ್ತಿತ್ತು. ಪ್ರಪಂಚದ ಅತಿ ಚಿಕ್ಕ ಘೇಂಡಾಮೃಗಗಳಾದ ಸುಮಾತ್ರಾನ್ ಘೇಂಡಾಮೃಗಗಳು ಬೆರಳೆಣಿಕೆ ಪ್ರಮಾಣಕ್ಕೆ ಬಂದುಬಿಟ್ಟಿವೆ. ಹಿಮಾಲಯದ ಭಾಗಗಳಲ್ಲಿ ಇವುಗಳು ಕಂಡುಬರುತ್ತವೆ. ಅಂದಹಾಗೆ ರಣಹದ್ದುಗಳು ಕೂಡ ಈಗ ಕ್ರಿಟಿಕಲಿ ಎಂಡೇಜರ್ಡ್.

ಕಾಡು ನಾಯಿಗಳು, ಹುಲಿ ಹಾಗೂ ಆನೆಗಳು ಅಳಿವಿನಂಚಿನಲ್ಲಿವೆ.

ಯಾವ ಪ್ರಾಣಿಯ ಸಂತತಿ ಪ್ರಪಂಚದಲ್ಲಿ 250ಕ್ಕೂ ಕಡಿಮೆ ಅಥವಾ 10 ವರ್ಷದಲ್ಲಿ ಶೇ 70ರಷ್ಟು ಇಳಿಕೆ ಆಗಿದ್ದಲ್ಲಿ ಅವುಗಳನ್ನು "ಎಂಡೇಂಜರ್ಡ್" ಎಂದು ಕರೆಯಲಾಗುತ್ತದೆ. ಅವುಗಳು ಗತಿಸಿ ಹೋಗುವ ಸಾಧ್ಯತೆ ಹೆಚ್ಚಿದ್ದು, ಅವುಗಳ ಬಗ್ಗೆ ಗಮನ ಕೊಡಬೇಕಾಗುತ್ತದೆ. ಕಾಡು ಕಟ್ಟೆಗಳು ಈ ಸಂತತಿಯಲ್ಲಿದ್ದು ಗುಜರಾತಿನ ರಣ್ ಆಫ್ ಕಚ್ ನ್ಯಾಷನಲ್ ಪಾರ್ಕ್ ನಲ್ಲಿ ಇವುಗಳನ್ನು ಸಂರಕ್ಷಿಸಲಾಗುತ್ತಿದೆ. ಹಿಮಾಲಯನ್ ಕಂದು ಬಣ್ಣದ ಕರಡಿಗಳು ಹಾಗೂ ಹಿಮ ತೋಳಗಳು ಕೂಡ ಅಳಿವಿನಂಚಿನ ಪ್ರಾಣಿಗಳು. ಕಾಡು ನಾಯಿಗಳು, ಹುಲಿ ಹಾಗೂ ಆನೆಗಳು ಕೂಡ ಈ ಪರಿಸ್ಥಿತಿಯಲ್ಲಿವೆ. ಘೇಂಡಾಮೃಗಗಳು ಎಂಡೇಂಜರ್ಡ್ ಆಗಿದ್ದು, ಅಸ್ಸಾಮಿನ ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ಸಂರಕ್ಷಿಸಲಾಗುತ್ತಿದೆ.

ದಕ್ಷಿಣ ಭಾರತದಲ್ಲಿ ಕಂಡುಬರುವ ಕಾಡೆಮ್ಮೆಗಳು


ಯಾವ ಪ್ರಾಣಿಯ ಸಂತತಿ ಪ್ರಪಂಚದಲ್ಲಿ 10 ಸಾವಿರಕ್ಕೂ ಕಡಿಮೆ ಅಥವಾ 10 ವರ್ಷದಲ್ಲಿ ಶೇ 50ರಷ್ಟು ಇಳಿಕೆ ಆಗಿದ್ದಲ್ಲಿ ಅವುಗಳನ್ನು ವಲ್ನರಬಲ್ ಎಂದು ಕರೆಯಲಾಗುತ್ತದೆ. ಹುಲ್ಲೇಕರ, ದಕ್ಷಿಣ ಭಾರತದಲ್ಲಿ ಕಂಡು ಬರುವ ಕಾಡೆಮ್ಮೆಗಳು, ನಾಲ್ಕು ಕೊಂಬಿನ ಜಿಂಕೆ, ಕಪ್ಪು ಕರಡಿ, ಕೆಂಪು ಪಾಂಡ ಇವೆಲ್ಲವೂ ಈ ವಿಂಗಡಣೆ ಅಡಿಯಲ್ಲಿ ಬರುತ್ತವೆ. ಕೆಂಪು ಪಾಂಡಗಳನ್ನು ಸಿಕ್ಕಿಂ, ಅಸ್ಸಾಂ, ಅರುಣಾಚಲ ಪ್ರದೇಶಗಳಲ್ಲಿ ಕಾಣಬಹುದು. ಇವುಗಳ ಚರ್ಮಕ್ಕಾಗಿ ಕೊಲ್ಲಲಾಗುತ್ತಿದೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆ

ವನ್ಯಜೀವಿಗಳ ಸಂರಕ್ಷಣೆಗೆಂದು ಕೇಂದ್ರ ಸರಕಾರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅನ್ನು 1972ರಲ್ಲಿ ಜಾರಿ ಮಾಡಿತು. ಅದರಲ್ಲಿ 6 ಶೆಡ್ಯೂಲ್ ಗಳಿವೆ. ಯಾವ ಪ್ರಾಣಿಗಳು ಅಳಿವಿನ ಅಂಚಿನಲ್ಲಿವೆಯೋ ಅವೆಲ್ಲವನ್ನು ಶೆಡ್ಯೂಲ್ 1ರಲ್ಲಿ ತರಲಾಯಿತು. ಹುಲಿ, ಸಿಂಹ, ಘೇಂಡಾಮೃಗ, ಹುಲ್ಲೇಕರ ಇವೆಲ್ಲ ಶೆಡ್ಯೂಲ್ 1ರ ಅಡಿ ಬರುತ್ತದೆ. ಇವುಗಳನ್ನು ಕೊಂದಲ್ಲಿ ಶಿಕ್ಷೆಯ ಪ್ರಮಾಣ ಹೆಚ್ಚಿರುತ್ತದೆ. ಅಂದಹಾಗೆ ಹುಲ್ಲೇಕರವನ್ನು ಕೊಂದರೆ ಹುಲಿ ಕೊಂದಷ್ಟೇ ಗಂಭೀರವಾದ ಅಪರಾಧ.

ಅಭಯಾರಣ್ಯ, ರಾಷ್ಟ್ರೀಯ ಉದ್ಯಾನ
ಸರ್ಕಾರವು ವನ್ಯಜೀವಿಗಳ ಸಂರಕ್ಷಣೆಗೆಂದು ಅಭಯಾರಣ್ಯ, ರಾಷ್ಟ್ರೀಯ ಉದ್ಯಾನಗಳನ್ನು ಮಾಡಿದೆ. ಅಭಯಾರಣ್ಯ, ರಾಷ್ಟ್ರೀಯ ಉದ್ಯಾನಗಳಿಗೆ ಇರುವ ವತ್ಯಾಸ ಏನೆಂದರೆ, ಅಭಯಾರಣ್ಯದಲ್ಲಿ ಮನುಷ್ಯರ ಯಾವುದೇ ಚಟುವಟಿಕೆಗೆ ಅನುಮತಿ ಇಲ್ಲ. ಸ್ಥಳೀಯರಿಗೂ ಕೂಡ ಇಲ್ಲಿ ನಿರ್ಬಂಧವಿರುತ್ತದೆ. ರಾಷ್ಟ್ರೀಯ ಉದ್ಯಾನಗಳಲ್ಲಿ ಸ್ಥಳೀಯರು 
ತಮ್ಮ ಚಟುವಟಿಕೆ ನಡೆಸಲು ಅನುಮತಿ ಇರುತ್ತದೆ. ಅಂದಹಾಗೆ ಸರಕಾರ ಪ್ರಾಜೆಕ್ಟ್ ಟೈಗರ್, ಪ್ರಾಜೆಕ್ಟ್ ಎಲಿಫೆಂಟ್ ಹೀಗೆ ಅನೇಕ ಯೋಜನೆಗಳನ್ನು ತಂದಿದೆ. ಹಲವಾರು ಸ್ವಯಂ ಸೇವಾ ಸಂಸ್ಥೆಗಳು ಕೂಡ ವನ್ಯಜೀವಿಗಳ ಸಂರಕ್ಷಣೆಯಲ್ಲಿ ತೊಡಗಿಕೊಂಡಿವೆ.

ವಿದ್ಯಾರ್ಥಿ ವೇತನ ಲಿಂಕಗಳು.









ವಿದ್ಯಾರ್ಥಿ ವೇತನ ಪಡೆಯಲು ಇಚ್ಛಿಸುವ ಬಡ ವಿದ್ಯಾರ್ಥಿಗಳಿಗೆ ಇಲ್ಲಿದೆ ವಿದ್ಯಾರ್ಥಿ ವೇತನದ ಎಲ್ಲ ಲಿಂಕಗಳು:


                           ನಿಮಗೆ ಪರಿಚಯವಿರುವ ಬಡ ವಿದ್ಯಾರ್ಥಿಗಳಿಗೆ ಈ  ಕೆಳಗಿನ ವಿದ್ಯಾರ್ಥಿ ವೇತನಗಳ ಬಗ್ಗೆ ದಯವಿಟ್ಟು ಮಾಹಿತಿ ನೀಡಿ.. ಯಾಕೆಂದರೆ  ಮುಂದಿನ ತಿಂಗಳಲ್ಲಿ ಎಲ್ಲಾ ವಿದ್ಯಾರ್ಥಿ ವೇತನಗಳ ಅರ್ಜಿಗಳನ್ನು ಕರೆಯಲಾಗುತ್ತದೆ.*

1) ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ -

www.karepass.cgg.gov.in

೨) ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ   ವಿದ್ಯಾರ್ಥಿಗಳಿಗೆ 

www.sw.kar.nic.in

೩) ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ -www.gokdom.kar.nic.in


೪) ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯದ ವಿದ್ಯಾರ್ಥಿ ವೇತನ (Ministry of Human Resource Development)  ಪ್ರತಿ ವರ್ಷವು ಡಿಗ್ರಿ ಪ್ರವೇಶ ಪಡೆಯುವ  ಎಲ್ಲಾ ಜಾತಿಯಾ ಬಡ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ - 

www.kar.nic.in/pue

೫) ನಮ್ಮ ರಾಜ್ಯದ ಹೆಮ್ಮೆಯ ಐ.ಟಿ ಕಂಪನಿ ಇನಪೋಸ್ಸಿಸ್ ನೀಡುವ ವಿದ್ಯಾರ್ಥಿ ವೇತನ - www.vidyaposhak.org


೬)ಕಿತ್ತೂರು ರಾಣಿ ಚೆನ್ನಮ್ಮ ವಿದ್ಯಾರ್ಥಿ ವೇತನ - 

www.kar.nic.in/pue/

೭) ದೀರುಬಾಯಿ ಅಂಬಾನಿ ವಿದ್ಯಾರ್ಥಿ ವೇತನ ಅಂಗವಿಕಲ ವಿದ್ಯಾರ್ಥಿಗಳಿಗೆ - 

www.kar.nic.in/pue

೮) ಅಂಬೇಡ್ಕರ್ ನ್ಯಾಶನಲ್ ಮೆರಿಟ್ ಅರ್ವಾಡ್ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ - 

www.kar.nic.in/pue

೯) ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ಮೂಲ ವಿಜ್ಞಾನ ವಿಷಯದಲ್ಲಿ ಉನ್ನತ ಶಿಕ್ಷಣ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ (Inspire Scholarship) - 

www. kar.nic.in/pue

೧೦) ಮೆರಿಟ್ ಸ್ಕಾಲರಶಿಪ್ - ದ್ವಿತೀಯ ಪದವಿ ಪೂರ್ವ ಪರೀಕ್ಷೆಯಲ್ಲಿ ಶೇ.೮೦ ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ಬಡ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ(ಇಂಜಿನಿಯರಿಂಗ್, ವೈದ್ಯಕೀಯ, ಕೃಷಿ) ಶುಲ್ಕವನ್ನು ಸರ್ಕಾರ ನೀಡುತ್ತದೆ – 

www. kar.nic.in/pue

೧೧) ನಮ್ಮ ರಾಜ್ಯದ ಹೆಮ್ಮೆಯ ಇನ್ನೊಂದು ಐ.ಟಿ ಕಂಪನಿ  ವೀಪ್ರೊ ಅವರ  ಅಜೀಮ್ ಪ್ರೇಮಜೀ ಫೌಂಡೇಷನ್ -www.azimpremjifoundation.org


12. *ವಿದ್ಯಸಿರಿ* *ಮತ್ತು ಶುಲ್ಕ* *ವಿನಾಯಿತಿ*

http://backwardclasses.kar.nic.in/BCWD/Website/backwardclassesMain.html 

    http://backwardclasses.kar.nic.in/BCWD/Website/Educational_Scholarships.html

    Information ::

   http://www.scholarshipx.in/2015/10/karnataka-scholarship-onlline-last-date.html

13. *ಸರ್ಕಾರದ* *ಧನಸಹಾಯಗಳ* *ವೆಬ್ ವಿಳಾಸ*


http://karepass.cgg.gov.in/ 

14. *ಜಿಂದಾಲ್ scholarship*


 http://www.sitaramjindalfoundation.org/scholarships.php 

15. *B.L ಹೇಮವತಿ ಧನಸಹಾಯ*


 http://www.blhtrust.org/schpro.html 

16. *ಕೇಂದ್ರ ಸರ್ಕಾರದ ಧನಸಹಾಯಗಳು*


Central Govt Scholarship

     http://mhrd.gov.in/ 

17.  *Indian Oil Scholarship*

     https://www.iocl.com/AboutUs/AcademicScholarships.   


*ದಯವಿಟ್ಟು Share ಮಾಡುವುದರ ಮೂಲಕ ವಿದ್ಯಾರ್ಥಿಗಳಿಗೆ ಸಹಾಯ ಮಾಡಿ.*

ಸರಸ್ವತಿ ಸಮ್ಮಾನ್ ಪುರಸ್ಕಾರ


ಸರಸ್ವತಿ ಸಮ್ಮಾನ್ ಪುರಸ್ಕಾರ 


ಸರಸ್ವತಿ ಸಮ್ಮಾನ್ ಇದು ಭಾರತೀಯ ಭಾಷೆಗಳಲ್ಲಿ ಬರೆಯುವ ಶ್ರೇಷ್ಠ ಗದ್ಯ ಮತ್ತು ಪದ್ಯ ಪ್ರಕಾರಕ್ಕೆ ಕೊಡಮಾಡುವ ವಾರ್ಷಿಕ ಪ್ರಶಸ್ತಿ. ಇದನ್ನು ವಿದ್ಯೆಯ ದೇವಿಯಾಗಿರುವ ಸರಸ್ವತಿಯ ಹೆಸರಿನಲ್ಲಿ ಸ್ಥಾಪಿತವಾಗಿರುತ್ತದೆ. ಇದು ಸಾಹಿತ್ಯದ ಒಂದು ಉನ್ನತ ಪ್ರಶಸ್ತಿಯಾಗಿದೆ. ಈ ಪ್ರಶಸ್ತಿಯು ೫ಲಕ್ಷ ರೂಪಾಯಿ ನಗದನ್ನು ಹೊಂದಿದೆ. ಕೆ. ಕೆ. ಬಿರ್ಲಾ ಪ್ರತಿಷ್ಥಾನವು ಈ ಪ್ರಶಸ್ತಿಯನ್ನು ೧೯೯೧ರಲ್ಲಿ ಸ್ಥಾಪಿಸಿತು.


1991ರಿಂದ 2017 ರವರೆಗೆ ಗೌರವ ಪುರಸ್ಕೃತರು:

* *2016: ಮಹಾಬಲೇಶ್ವರ ಸೇಯ್ಲ್ - "ಹಾಥನ್" (ಕಾದಂಬರಿ) - ಕೊಂಕಣಿ*

*  *ಪದ್ಮ ಸಚ್ದೇವ್ - "ಚಿಟ್-ಚೆಟೆ" (ಆಟೋಬಯಾಗ್ರಫಿ) - ಡೋಗ್ರಿ*

* *2014: ವೀರಪ್ಪ ಮೊಯ್ಲಿ - "ರಾಮಾಯಣ ಮಹನ್ವೇಷನ್" (ಕವಿತೆ) - ಕನ್ನಡ*

* *2013: ಗೋವಿಂದ ಮಿಶ್ರಾ - "ಧುಲ್ ಪೌಡೋ ಪರ್" (ಕಾದಂಬರಿ) - ಹಿಂದಿ*

* *2012: ಸುಗತ ಕುಮಾರಿ - "ಮನಲೆಝುತು" (ಕವನ ಸಂಗ್ರಹ) - ಮಲೆಯಾಳಂ*

* *2011: ಎ. ಎ. ಮನವಲನ್ - "ಇರಾಮಾ ಕಥೈಮ್ ಇರಮಯಕಲ್ಲುಂ" - ತಮಿಳು*

* *2010: ಎಸ್. ಎಲ್. ಭೈರಪ್ಪ - "ಮಂದ್ರ" - ಕನ್ನಡ*

* *2009: ಸುರ್ಜಿತ್ ಪಾತಾರ್ - "ಲಫ್ಜನ್ ಡಿ ದರ್ಗಾ" - ಪಂಜಾಬಿ*

* *2008: ಲಕ್ಷ್ಮಿ ನಂದನ್ ಬೋರಾ - "ಕಯಕಲ್ಪ" (ಕಾದಂಬರಿ) - ಅಸ್ಸಾಮಿ*

* *2007: ನಯೆರ್ ಮಸೂದ್ - "ಟಾವೋಸ್ ಚಾಮನ್ ಕಿ ಮೈನಾ" (ಸಣ್ಣ ಕಥೆಗಳ ಸಂಗ್ರಹ) - ಉರ್ದು*

* *2006: ಜಗನ್ನಾಥ್ ಪ್ರಸಾದ್ ದಾಸ್ - "ಪರಿಕಾರಿಮಾ" (ಕವನ ಸಂಗ್ರಹ) - ಒರಿಯಾ*

* *2005: ಕೆ. ಅಯ್ಯಪ್ಪ ಪಾಣಿಕರ್ - "ಅಯ್ಯಪ್ಪ ಪಣಿಕಾರ್ಡು ಕೃತಿಕಳ್" (ಕವನ ಸಂಗ್ರಹ) - ಮಲಯಾಳಂ*

* *2004: ಸುನೀಲ್ ಗಂಗೋಪಾಧ್ಯಾಯ್ - "ಪ್ರತಮ್ ಅಲೋ" (ಕಾದಂಬರಿ) - ಬೆಂಗಾಲಿ*

* *2003: ಗೋವಿಂದ ಚಂದ್ರ ಪಾಂಡೆ - "ಭಾಗಿರಥಿ" (ಕವನ ಸಂಗ್ರಹ) - ಸಂಸ್ಕೃತ*

* *2002: ಮಹೇಶ್ ಎಲ್ಕುಂಚ್ವರ್ - "ಯುಗಾಂಟ್" (ಪ್ಲೇ) - ಮರಾಠಿ*

* *2001: ದಲಿಪ್ ಕೌರ್ ತಿವಾನಾ - "ಕಥಾ ಕಹೋ ಉರ್ವಾಶಿ" (ಕಾದಂಬರಿ) - ಪಂಜಾಬಿ*

* *2000: ಮನೋಜ್ ದಾಸ್ - "ಅಮೃತ ಫಾಲಾ" (ಕಾದಂಬರಿ) - ಒರಿಯಾ*

* *1999: ಇಂದಿರಾ ಪಾರ್ಥಸಾರಥಿ - "ರಾಮನುಜರ್" (ಪ್ಲೇ) - ತಮಿಳು*

* *1998: ಶಂಖ ಘೋಷ್ - "ಗಂಧರ್ಬಾ ಕಬಿತಾ ಗುಚ" (ಕವನ ಸಂಗ್ರಹ) - ಬಂಗಾಳಿ*

* *1997: ಮನುಭಾಯ್ ಪಾಂಚಲಿ - "ಕುರುಕ್ಷೇತ್ರ" - ಗುಜರಾತಿ*

* *1996: ಶಾಮ್ಸುರ್ ರಹಮಾನ್ ಫರುಖಿ - "ಷೆರ್-ಇ-ಶೋರ್-ಆಂಗೆಜ್" - ಉರ್ದು*

* *1995: ಬಾಲಮಣಿ ಅಮ್ಮ - "ನಿವೇದ್ಯಾಮ್" (ಕವನ ಸಂಗ್ರಹ) - ಮಲೆಯಾಳಂ*

* *1994: ಹರಭಜನ್ ಸಿಂಗ್ - "ರುಕ್ ತೆ ರಿಷಿ" (ಕವನ ಸಂಗ್ರಹ) - ಪಂಜಾಬಿ*

* *1993: ವಿಜಯ್ ತೆಂಡೂಲ್ಕರ್ - "ಕನ್ಯಾಡಾನ್" (ಪ್ಲೇ) - ಮರಾಠಿ*

* *1992: ರಾಮಕಾಂತ್ ರಾಥ್ - "ಶ್ರೀ ರಾಧಾ" (ಕವನ) - ಒರಿಯಾ*

* *1991: ಹರಿವಂಶ್ ರಾಯ್ ಬಚ್ಚನ್ - ನಾಲ್ಕು ಸಂಪುಟಗಳಲ್ಲಿ ಆತ್ಮಚರಿತ್ರೆ (ಆಟೋಬಯಾಗ್ರಫಿ) - ಹಿಂದಿ*
       
ಸಂಗ್ರಹ: ಆರುಶಿ (ಸಹ ಶಿಕ್ಷಕರು)
ಎಮ್.ಪಿ.ಕೆ.ಬಿ.ಎಸ್.ದೇ.ಹಿ
 ‌‌

ಶುಕ್ರವಾರ, ಮಾರ್ಚ್ 2, 2018

ಜಗತ್ತಿನ ಕ್ರೀಡಾಂಗಣಗಳು


*ಜಗತ್ತಿನ ಕ್ರೀಡಾಂಗಣಗಳು*

  ===========
*ಭಾರತದಲ್ಲಿ ಕ್ರೀಡಾಂಗಣಗಳು*
     *************
* *ಬರಾಬಾಟಿ ಕ್ರೀಡಾಂಗಣ: ಕಟಕ್*
* *ಬರ್ಕತುಲ್ಲಾ ಖಾನ್ ಕ್ರೀಡಾಂಗಣ: ಜೋಧ್ಪುರ್*
* *ಬ್ರಬೌರ್ನೆ ಕ್ರೀಡಾಂಗಣ: ಮುಂಬೈ*
* *ಈಡನ್ ಗಾರ್ಡನ್ಸ್: ಕೊಲ್ಕತ್ತಾ*
* *ಫಿರೋಜ್ ಶಾ ಕೋಟ್ಲಾ: ದೆಹಲಿ*
* *ಗಾಂಧಿ ಕ್ರೀಡಾಂಗಣ: ಜಲಂಧರ್*
* *ಗ್ರೀನ್ ಪಾರ್ಕ್: ಕಾನ್ಪುರ್*
* *ಇಂದಿರಾ ಗಾಂಧಿ ಕ್ರೀಡಾಂಗಣ: ವಿಜಯವಾಡಾ*
* *ರಾಜೀವ್ ಗಾಂಧಿ ಪೋರ್ಟ್ ಸಿಲ್ವರ್ ಜುಬಿಲೀ*
 * *ಕ್ರೀಡಾಂಗಣ: ವಿಶಾಖಪಟ್ಟಣಂ*
* *ಜವಾಹರಲಾಲ್ ನೆಹರು ಕ್ರೀಡಾಂಗಣ: ನವ ದೆಹಲಿ*
* *ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣ: ಹೈದರಾಬಾದ್*
* *ಎಂ. ಚಿನ್ನಸ್ವಾಮಿ ಕ್ರೀಡಾಂಗಣ: ಬೆಂಗಳೂರು*
* *ಎಂ.ಎ ಚಿದಂಬರಂ ಕ್ರೀಡಾಂಗಣ: ಚೆನ್ನೈ*
* *ಮಾಧವರಾವ್ ಸಿಂಧಿಯಾ ಕ್ರಿಕೆಟ್ ಮೈದಾನ: ರಾಜ್ಕೋಟ್*
* *ಮೊಯಿನ್-ಉಲ್-ಹಕ್ ಕ್ರೀಡಾಂಗಣ: ಪಾಟ್ನಾ*
* *ಸರ್ದಾರ್ ವಲ್ಲಭಾಯಿ ಪಟೇಲ್ ಮೋತೆರಾ*
* *ಕ್ರೀಡಾಂಗಣ: ಅಹಮದಾಬಾದ್*
* *ಸವಾಯಿ ಮಾನ್ಸಿಂಗ್ ಕ್ರೀಡಾಂಗಣ: ಜೈಪುರ*
* *ವಿದರ್ಭ ಸಿಎ ಮೈದಾನ: ನಾಗಪುರ*
* *ವಾಂಖೇಡೆ ಕ್ರೀಡಾಂಗಣ: ಮುಂಬೈ*
=============

*ಆಸ್ಟ್ರೇಲಿಯಾದಲ್ಲಿನ ಕ್ರೀಡಾಂಗಣಗಳು*

       ************
* *ಅಡಿಲೇಡ್ ಓವಲ್: ಅಡಿಲೇಡ್*
* *ಬುಂಡಬರ್ಗ್ ರಮ್ ಕ್ರೀಡಾಂಗಣ: ಕೈರ್ನ್ಸ್*
* *ಟೆಲ್ಸ್ಟ್ರಾ ಡೋಮ್: ಮೆಲ್ಬರ್ನ್*
* *ಮನುಕಾ ಓವಲ್: ಕ್ಯಾನ್ಬೆರಾ*
* *ಮಾರರಾ ಕ್ರಿಕೆಟ್ ಮೈದಾನ: ಡಾರ್ವಿನ್*
* *ಮೆಲ್ಬರ್ನ್ ಕ್ರಿಕೆಟ್ ಮೈದಾನ: ಮೆಲ್ಬರ್ನ್*
* *ಸಿಡ್ನಿ ಕ್ರಿಕೆಟ್ ಮೈದಾನ: ಸಿಡ್ನಿ*
* *ಡಬ್ಲು.ಎ.ಸಿ.ಎ. ಗ್ರೌಂಡ್: ಪರ್ತ್*
=============

*ಬಾಂಗ್ಲಾದೇಶದ ಕ್ರೀಡಾಂಗಣಗಳು*

************
* *ಬಂಗಾಬಂದ ರಾಷ್ಟ್ರೀಯ ಕ್ರೀಡಾಂಗಣ: ಢಾಕಾ*
* *ಚಿತ್ತಗಾಂಗ್ ಕ್ರೀಡಾಂಗಣ: ಚಿತ್ತಗಾಂಗ್*
=============

*ಇಂಗ್ಲೆಂಡ್ನಲ್ಲಿ ಕ್ರೀಡಾಂಗಣಗಳು*

       *********
* *ಎಡ್ಜ್ಬಾಸ್ಟನ್:*
*ಬರ್ಮಿಂಗ್ಹ್ಯಾಮ್*
* *ಹೆಡಿಂಗ್ಲೆ: ಲೀಡ್ಸ್*
* *ಲಾರ್ಡ್ಸ್: ಲಂಡನ್*
* *ಓಲ್ಡ್ ಟ್ರಾಫರ್ಡ್: ಮ್ಯಾಂಚೆಸ್ಟರ್*
* *ಸೋಫಿಯಾ ಗಾರ್ಡನ್ಸ್: ಕಾರ್ಡಿಫ್*
* *ಸೇಂಟ್ ಲಾರೆನ್ಸ್ ಗ್ರೌಂಡ್: ಕ್ಯಾಂಟರ್ಬರಿ*
* *ಬ್ರಿಟ್ ಓವಲ್: ಲಂಡನ್*
* *ಟ್ರೆಂಟ್ ಬ್ರಿಜ್:* *ನಾಟಿಂಗ್ಹ್ಯಾಮ್*
==============

*ನ್ಯೂಜಿಲೆಂಡ್ನಲ್ಲಿ ಕ್ರೀಡಾಂಗಣಗಳು*

**********
* *ಬೇಸಿನ್ ರಿಸರ್ವ್: ವೆಲ್ಲಿಂಗ್ಟನ್*
* *ಈಡನ್ ಪಾರ್ಕ್: ಆಕ್ಲೆಂಡ್*
* *ಜೇಡ್ ಕ್ರೀಡಾಂಗಣ: ಕ್ರೈಸ್ಟ್ಚರ್ಚ್*
* *ಜಾನ್ ಡೇವಿಸ್ ಓವಲ್: ಕ್ವೀನ್ಸ್ಟೌನ್*
* *ಮ್ಯಾಕ್ಲೀನ್ ಪಾರ್ಕ್: ನೇಪಿಯರ್*
=========

*ಪಾಕಿಸ್ತಾನದ ಕ್ರೀಡಾಂಗಣಗಳು* 

       ***********
* *ಅರ್ಬಬ್ ನಿಯಾಝ್ ಕ್ರೀಡಾಂಗಣ: ಪೆಶಾವರ್*
* *ಆಯುಬ್ ರಾಷ್ಟ್ರೀಯ ಕ್ರೀಡಾಂಗಣ: ಕ್ವೆಟ್ಟಾ*
* *ಗಡ್ಡಾಫಿ ಕ್ರೀಡಾಂಗಣ: ಲಾಹೋರ್*
==========

*ವೆಸ್ಟ್ ಇಂಡೀಸ್ನಲ್ಲಿ ಕ್ರೀಡಾಂಗಣಗಳು*

***********
* *ಸಬಿನ ಪಾರ್ಕ್ ಕಿಂಗ್ಸ್ಟನ್: ಜಮೈಕಾ*
* *ಆಂಟಿಗುವಾ ರಿಕ್ರಿಯೇಶನ್ ಗ್ರೌಂಡ್ ಸೇಂಟ್ ಜಾನ್ಸ್: ಆಂಟಿಗುವಾ*
* *ಗಯಾನಾ ಕ್ರಿಕೆಟ್ ಸ್ಟೇಡಿಯಂ ಜಾರ್ಜ್ಟೌನ್: ಗಯಾನಾ*
* *ಕೆನ್ಸಿಂಗ್ಟನ್ ಓವಲ್ ಬ್ರಿಡ್ಜ್ಟೌನ್: ಬಾರ್ಬಡೋಸ್*
* *ಮಿಂಡೂ ಫಿಲಿಪ್ ಪಾರ್ಕ್ Castries: ಸೇಂಟ್ ಲೂಸಿಯಾ*
* *ಅಲ್ಬಿಯನ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಬರ್ಬೀಸ್: ಗಯಾನಾ*
===========

* *ಶ್ರೀಲಂಕಾದ ಕ್ರೀಡಾಂಗಣಗಳು*

        *********
* *ಕೊಲಂಬೊ ಕ್ರಿಕೆಟ್ ಕ್ಲಬ್ ಗ್ರೌಂಡ್: ಕೊಲಂಬೊ*
* *ಗಲ್ಲಿ ಅಂತರಾಷ್ಟ್ರೀಯ ಕ್ರೀಡಾಂಗಣ: ಗಲ್ಲಿ*
* *ಪಿ.ಸಾರವಣಟ್ಟು ಕ್ರೀಡಾಂಗಣ: ಕೊಲಂಬೊ*
* *ಆರ್.ಪ್ರೆಮಾದಾಸ ಕ್ರೀಡಾಂಗಣ: ಕೊಲಂಬೊ*
* *ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ ಗ್ರೌಂಡ್-ಕೊಲಂಬೊ*
==============

*ದಕ್ಷಿಣ ಆಫ್ರಿಕಾದಲ್ಲಿ ಕ್ರೀಡಾಂಗಣಗಳು*

    **********
* *ಕಿಂಗ್ಸ್ಮೀಡ್: ಡರ್ಬನ್*
* *ಹೊಸ ವಾಂಡರರ್ಸ್ ಕ್ರೀಡಾಂಗಣ: ಜೋಹಾನ್ಸ್ಬರ್ಗ್*
* *ನ್ಯೂಲ್ಯಾಂಡ್ಸ್: ಕೇಪ್ ಟೌನ್*
* *ಸೇಂಟ್ ಜಾರ್ಜ್ಸ್ ಪಾರ್ಕ್: ಪೋರ್ಟ್ ಎಲಿಜಬೆತ್*
* *ಸೆಂಚುರಿಯನ್ ಸೂಪರ್ ಸ್ಪೋರ್ಟ್ ಪಾರ್ಕ್: ಪ್ರಿಟೋರಿಯಾ*
===============

*ಜಿಂಬಾಬ್ವೆ ಕ್ರೀಡಾಂಗಣಗಳು*

      ***********
* *ಬುಲಾವೇಯೋ ಅಥ್ಲೆಟಿಕ್ ಕ್ಲಬ್: ಬುಲಾವೇಯೋ*
* *ಹರಾರೆ ಸ್ಪೋರ್ಟ್ಸ್ ಕ್ಲಬ್: ಹರಾರೆ*
* *ಕ್ವೆಕ್ವೆ ಸ್ಪೋರ್ಟ್ಸ್ ಕ್ಲಬ್: ಕ್ವೆಕ್ವೆ*
* *ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್: ಬುಲಾವೇಯೋ*
===========

*ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಕ್ರೀಡಾಂಗಣಗಳು*

     ***********
* *ಶೇಖ್ ಜಾಯೆದ್ ಕ್ರೀಡಾಂಗಣ: ಅಬುಧಾಬಿ*
* *ಶಾರ್ಜಾ ಕ್ರಿಕೆಟ್ ಕ್ರೀಡಾಂಗಣ: ಶಾರ್ಜಾ*
==============

ರಾಷ್ಟ್ರೀಯ ವಿಜ್ಞಾನ ದಿನ

ರಾಷ್ಟ್ರೀಯ ವಿಜ್ಞಾನ ದಿನ ಪೆ.೨೮




*ಇಂದು ರಾಷ್ಟ್ರೀಯ ವಿಜ್ಞಾನ ದಿನ*

*ಜೈ ವಿಜ್ಞಾನ್, ಜೈ ವಿಜ್ಞಾನ್*
 *ರಾಷ್ಟ್ರೀಯ ವಿಜ್ಞಾನ ದಿನ:  ದೇಶಾದ್ಯಂತ ಫೆಬ್ರವರಿ 28ಅನ್ನು ರಾಷ್ಟ್ರೀಯ ವಿಜ್ಞಾನ ದಿನವಾಗಿ ಆಚರಿಸಲಾಗುತ್ತದೆ. 1999ರಿಂದ ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ರಾಷ್ಟ್ರೀಯ ವಿಜ್ಞಾನ ದಿನದಂದು ಚರ್ಚಿಸಲಾಗುವ ವಿಷಯವನ್ನು ಮೊದಲೇ ಘೋಷಿಸುತ್ತದೆ. ಏತಕ್ಕಾಗಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ ಎಂಬ ಬಗ್ಗೆ ಕಿರು ಮಾಹಿತಿ ಇಲ್ಲಿದೆ.*

*ಏನಿದು ರಾಷ್ಟ್ರೀಯ ವಿಜ್ಞಾನ ದಿನ*


*ವಿಜ್ಞಾನ ಜಗತ್ತಿನಲ್ಲಿ ಭಾರತವನ್ನು ಮೇರು ಶಿಖರಕ್ಕೆ ಕೊಂಡೊಯ್ದ ಸರ್‌ ಸಿ.ವಿ.ರಾಮನ್‌ ಅವರ ಅಪೂರ್ವ ಸಾಧನೆಗಳ ನೆನಪಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ. ರಾಮನ್‌ ಅವರು ಬೆಂಗಳೂರಿನ ಸೆಂಟ್ರಲ್‌ ಕಾಲೇಜಿನ ಸಭಾಂಗಣದಲ್ಲಿ ಕ್ರಿ.ಶ.1928ರ ಫೆಬ್ರವರಿ 28ರಂದು ಬೆಳಕಿನ ಚದುರಿವಿಕೆಯಲ್ಲಿ ಸಾಮಗ್ರಿಗಳ ಗುಣಲಕ್ಷ ಣಗಳ ಪರಿಣಾಮದ ಬಗ್ಗೆ ಹೊಸ ಹೊಳಹೊಂದನ್ನು ಪ್ರತಿಪಾದಿಸಿದ ದಿನ. ಮುಂದಿನ ದಿನಗಳಲ್ಲಿ ಅದು ರಾಮನ್‌ ಪರಿಣಾಮವೆಂದೇ ಪ್ರಸಿದ್ಧವಾಯಿತು. ಈ ಹಿನ್ನೆಲೆಯಲ್ಲಿ 1987 ಫೆಬ್ರವರಿ 28ರಂದು ದೇಶಾದ್ಯಂತ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತಿದೆ.*

👉 *ಆಚರಣೆಯ ಉದ್ದೇಶ*


*ವಿಜ್ಞಾನ ಹಾಗೂ ನಮ್ಮ ಜೀವನದಲ್ಲಿ ಅದರ ಮಹತ್ವದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ರಾಷ್ಟ್ರೀಯ ವಿಜ್ಞಾನ ದಿನ ಆಚರಣೆಯ ಉದ್ದೇಶ, ಉಪನ್ಯಾಸಗಳು, ಚರ್ಚಾಸ್ಪರ್ಧೆಗಳು, ರಸಪ್ರಶ್ನೆ, ವಸ್ತುಪ್ರದರ್ಶನ ಹೀಗೆ ನಾನಾ ಚಟುವಟಿಕೆಗಳನ್ನು ದೇಶದ ವಿವಿಧೆಡೆ ಹಮ್ಮಿಕೊಳ್ಳಲಾಗುತ್ತದೆ. ಪ್ರತೀ ವರ್ಷ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಚಟುವಟಿಕೆಗಳನ್ನು ಒಂದು ನಿರ್ದಿಷ್ಟ ವಿಷಯದ ಸುತ್ತ ಆಯೋಜಿಸಲಾಗುತ್ತದೆ.*

🔬👉 *ರಾಮನ್‌ ಕುರಿತಂತೆ*


*ವಿಜ್ಞಾನದಲ್ಲಿ ನೊಬೆಲ್‌ ಪ್ರಶಸ್ತಿ ಪಡೆದ ಏಷ್ಯಾದ ಮೊತ್ತಮೊದಲ ವಿಜ್ಞಾನ ಎಂಬ ಹೆಗ್ಗಳಿಕೆಗೆ ಪಾತ್ರರಾದ ಸಿ.ವಿ. ರಾಮನ್‌ ಅವರ ಪೂರ್ಣ ಹೆಸರು ಚಂದ್ರಶೇಖರ ವೆಂಕಟರಾಮನ್‌ . ಜನಿಸಿದ್ದು ತಮಿಳುನಾಡಿನ ತಿರುಚಿನಾಪಳ್ಳಿಯಲ್ಲಿ 1888ರ ನವೆಂಬರ್‌ 7ರಂದು . ಅವರ ತಂದೆ ಚಂದ್ರಶೇಖರ್‌ ಅಯ್ಯರ್‌ ಗಣಿತ ಹಾಗೂ ಭೌತವಿಜ್ಞಾನದ ಶಿಕ್ಷಕರಾಗಿದ್ದರು. ರಾಮನ್‌ ಅವರು ಕಲ್ಕತಾ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ, ಮುಂದೆ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಸೈನ್ಸ್‌ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.*

*ರಾಮನ್‌ ಪರಿಣಾಮ*


*ಒಮ್ಮೆ ಹಡಗಿನಲ್ಲಿ ಪ್ರಯಾಣಿಸುವಾಗ ರಾಮನ್‌ ಅವರಿಗೆ ಸಮುದ್ರ ಏಕೆ ಯಾವಾಗಲೂ ನೀಲಿಯಾಗಿಯೇ ಕಾಣುತ್ತದೆ ಎಂಬ ಪ್ರಶ್ನೆ ಎದುರಾಯಿತಂತೆ. ಅದು ಆಕಾಶದ ಬಣ್ಣದ ಪ್ರತಿಫಲನವೋ ಅಥವಾ ಈ ನೀಲಿ ಬಣ್ಣದ ಹಿಂದೆ ಬೇರೇನಾದರೂ ಗುಟ್ಟು ಅಡಗಿದೆಯೋ ಎಂದು ಪತ್ತೆಮಾಡಲು ಹೊರಟ ರಾಮನ್‌ ಸೂರ್ಯನ ಬೆಳಕು ನೀರಿನಲ್ಲಿ ಚದುರಿಹೋಗುವುದೇ ಸಮುದ್ರದ ನೀರು ನೀಲಿಯಾಗಿ ಕಾಣಲು ಕಾರಣ ಎಂಬ ವಿಷಯ ಕಂಡುಹಿಡಿದರು. ಇದೇ ಅಂಶ ಮುಂದೆ ಅವರು ತಮ್ಮ ಅಧ್ಯಯನವನ್ನು ಮುಂದುವರೆಸಲು ಪ್ರೇರಣೆಯಾಯಿತು. ಕೋಲ್ಕತಾದ ಇಂಡಿಯನ್‌ ಅಸೋಸಿಯೇಷನ್‌ ಫಾರ್‌ ಕಲ್ಟಿವೇಷನ್‌ ಆಫ್‌ ಸೈನ್ಸ್‌ನಲ್ಲಿ ರಾಮನ್‌ ಅವರು ತಮ್ಮ ಸಹೋದ್ಯೋಗಿಗಳೊಡನೆ ನಡೆಸಿದ ಅಧ್ಯಯನಗಳ ಪರಿಣಾಮವೇ ರಾಮನ್‌ ಪರಿಣಾಮದ ಶೋಧ. ಇದೇ ಸಾಧನೆಗಾಗಿ ಅವರಿಗೆ 1930ನೇ ಇಸವಿಯಲ್ಲಿ ನೊಬೆಲ್‌ ಪುರಸ್ಕಾರ ನೀಡಿ ಗೌರವಿಸಲಾಯಿತು. ಇದು ವಿಜ್ಞಾನ ಕ್ಷೇತ್ರದಲ್ಲಿ ಭಾರತಕ್ಕೆ ದೊರೆತ ಮೊತ್ತಮೊದಲ ನೊಬೆಲ್‌ ಪುರಸ್ಕಾರವೂ ಹೌದು.*

  🔬✍ *ಫೆಬ್ರುವರಿ 28 ರಂದು ದೇಶದಾದ್ಯಂತ ವಿಜ್ಞಾನದ ದಿನವನ್ನಾಗಿ ಆಚರಿಸುತ್ತೇವೆ. ಅಂದು ಡಾ: ಸರ್. ಸಿ.ವಿ. ರಾಮನ್ ರವರು ‘ರಾಮನ್ ಪರಿಣಾಮ’ ಎಂಬ ಪ್ರಕ್ರಿಯೆಯನ್ನು ಪ್ರಾಯೋಗಿಕವಾಗಿ ನಿರೂಪಿಸಿ ತೋರಿಸಿದ ದಿನ.*

👉 *ರಾಮನ್ ಪರಿಣಾಮದ ಮಹತ್ವ :*


*ಇಂದು `ರಾಮನ್ ಪರಿಣಾಮ’ ದ್ರವ್ಯದ ಅಣುರಚನೆಯನ್ನು ನಿರ್ಧರಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. ಮೈಕ್ರೋವೇವ್, ಲೇಸರ್, ಇನ್ಫ್ರಾರೆಡ್, ಅಲ್ಟ್ರಾ ವಯೋಲೆಟ್, ಮತ್ತು ಕ್ಷ-ಕಿರಣ ರಾಮನ್ ಸ್ಪೆಕ್ಟ್ರೋಸ್ಕೋಪಿ ಇಂದು ಮುಂಚೂಣಿಯಲ್ಲಿರುವ ಸಂಶೋಧನಾ ಕ್ಷೇತ್ರಗಳು. ಭೌತ, ಜೀವ, ರಸಾಯನ ಮತ್ತು ಖಗೋಳ ವಿಜ್ಞಾನ ಹಾಗೂ ನ್ಯಾನೋ ತಂತ್ರಜ್ಞಾನದ ಹಲವು ವಿಭಾಗಗಳಲ್ಲಿ ಇದರ ಪರಿಣಾಮವಿದೆ.*

*ರಾಮನ್ ಪರಿಣಾಮ ಕುರಿತು ಆಲ್ಬರ್ಟ್ ಐನ್ಸ್ಟೀನ್ ಸರಳವಾಗಿ ಈ ರೀತಿ ಹೇಳಿದ್ದಾರೆ: “ವಸ್ತುವಿನಲ್ಲಿ ಬೆಳಕಿನ ಚದುರುವಿಕೆಯಿಂದ ಬೆಳಕಿನ ಶಕ್ತಿಯಲ್ಲಾಗುವ ಬದಲಾವಣೆಯನ್ನು ಗುರುತಿಸಿದವರಲ್ಲಿ ರಾಮನ್ ಮೊದಲಿಗರು. ನನಗಿನ್ನೂ ಸ್ಪಷ್ಟವಾಗಿ ನೆನಪಿದೆ – ಬರ್ಲಿನ್ನಿನ ಭೌತಶಾಸ್ತ್ರ ಗೋಷ್ಟಿಯಲ್ಲಿ ಭಾಗವಹಿಸಿದ ನಮ್ಮೆಲ್ಲರ ಮೇಲೆ ಈ ಆವಿಷ್ಕಾರ ಗಾಢ ಪರಿಣಾಮ ಬೀರಿತ್ತು”.*

*ಇಂದಿನ ದುರಂತವೆಂದರೆ, ‘ರಾಮನ್ ಪರಿಣಾಮ’ ವನ್ನು ಈ ದೇಶದಲ್ಲಿಯೇ ಆವಿಷ್ಕರಿಸಿದ್ದರೂ ಕೂಡ, ಈ ಪರಿಣಾಮದ ಆಧಾರದಲ್ಲಿ ಕಾರ್ಯನಿರ್ವಹಿಸುವ ಲೇಸರ್ ಉಪಕರಣಗಳನ್ನು ತಯಾರಿಸಲಾಗದೇ ಇಂದಿಗೂ ಆಮದು ಮಾಡಿಕೊಳ್ಳುತ್ತಿದ್ದೇವೆ.*

✍  *ಸ್ವಾವಲಂಬಿ ಸಂಶೋಧನಾಲಯಗಳ ಸ್ಥಾಪನೆ :*


*ಬಂಗಾಳದಲ್ಲಿ ರಾಜ್ಯ ವಿಭಜನೆ ವಿರುದ್ದ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಟಗಳು ತೀವ್ರಗೊಂಡಿದ್ದ ಕಾಲವದು. ಇದರಿಂದಾಗಿ ಪ್ರತಿಷ್ಟಿತ ವಿಜ್ಞಾನ ಸಂಸ್ಥೆಗಳಲ್ಲಿ ಭಾರತೀಯರೇ ಹುದ್ದೆ ಅಲಂಕರಿಸಬೇಕೆಂದು ಕೋಲ್ಕತ್ತಾ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ತೀರ್ಮಾನಿಸಿತ್ತು. ಇದರಿಂದಾಗಿ ಪ್ರತಿಭಾನ್ವಿತ ರಾಮನ್ರವರು ತಾವು ಕೆಲಸ ಮಾಡುತ್ತಿದ್ದ ಐಸಿಎಸ್ ಹುದ್ದೆಗೆ ರಾಜೀನಾಮೆ ನೀಡಿ ಪ್ರೊಫೆಸರ್ ಹುದ್ದೆಗೆ ವಿಶ್ವವಿದ್ಯಾಲಯ ಸೇರಿದರು.*

*1921 ರಲ್ಲಿ ಇಂಗ್ಲೆಂಡಿನಲ್ಲಿ ವೈಜ್ಞಾನಿಕ ಸಮ್ಮೇಳನದಲ್ಲಿ ಭಾಗವಹಿಸಿ ಹಡಗಿನಲ್ಲಿ ಭಾರತಕ್ಕೆ ರಾಮನ್ ಪ್ರಯಾಣಿಸುತ್ತಿದ್ದರು. ಆಗವರು ಕೋಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಅಧ್ಯಾಪಕರಾಗಿದ್ದರು. ಅಷ್ಟರಲ್ಲಾಗಲೇ ಅವರು ದೃಗ್ವಿಜ್ಞಾನ ಮತ್ತು ಧ್ವನಿ ವಿಜ್ಞಾನಗಳ ಅಧ್ಯಯನದಲ್ಲಿ ನಡೆಸಿರುವ ಸಂಶೋಧನೆ ಕುರಿತು ಇಂಗ್ಲೆಂಡ್ನ ಜೆ.ಜೆ. ಥಾಮ್ಸನ್ ಮತ್ತು ಲಾರ್ಡ್ ರುದರ್ಪೋರ್ಡರಂತಹ ವಿಜ್ಞಾನಿಗಳ ಗಮನ ಸೆಳೆದರು.


ಭಾರತೀಯ ಸಂವಿಧಾನ ಕುರಿತ ಸಾಮಾನ್ಯಜ್ಞಾನ


1) ಅಶೋಕ ಚಕ್ರದ ಸಂಕೇತವೇನು?
 * ನಿರಂತರ ಚಲನೆ.

2) ರಾಷ್ಟ್ರಧ್ವಜವು ಯಾವ ಆಕಾರದಲ್ಲಿದೆ?
 * ಆಯತ.

3) ಲೋಕ ಅದಾಲತ್ ಇದರ ಮತ್ತೊಂದು ಹೆಸರೇನು?
 * ಜನತ ನ್ಯಾಯಾಲಯ.

4) ಸತ್ಯಮೇವ ಜಯತೆ ಇರುವ ಉಪನಿಷತ್ ಯಾವುದು?
 * ಮಂಡೋಕ ಉಪನಿಷತ್.

5) ರಾಷ್ಟ್ರೀಯ ಪಂಚಾಗದಲ್ಲಿ ವರ್ಷದ ಮೊದಲ ತಿಂಗಳು/ಮಾಸ ಯಾವುದು?
 * ಚೈತ್ರಮಾಸ.

6) ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶವೆಂದು ಘೋಷಣೆಯಾದ ವರ್ಷ ಯಾವುದು?
 * 01/02/1992.

7) ಭಾರತ ಗಣರಾಜ್ಯದ ಅತಿ ಉನ್ನತ ಅಧಿಕಾರಿ ಯಾರು?
 * ರಾಷ್ಟ್ರಪತಿ.

8) ಎಂ.ಪಿ. ವಿಸ್ತರಿಸಿರಿ?
 * ಮೆಂಬರ್ ಆಫ್ ಪಾರ್ಲಿಮೆಂಟ್.

9)ಭಾರತದ ಪ್ರಥಮ ಪ್ರಜೆ ಯಾರು?
 * ರಾಷ್ಟ್ರಪತಿ.

10) ದೇಶದ ಅತೀ ಉನ್ನತ ನ್ಯಾಯಾಲಯ ಯಾವುದು?
 * ಸರ್ವೋಚ್ಚ ನ್ಯಾಯಾಲಯ (ಸುಪ್ರೀಂಕೊರ್ಟ್).

11) ಸಂವಿಧಾನದ ಹೃದಯ ಯಾವುದು?
 * ಪ್ರಸ್ತಾವನೆ/ಪೀಠಿಕೆ.

12) ಉಪರಾಷ್ಟ್ರಪತಿಯ ಅಧಿಕಾರವಧಿ ಎಷ್ಟು ವರ್ಷ?
 * 5 ವರ್ಷಗಳು.

13) ರಾಜ್ಯಸಭೆಯ ಸಭಾಧ್ಯಕ್ಷರು ಯಾರು?
  * ಉಪ ರಾಷ್ಟ್ರಪತಿ.

14) ರಾಷ್ಟ್ರೀಯ ರಕ್ಷಣಾ ಕಾಲೇಜು ಇರುವ ಸ್ಥಳ ಯಾವುದು?
 * ನವದೆಹಲಿ.

15) ಭೂಸೇನೆಯ ಪ್ರಧಾನ ಕಛೇರಿ ಎಲ್ಲಿದೆ?
 * ದೆಹಲಿ.

16) ವಾಯುಪಡೆಯ ಮುಖ್ಯಸ್ಥನನ್ನು ಏನೆಂದು ಕರೆಯುವರು?
 * ಏರ್ ಚೀಫ್ ಮಾರ್ಷಲ್.

17) ಭಾರತದ ರಾಷ್ಟ್ರಪತಿಯ ಅಧಿಕೃತ ನಿವಾಸದ ಹೆಸರೇನು?
 * ರಾಷ್ಟ್ರಪತಿ ಭವನ.

18) ರಾಜ್ಯಸಭೆಯ ಸದಸ್ಯರನ್ನು ಯಾರು ಆಯ್ಕೆ ಮಾಡುತ್ತಾರೆ?
 * ವಿಧಾನಸಭೆಯ ಸದಸ್ಯರು (238).

19) ನೆಹರುರವರ ಪ್ರೀತಿಯ ಹೂ ಯಾವುದು?
 * ಕೆಂಪು ಗುಲಾಬಿ.

20) ಕರ್ನಾಟಕದಲ್ಲಿ ಉಚ್ಚ ನ್ಯಾಯಾಲಯ ಎಲ್ಲಿದೆ?
 * ಬೆಂಗಳೂರು.

21) ಸಿಬರ್ಡ್ ನೌಕಾನೆಲೆ ಎಲ್ಲಿದೆ?
 * ಕಾರವಾರ.

22) ವಿಶ್ವದಲ್ಲಿಯೇ 2 ನೇಯ ಅತಿ ದೊಡ್ಡ ಭೂಸೇನೆ ಇರುವ ದೇಶ ಯಾವುದು?
 * ಭಾರತ.

23) ಎನ್.ಸಿ.ಸಿ ವಿಸ್ತರಿಸಿರಿ?
 * ನ್ಯಾಷನಲ್ ಕ್ಯಾಡೇಟ್ ಕೋರ್.

24) ಸಂಸತ್ತಿನ ಕೆಳಮನೆ ಯಾವುದು?
 * ಲೋಕಸಭೆ.

25) ಲೋಕಸಭೆಯ ಸದಸ್ಯನಾಗಲು ಇರಬೇಕಾದ ಕನಿಷ್ಟ ವರ್ಷವೆಷ್ಟು?
 * 25.

26) ರಾಷ್ಟ್ರಪತಿ ಆಗಲು ಇರಬೇಕಾದ ಕನಿಷ್ಟ ವಯಸ್ಸು ಎಷ್ಟು?
 * 35.

27) ವಿಧಾನ ಪರಿಷತ್ತಿನ ಸದಸ್ಯರ ಅಧಿಕಾರವಧಿ ಎಷ್ಟು ವರ್ಷಗಳು?
 * 6.

28) ಭಾರತದಲ್ಲಿ ತನ್ನದೇ ಯಾದ ಆಂತರಿಕ ಸಂವಿಧಾನ ಹೊಂದಿರುವ ರಾಜ್ಯ ಯಾವುದು?
 * ಜಮ್ಮು&ಕಾಶ್ಮೀರ.

29) ಭಾರತದ ಸರ್ವೋಚ್ಚ ನ್ಯಾಯಾಲಯ ಎಲ್ಲಿದೆ?
 * ದೆಹಲಿ.

30) ನಮ್ಮ ರಾಷ್ಟ್ರಧ್ವಜದ ಉದ್ಧ- ಅಗಲಗಳ ಅನುಪಾತವೇನು?
 * 3:2.

31) ಭಾರತೀಯ ಸಂಸ್ಕೃತಿಯ ನಿಲುವೇನು?
 * ಬಾಳು,ಬಾಳುಗೊಡು.

32) ಭಾರತ ದೇಶದಲ್ಲಿ ಒಟ್ಟು ಎಷ್ಟು ಉಚ್ಚ ನ್ಯಾಯಾಲಯಗಳಿವೆ?
 * 24.

33) ರಾಷ್ಟ್ರಪತಿ ಭವನದಲ್ಲಿರುವ ಕೊಠಡಿಗಳು ಎಷ್ಟು?
 * 340.

34)  ರಾಷ್ಟ್ರಪತಿ ಭವನ ಪೂರ್ಣಗೊಂಡ ವರ್ಷ?
 * 1929.

35ಎಮ್.ಎಲ್.ಸಿ ವಿಸ್ತರಿಸಿರಿ?
 * ಮೆಂಬರ್ ಆಫ್ ಲೆಜೆಸ್ಲೆಟಿವ್ ಕೌನ್ಸಿಲ್.

36) ಜಗತ್ತಿನಲ್ಲಿಯೇ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಯಾವುದು?
 * ಭಾರತ.

37) ಭಾರತದ ಸಂವಿಧಾನದಲ್ಲಿನ ಪರಿಚ್ಛೇದಗಳು ಎಷ್ಟು?
 * 12.

38) ವ್ಯಕ್ತಿ ತನ್ನ ದೇಶಕ್ಕಾಗಿ ಮಾಡಬೇಕಾದ ಕೆಲಸವೇ -----?
 * ಮೂಲಭೂತ ಕರ್ತವ್ಯ.

39 ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರು ಯಾರು?
 * ಡಾ.ಬಿ.ಆರ್.ಅಂಬೇಡ್ಕರ್.

40) ಕರ್ನಾಟಕದಲ್ಲಿ ಪಶುಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದದ್ದು ಯಾವಾಗ?
 * 1964.

41) ವಿಧಾನ ಸಭೆಯ ಸದಸ್ಯರ ಅಧಿಕಾರವಧಿ ಎಷ್ಟು ವರ್ಷಗಳು?
 * 5.

42) ರಾಷ್ಟ್ರೀಯ ಪಂಚಾಂಗವನ್ನು ಸಿದ್ದಗೊಳಿಸಿದ ವಿಜ್ಞಾನಿ ಯಾರು?
 * ಮೇಘನಾದ ಸಹಾ.

43) ನಮ್ಮ ದೇಶದ ಹಾಡು ಯಾವುದು?
 * ವಂದೇ ಮಾತರಂ.

44) "ವಂದೇ ಮಾತರಂ" ಗೀತೆ ರಚಿಸಿದವರು ಯಾರು?
 * ಬಂಕಿಮ ಚಂದ್ರ ಚಟರ್ಜಿ.

45) ಭಾರತದ ಸಂವಿಧಾನವನ್ನು ಸಿದ್ದಪಡಿಸಿದ ವಿಶೇಷ ಸಭೆ ಯಾವುದು?
 * ಸಂವಿಧಾನ ಸಭೆ.

46) ನೇರವಾಗಿ ಸಂವಿಧಾನದಿಂದ ನಾಗರಿಕರಿಗೆ ಕೊಡಲ್ಪಟ್ಟ ಹಕ್ಕುಗಳೇ ------?
 * ಮೂಲಭೂತ ಹಕ್ಕುಗಳು.

47) ಭಾರತದ ಸಂವಿಧಾನವು 1950 ರಿಂದ 2006 ರ ವರೆಗೆ ಎಷ್ಟು ಬಾರಿ ತಿದ್ದುಪಡಿ ಮಾಡಲಾಗಿದೆ?
 * 97 ಬಾರಿ.

48) ಭಾರತದಲ್ಲಿ ಎರಡು ಸದನಗಳನ್ನು ಒಳಗೊಂಡಿರುವ ರಾಜ್ಯಗಳು ಎಷ್ಟು?
 * 6 (ದ್ವಿಸದನ ಪದ್ದತಿ).

49) ರಾಜ್ಯ ಸಭೆಯ ಸದಸ್ಯರಾಗಲು ಇರಬೇಕಾದ ಕನಿಷ್ಟ ವಯಸ್ಸು ಎಷ್ಟು?
 * 30 ವರ್ಷಗಳು.

50) ಎಮ್.ಎಲ್.ಎ ವಿಸ್ತರಿಸಿರಿ?
 * ಮೆಂಬರ್ ಆಫ್ ಲೆಜೆಸ್ಲೆಟಿವ್ ಆಸೆಂಬ್ಲಿ.

51) ನೌಕಾದಳದ ಮುಖ್ಯಸ್ಥರನ್ನು ಏನೆಂದು ಕರೆಯುವರು?
 * ಆಡ್ಮಿರಲ್.

52) ಪ್ರಧಾನಮಂತ್ರಿಯನ್ನು ನೇಮಕ ಮಾಡುವವರು ಯಾರು?
 * ರಾಷ್ಟ್ರಪತಿ.

53ಸಂವಿಧಾನವನ್ನು ಅಂಗೀಕರಿಸಿದ ವರ್ಷ ಯಾವುದು?
 * 26 ನವೆಂಬರ್ 1949.

54) ಸಂವಿಧಾನ ಸಭೆ ಪ್ರಥಮ ಅಧಿವೇಶನ ನಡೆಸಿದ ವರ್ಷ?
 * 1946.


JNAANASAMPAD

ನಳಂದ ವಿಶ್ವವಿದ್ಯಾಲಯ

ಭಾರತದ ಪುರಾತನ ಕಾಲದ ಜ್ಞಾನದ ಖನಜ  "ನಾಲಂದಾ ವಿಶ್ವವಿದ್ಯಾಲಯ"  ━━━━━━━━━━━━━━━━━━━━━━ —ತಕ್ಷಶಿಲಾ ತರುವಾಯ ಪ್ರಖ್ಯಾತಿಗೆ ಬಂದ ನಾಲಂದಾ ವಿಶ್ವ...

Current post